ಪರಿಸ್ಥಿತಿಯನ್ನು ನಿಭಾಯಿಸಲು ಪಂಜಾಬ್ ಸರ್ಕಾರ ಸಿದ್ಧತೆ: ಸಿಎಂಒ

ಪರಿಸ್ಥಿತಿಯನ್ನು ನಿಭಾಯಿಸಲು ಪಂಜಾಬ್ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಶುಕ್ರವಾರ ಸಚಿವರು ಗಡಿ ಜಿಲ್ಲೆಗಳಲ್ಲಿನ ತುರ್ತು ಸೇವೆಗಳನ್ನು ಪರಿಶೀಲಿಸಲಿದ್ದಾರೆ. ಆಸ್ಪತ್ರೆಗಳು, ಅಗ್ನಿಶಾಮಕ ಕೇಂದ್ರಗಳನ್ನು, ಪಡಿತರ ಮತ್ತು ತುರ್ತು ಸೇವೆಗಳ ಲಭ್ಯತೆಯನ್ನು ಪರಿಶೀಲಿಸಲಿದ್ದಾರೆ. ಸಂಪುಟ ಸಚಿವರು ಗಡಿ ಜಿಲ್ಲೆಗಳನ್ನು ತಲುಪಲಿದ್ದಾರೆ, ಸಂಪುಟ ಸಭೆಯ ನಂತರ, 10 ಸಚಿವರು ಗಡಿ ಪ್ರದೇಶಗಳಿಗೆ ತೆರಳಲಿದ್ದಾರೆ. ಸಚಿವರಾದ ಲಾಲ್ ಚಂದ್ ಕಟರುಚಕ್ ಮತ್ತು ಡಾ. ರಾವ್ಜೋತ್ ಸಿಂಗ್ ಗುರುದಾಸ್ಪುರಕ್ಕೆ ತೆರಳಲಿದ್ದಾರೆ. ಸಚಿವರಾದ ಕುಲದೀಪ್ ಧಲಿವಾಲ್ ಮತ್ತು ಮೊಹಿಂದರ್ ಭಗತ್ ಅಮೃತಸರದ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ: ಪಂಜಾಬ್ ಸಿಎಂಒ

Update: 2025-05-09 04:50 GMT

Linked news