ಹೋರಾಟ ಹತ್ತಿಕ್ಕಲು ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆ: ಯತ್ನಾಳ್‌

ಜನಸಂದಣಿ ನಿಯಂತ್ರಣ ವಿಧೇಯಕವು ಹೋರಾಟವನ್ನು ಹತ್ತಿಕ್ಕಲು ತರಲಾಗುತ್ತಿದ್ದು, ಬ್ರಿಟಿಷ್‌ ಕಾನೂನಿಗಿಂತ ಹೆಚ್ಚು ಕಠಿಣ ಕಾನೂನು ಇದಾಗಿದೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ದ ಕಿಡಿಕಾರಿದರು. 

ಸರ್ಕಾರದ ವಿರುದ್ಧ ಅನೇಕ ಹೋರಾಟಗಳು ಆಗುತ್ತವೆ. ಬೆಳಗಾವಿಯಲ್ಲಿ ಒಬ್ಬ ಅಧಿಕಾರಿ ಜಿಲ್ಲಾಧಿಕಾರಿ ಅನುಮತಿ ಪಡೆಯದೆ ಲಾಠಿ ಚಾರ್ಜ್ ಮಾಡಿಸಿದ್ದರು. ಬ್ರಿಟಿಷರು ಕೂಡ ಹೀಗೆ ಮಾಡುತ್ತಿದ್ದರು. ಈ ಕಾನೂನು ಬಂದರೆ ಹೋರಾಟ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾನೂನಿನಲ್ಲಿ ಪೊಲೀಸ್‌ಗೂ ಶಿಕ್ಷೆ ಪ್ರಮಾಣ ಆಗಬೇಕು. ಲಾಠಿ ಚಾರ್ಜ್ ಮಾಡಿದ್ದು ಏಕೆ ಎಂದು ಪೊಲೀಸರು ಉತ್ತರ ನೀಡಬೇಕು ಎಂದು ಹೇಳಬೇಕು ಎಂದರು.

 

Update: 2025-08-21 06:19 GMT

Linked news