ಶಾಮನೂರು ಬೆದರಿಕೆಗೆ ಎಂ.ಬಿ. ಪಾಟೀಲ್‌ ಉತ್ತರ

ಶಾಮನೂರು ಸಿಎಂಗೆ ಎಚ್ಚರಿಕೆ‌ ನೀಡಿದ ವಿಚಾರ

ಸಚಿವ ಎಂಬಿ.ಪಾಟೀಲ್ ಹೇಳಿಕೆ

ಆ ರೀತಿ ಯಾಕೆ ಹೇಳಿದ್ರು ಗೊತ್ತಿಲ್ಲ.

ಜಾತಿಗಣತಿಯನ್ನು ಒಪ್ಪಿಕೊಂಡರೆ  ಹಾಗೂ ಲಿಂಗಾಯತರನ್ನು ಮತ್ತು ಒಕ್ಕಲಿಗರನ್ನು ಎದುರುಹಾಕಿಕೊಂಡರೆ ಸರ್ಕಾರ ಬಿದ್ದುಹೋಗುತ್ತದೆ ಎಂಬ ಲಿಂಗಾಯತ ಮುಖಂಡ ಹಾಗೂ ಲಿಂಗಾಯತ ವೀರಶೈವ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಎಚ್ಚರಿಕೆ ಸಂಬಂಧ ಲಿಂಗಾಯತ ಮುಖಂಡರೇ ಆದ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.

"ಇವತ್ತು ಕ್ಯಾಬಿನೆಟ್ ಮೀಟಿಂಗ್ ಚರ್ಚೆ ಯಾಗುತ್ತೆ. ಸಚಿವರು ಸಮಾಜದಲ್ಲಿ‌ ಇರುವ ತಪ್ಪುಕಲ್ಪನೆ ಬಗ್ಗೆ ಚರ್ಚೆ ಮಾಡುತ್ತೇವೆ. ನಂತರ ತೀರ್ಮಾನ ಕೈಗೊಳ್ಳುತ್ತೇವೆ," ಎಂದು ಹೇಳಿದ್ದಾರೆ.

Update: 2025-04-17 07:33 GMT

Linked news