ಎನ್‌ಡಿಎ ಅಬ್ಬರದ ನಡುವೆ ಮುಖೇಶ್ ಸಹಾನಿಯ ವಿಐಪಿ ಪಕ್ಷಕ್ಕೆ ದೊಡ್ಡ ಹೊಡೆತ: 12ಕ್ಕೂ 12 ಸ್ಥಾನಗಳಲ್ಲಿ ಹಿನ್ನಡೆ

ವಿಐಪಿ ಮುಖ್ಯಸ್ಥ ಮುಖೇಶ್ ಸಹಾನಿ, ವಿರೋಧ ಪಕ್ಷಗಳ ಮಹಾಘಟಬಂಧನ್‌ದೊಂದಿಗೆ ಕಠಿಣ ಮಾತುಕತೆ ನಡೆಸಿ 12 ಸ್ಥಾನಗಳನ್ನು ಪಡೆದುಕೊಂಡಿದ್ದರು. ಡೆಪ್ಯುಟಿ ಮುಖ್ಯಮಂತ್ರಿ ಸ್ಥಾನವನ್ನೂ ಬೇಡಿಕೆಯಿಟ್ಟಿದ್ದ ಸಹಾನಿಗೆ ಈಗ ಸಂಪೂರ್ಣ ವಿರುದ್ದದ ಪರಿಸ್ಥಿತಿ ಎದುರಾಗಿದೆ. 2020ರಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದಿದ್ದ ವಿಐಪಿ, ಈ ಬಾರಿ ಎಲ್ಲ 12 ಕ್ಷೇತ್ರಗಳಲ್ಲೂ ಹಿನ್ನಡೆಯಲ್ಲಿದೆ. ಮಹಾಘಟಬಂಧನ್‌ ಕೇವಲ 38 ಸ್ಥಾನಗಳಲ್ಲಿ ಮುನ್ನಡೆ ಹೊಂದಿದ್ದರೆ, 243 ಸದಸ್ಯರ ವಿಧಾನಸಭೆಯಲ್ಲಿ ಎನ್‌ಡಿಎ 200ರ ಗಡಿ ದಾಟಿದೆ.

ಮುಖೇಶ್ ಸಹಾನಿ ಈ ಬಾರಿ ಚುನಾವಣೆಗೆ ತಾನೇ ಸ್ಪರ್ಧಿಸದೆ, ತಮ್ಮ ಸಹೋದರ ಸಂತೋಷ್ ಸಹಾನಿಯನ್ನು ಗೌರ ಬೌರಂ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಿದ್ದರು. ಆದರೆ ಅಲ್ಲಿ ಬಿಜೆಪಿ ಅಭ್ಯರ್ಥಿ ಸುಜಿತ್ ಕುಮಾರ್ 7,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಸಂತೋಷ್ ಹಾಗೂ ಆರ್‌ಜೆಡಿಯ ಅಫ್ಜಲ್ ಅಲಿ ಇಬ್ಬರೂ ಬಹುತೇಕ ಹಿಂದಿದ್ದಾರೆ.

ಮಲ್ಲಾಹ, ಸಹಾನಿ ಮತ್ತು ನಿಶಾದ್ ಸಮುದಾಯಗಳಲ್ಲಿ ತನ್ನ ಪ್ರಭಾವವನ್ನು ಬಳಸಿಕೊಂಡು ಬಿಹಾರದ ರಾಜಕೀಯದಲ್ಲಿ ವೇಗವಾಗಿ ಏರಿಕೆ ಕಂಡಿದ್ದ ಮುಖೇಶ್ ಸಹಾನಿ, 2020ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಿಂತು ನಾಲ್ಕು ಸ್ಥಾನಗಳನ್ನು ಗೆದ್ದಿದ್ದರು. ಆ ವೇಳೆ ವಿಐಪಿ ಆರು ಸ್ಥಾನಗಳಲ್ಲಿ ಎರಡನೇ ಸ್ಥಾನದಲ್ಲೂ ಬಂದಿತ್ತು, ಮೂರು ಕ್ಷೇತ್ರಗಳಲ್ಲಿ 7,000 ಮತಗಳಿಗಿಂತ ಕಡಿಮೆ ಅಂತರದಲ್ಲಿ ಸೋಲಿತ್ತು. ಪಕ್ಷದ ಒಟ್ಟು ಮತ ಶೇಕಡಾವಾರು 1.52 ಆಗಿತ್ತು. 

ಈ ಬಾರಿ ಪ್ರಚಾರದ ಅವಧಿಯಲ್ಲಿ "ಸನ್ ಆಫ್ ಮಲ್ಲಾಹ್" ಎಂದು ತಾನೇ ಬ್ರಾಂಡ್ ಮಾಡಿಕೊಂಡಿದ್ದ ಸಹಾನಿ, ಮಹಾಘಟಬಂಧನ್‌ದೊಳಗಿನ ಉದ್ವಿಗ್ನತಾ ವರದಿಗಳ ನಡುವೆಯೇ ತನ್ನ ಪ್ರಭಾವ ಹೆಚ್ಚುತ್ತಿದೆ ಎಂಬ ವಿಶ್ವಾಸ ಹೊಂದಿದ್ದರು. ರಾಜಕೀಯ ಪ್ರವೇಶಕ್ಕೂ ಮುನ್ನ ಅವರು ಬಾಲಿವುಡ್ ಸೆಟ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಮುಕೇಶ್ ಸಿನೆವೋರ್ಲ್ಡ್ ಪ್ರೈವೇಟ್ ಲಿಮಿಟೆಡ್ ಸ್ಥಾಪಿಸಿ, ನಂತರ ಬಿಹಾರಕ್ಕೆ ಮರಳಿ ಸಮುದಾಯ ಅಭಿವೃದ್ಧಿಗೆ ಕೆಲಸ ಆರಂಭಿಸಿದರು. ಅವರ ಈ ಏರಿಕೆ ಪ್ರಧಾನಿ ನರೇಂದ್ರ ಮೋದಿಯ ಗಮನಸೆಳೆದಿದ್ದು, ಸಹಾನಿಯನ್ನು ಬಿಜೆಪಿ ಸೇರಿಸಿಕೊಂಡು ಸ್ಟಾರ್ ಪ್ರಚಾರಕರನ್ನಾಗಿಸಿದ್ದರು. ಬಳಿಕ 2018ರಲ್ಲಿ ವಿಐಪಿ ಪಕ್ಷವನ್ನು ಪ್ರಾರಂಭಿಸಿದರು.

Update: 2025-11-14 09:41 GMT

Linked news