ಧರ್ಮಸ್ಥಳದಲ್ಲಿ ಪರಿವರ್ತನೆ ಕಾಲ ಆರಂಭ; ಮಾವಳ್ಳಿ ಶಂಕರ್
ಸೌಜನ್ಯ ಪ್ರಕರಣ ಆದಾಗ ಧರ್ಮಸ್ಥಳ ಉರಿಯುವ ಕೆಂಡದಂತಿತ್ತು. ಆಗ ನಾವು ಪ್ರತಿಭಟನೆಗೆ ಹೋಗಿದ್ದೆವು, ಧರ್ಮಸ್ಥಳದ ಪರಿವರ್ತನೆ ಕಾಲ ಆರಂಭವಾಗಿದೆ ಎಂದು ದಲಿತ ಸಂಘಟನೆ ಮುಖಂಡ ಮಾವಳ್ಳಿ ಶಂಕರ್ ಹೇಳಿದ್ದಾರೆ.
ಪಾಪದ ಕೊಡ ತುಂಬಿದೆ, ಈಗ ಅನುಭವಿಸಬೇಕಾಗುತ್ತದೆ. ನೂರಾರು ಎಕರೆ ಭೂಮಿಯನ್ನು ಲೂಟಿ ಮಾಡಿದ್ದಾರೆ. ಆಗ ಕಂದಾಯ ಸಚಿವರಾಗಿದ್ದ ಶ್ರೀನಿವಾಸ ಪ್ರಸಾದ್ ಗೆ ದೂರು ನೀಡಿದ್ದರೆ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಮುಖ್ಯಮಂತ್ರಿ ಹಾಗೂ ಸಚಿವರು ಯಾರಾಗಬೇಕೆಂದು ಮಠಾಧೀಶರು ನಿರ್ಣಯ ಮಾಡುವ ಪರಿಸ್ಥಿತಿಗೆ ಬಂದಿದೆ ಎಂದು ಬೇಸರ ಹೊರಹಾಕಿದರು.
Update: 2025-09-25 07:27 GMT