ಇದು ಯುರೋಪಿನ ವೆನಿಸ್‌ ನಗರವಲ್ಲ, ಜಲಾವೃತ ಬೆಂಗಳೂರು ; ನಿಖಿಲ್‌ ಲೇವಡಿ

ಬೆಂಗಳೂರು ಉಸ್ತುವಾರಿ ಸಚಿವರು ಭೂ ವ್ಯವಹಾರಗಳಲ್ಲಿ ತೊಡಗಿದ್ದಾರೆ. ಜನಸಾಮಾನ್ಯರು ಕೆಲಸ ಕಾರ್ಯಗಳಿಗೆ ತೆರಳಲು ಪ್ರವಾಹದ ನೀರಿನಲ್ಲಿ ಈಜಿಕೊಂಡು ತಲುಪುವ ಅನಿವಾರ್ಯ ಸ್ಥಿತಿ ಬಂದಿದೆ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Full View

'ಬ್ರ್ಯಾಂಡ್ ಬೆಂಗಳೂರು'? ಈಗ ಬೀಚ್ ಬೆಂಗಳೂರಾಗಿದೆ. ಹೊಣೆಗಾರಿಕೆ ಮರೆತಿರುವ ಕಾಂಗ್ರೆಸ್‌ ಸರ್ಕಾರದ 2 ವರ್ಷಗಳ ಅಭಿವೃದ್ಧಿ ಎಂದರೆ ಪ್ರವಾಹದಿಂದ ತುಂಬಿದ ರಸ್ತೆಗಳು, ತೇಲುವ ವಾಹನಗಳು. ಫ್ಲೈಓವರ್‌ ಮರೆತುಬಿಡಿ, ಬೆಂಗಳೂರಿನ ನಾಗರಿಕರಿಗೆ ಬೋಟ್‌ಗಳು ಅತ್ಯವಶ್ಯಕವಾಗಿದೆ. ಇದು "ಗ್ರೇಟರ್ ಬೆಂಗಳೂರು" ಅಥವಾ ಗ್ರೇಟರ್ ಬ್ಲಂಡರ್ ಗಳೂರು? ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕುಟುಕಿದ್ದಾರೆ.

ಮುಂಗಾರು ಬೆಂಗಳೂರನ್ನು ಶಾಶ್ವತ ಸರೋವರ ವನ್ನಾಗಿ ಪರಿವರ್ತಿಸುವ ಮೊದಲು ಎಚ್ಚರಗೊಳ್ಳಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

Update: 2025-05-19 11:03 GMT

Linked news