ಅಮೇಥಿ, ರಾಯ್ ಬರೇಲಿ  ಅಭ್ಯರ್ಥಿ ಕೆಲವೇ ದಿನಗಳಲ್ಲಿ ಪ್ರಕಟಣೆ: ಖರ್ಗೆ
x

ಅಮೇಥಿ, ರಾಯ್ ಬರೇಲಿ ಅಭ್ಯರ್ಥಿ ಕೆಲವೇ ದಿನಗಳಲ್ಲಿ ಪ್ರಕಟಣೆ: ಖರ್ಗೆ


ಗುವಾಹಟಿ, ಏಪ್ರಿಲ್‌ 27- ʻಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಕೆಲವೇ ದಿನಗಳಲ್ಲಿ ಪ್ರಕಟಿಸಲಾಗುವುದುʼ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ʻ ಭ್ರಷ್ಟರನ್ನು ಜೈಲಿಗೆ ಹಾಕಬೇಕು ಎನ್ನುತ್ತಿದ್ದ ಬಿಜೆಪಿ, ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವವರನ್ನು ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಸಭೆ ಅಥವಾ ವಿಧಾನಸಭೆಗೆ ಕಳುಹಿಸುತ್ತಿದೆʼ ಎಂದು ಕಿಡಿಕಾರಿದರು. ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕೇಳಿದಾಗ, ʻನೀವು ಇನ್ನೂ ಕೆಲವು ದಿನ ಕಾಯಬೇಕು. ಜನರಿಂದ ಅಭ್ಯರ್ಥಿಗಳ ಹೆಸರು ನನ್ನ ಬಳಿಗೆ ಬಂದಾಗ ಮತ್ತು ನಾನು ಅಧಿಸೂಚನೆಗೆ ಸಹಿ ಹಾಕಿದಾಗ, ಅದನ್ನು ಘೋಷಿಸಲಾಗುವುದುʼ ಎಂದು ಅವರು ಹೇಳಿದರು.

ರಾಹುಲ್‌ ಗಾಂಧಿ ಕೇರಳದ ವಯನಾಡಿನಿಂದ ಚುನಾವಣೆಗೆ ಸ್ಪರ್ಧಿಸಿರುವುದನ್ನು ಬಿಜೆಪಿ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿ,ʼಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾಣಿ ಎಷ್ಟು ಬಾರಿ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿದರು ಎಂದು ಬಿಜೆಪಿ ಹೇಳಲಿ’ ಎಂದು ಖರ್ಗೆ ಹೇಳಿದರು.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಉಲ್ಲೇಖಿಸಿ, ʻಪಕ್ಷದಲ್ಲಿ ಬೆಳೆದು ನಂತರ ಅದನ್ನು ತೊರೆಯುವ ಜನರಿಂದ ಕಾಂಗ್ರೆಸ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಕಾಂಗ್ರೆಸ್ ಹರಿಯುವ ನದಿ. ಕೆಲವರು ಅದನ್ನು ಬಿಟ್ಟು ಹೋದರೆ, ಏನೂ ಆಗುವುದಿಲ್ಲ’ ಎಂದು ಹೇಳಿದರು.

Read More
Next Story