ಕಾಲ ಪಕ್ವವಾಗಿದೆ: ರಾಜಕೀಯಕ್ಕೆ ಮತ್ತೆ ಮರಳುವ ಘೋಷಣೆ ಮಾಡಿದ  ಶಶಿಕಲಾ
x
ಶಶಿಕಲಾ

ಕಾಲ ಪಕ್ವವಾಗಿದೆ: ರಾಜಕೀಯಕ್ಕೆ ಮತ್ತೆ ಮರಳುವ ಘೋಷಣೆ ಮಾಡಿದ ಶಶಿಕಲಾ

“ಇದು ನಾನು ತಯಾರಿ ನಡೆಸುತ್ತಿರುವ ಕ್ಷಣ. ಆತಂಕಕ್ಕೆ ಯಾವುದೇ ಕಾರಣವಿಲ್ಲ, ಎಂದು ಭರವಸೆ ನೀಡಿದ ಶಶಿಕಲಾ ರಾಜ್ಯಾದ್ಯಂತ ವ್ಯಾಪಕ ಪ್ರವಾಸಗಳ ಮೂಲಕ ಪಕ್ಷವನ್ನು ಒಗ್ಗೂಡಿಸುವ ಪ್ರಯತ್ನಗಳ ಬಗ್ಗೆ ಸುಳಿವು ನೀಡಿದರು.


Click the Play button to hear this message in audio format

ತಮಿಳುನಾಡಿನ ವಿರೋಧ ಪಕ್ಷವಾದ ಎಐಎಡಿಎಂಕೆ ಲೋಕಸಭೆಯಲ್ಲಿ ಹೀನಾಯ ಸೋಲು ಕಂಡ ನಂತರ, ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಆಪ್ತರಾದ ವಿಕೆ ಶಶಿಕಲಾ ಅವರು ಮತ್ತೆ ರಾಜಕೀಯಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. 2026 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆಯನ್ನು ಮತ್ತೆ ಅಧಿಕಾರಕ್ಕೆ ತರುವ ಪ್ರತಿಜ್ಞೆ ಮಾಡಿದರು.

‘ವಿರೋಧ ಪಕ್ಷ’ವಾಗಿ ಹೆಜ್ಜೆ ಹಾಕುವ ಮೂಲಕ ಸರ್ಕಾರವನ್ನು ಹೊಣೆಗಾರರನ್ನಾಗಿಸುವ ಉದ್ದೇಶವಿದೆ ಎಂದು ಶಶಿಕಲಾ ಹೇಳಿದ್ದಾರೆ. ಎಡಪ್ಪಾಡಿ ಕೆ ಪಳನಿಸ್ವಾಮಿಯಿಂದ ಎಐಎಡಿಎಂಕೆಯ ನಾಯಕತ್ವವನ್ನು ಮರಳಿ ಪಡೆಯಲು ಹಲವಾರು ವಿಫಲ ಪ್ರಯತ್ನಗಳ ನಂತರ, ಶಶಿಕಲಾ ಚೆನ್ನೈನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಾ, ತನ್ನ ಪುನರುತ್ಥಾನಕ್ಕೆ ಸಮಯ ಪಕ್ವವಾಗಿದೆ ಎಂದು ತಿಳಿಸಿದ್ದಾರೆ.

“ಇದು ನಾನು ತಯಾರಿ ನಡೆಸುತ್ತಿರುವ ಕ್ಷಣ. ಆತಂಕಕ್ಕೆ ಯಾವುದೇ ಕಾರಣವಿಲ್ಲ,ಎಂದು ಶಶಿಕಲಾ ಭರವಸೆ ನೀಡಿದ ಶಶಿಕಲಾ ರಾಜ್ಯಾದ್ಯಂತ ವ್ಯಾಪಕ ಪ್ರವಾಸಗಳ ಮೂಲಕ ಪಕ್ಷವನ್ನು ಒಗ್ಗೂಡಿಸುವ ಪ್ರಯತ್ನಗಳ ಬಗ್ಗೆ ಸುಳಿವು ನೀಡಿದರು.

ಜಾತಿ ರಾಜಕಾರಣ ಬೇಡ

ಯಾರನ್ನೂ ಹೆಸರಿಸದೆ ಶಶಿಕಲಾ, “ಜಾತಿ ಆಧಾರಿತ ರಾಜಕೀಯ” ಪಕ್ಷಕ್ಕೆ (ಎಐಎಡಿಎಂಕೆ) ಎಂಟ್ರಿ ಕೊಟ್ಟಿದ್ದಾರೆ. ಪಕ್ಷದ ಸಂಸ್ಥಾಪಕ ಎಂಜಿಆರ್ ಮತ್ತು ದಿವಂಗತ ಮಾತೆಯ “ಅಮ್ಮ ಜಯಲಲಿತಾ” ಅವರು ಬೆಳೆಸಿದ ಪಕ್ಷಕ್ಕೆ ಇಂತಹ ಜಾತಿ ಆಧಾರಿತ ರಾಜಕೀಯವನ್ನು ತರುವುದನ್ನು ಅವರು ಮತ್ತು ಪಕ್ಷದ ಕಾರ್ಯಕರ್ತರು ಸಹಿಸುವುದಿಲ್ಲ ಎಂದು ಶಶಿಕಲಾ ಪ್ರತಿಪಾದಿಸಿದರು. ಅವರಿಗೆ ಯಾವುದೇ ಜಾತಿ ಆಧಾರಿತ ಪರಿಗಣನೆ ಇದ್ದಿದ್ದರೆ 2017ರಲ್ಲಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಿರಲಿಲ್ಲ ಎಂದು ಶಶಿಕಲಾ ವಾದಿಸಿದರು. ಎಂಜಿಆರ್ ಕಾಲದಿಂದಲೂ ಪಕ್ಷದ ಪರವಾಗಿ ನಿಂತಿದ್ದ ರಾಜ್ಯದ ಪಶ್ಚಿಮ ಭಾಗಕ್ಕೆ ಪ್ರಾತಿನಿಧ್ಯವನ್ನು ಪರಿಗಣಿಸಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಇಂದು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ ಮತ್ತು ಹಲವಾರು ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿದೆ ಎಂದು ಅವರು ಹೇಳಿದರು.

Read More
Next Story