![ತಿರುವನಂತಪುರಂ ಮೇಯರ್, ಎಂಎಲ್ಎ ಪತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ತಿರುವನಂತಪುರಂ ಮೇಯರ್, ಎಂಎಲ್ಎ ಪತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ](https://karnataka.thefederal.com/h-upload/2024/05/07/445347-arya-rajendran-with-husband.webp)
ತಿರುವನಂತಪುರಂ ಮೇಯರ್, ಎಂಎಲ್ಎ ಪತಿ ವಿರುದ್ಧ ಪ್ರಕರಣ ದಾಖಲಿಸಲು ಆದೇಶ
ತಿರುವನಂತಪುರಂ, ಮೇ 6- ನಗರದ ಮೇಯರ್ ಆರ್ಯ ರಾಜೇಂದ್ರನ್, ಆಕೆಯ ಪತಿ ಮತ್ತು ಶಾಸಕ ಸಚಿನ್ ದೇವ್ ಹಾಗೂ ಇತರ ಮೂವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳೀಯ ನ್ಯಾಯಾಲಯ ಕೇರಳ ಪೊಲೀಸರಿಗೆ ನಿರ್ದೇಶನ ನೀಡಿದೆ.
ಸಾರಿಗೆ ಬಸ್ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಾವು ದೂರು ನೀಡಿದ್ದರೂ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಚಾಲಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಶೀಘ್ರದಲ್ಲೇ ಎಫ್ಐಆರ್ ದಾಖಲಿಸಲಾಗುವುದು ಎಂದು ಕಂಟೋನ್ಮೆಂಟ್ ಪೊಲೀಸರು ತಿಳಿಸಿದ್ದಾರೆ.
ಖಾಸಗಿ ವಾಹನದಲ್ಲಿ ಪ್ರಯಾಣಿಸುವಾಗ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ) ಚಾಲಕ ಲೈಂಗಿಕ ಸನ್ನೆಗಳನ್ನುತೋರಿಸಿದ್ದಾರೆ ಎಂದು ಮೇಯರ್ ಆರೋಪಿಸಿದ್ದು, ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚೆಗೆ ಪಾಳಯಂ ಬಳಿಯ ಸಿಗ್ನಲ್ನಲ್ಲಿ ಮೇಯರ್ ಮತ್ತು ಅವರ ಕುಟುಂಬದವರು ಬಸ್ ಚಾಲಕನನ್ನು ಪ್ರಶ್ನಿಸುತ್ತಿದ್ದ ದೃಶ್ಯ ವೈರಲ್ ಆಗಿದೆ.
ಚಾಲಕ ಆರೋಪವನ್ನು ನಿರಾಕರಿಸಿದ್ದು, ವಾಹನಕ್ಕೆ ದಾರಿ ಬಿಡದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.