ಬಿಜೆಪಿಯಿಂದ ಸಂವಿಧಾನ ನಾಶ: ಮಮತಾ
x

ಬಿಜೆಪಿಯಿಂದ ಸಂವಿಧಾನ ನಾಶ: ಮಮತಾ


ಏಪ್ರಿಲ್‌ 13- ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ನಾಶಪಡಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದರು.

ಅವರ ಭರವಸೆಗಳು ʻಸುಳ್ಳುʼ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 200 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂದು ಜಲ್ಪೈಗುರಿಯಲ್ಲಿ ನಡೆದ ಚುನಾವಣೆ ಸಭೆಯಲ್ಲಿ ಹೇಳಿದರು. ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬಿಜೆಪಿ ನಾಶಪಡಿಸಿದೆ. ಉತ್ತರ ಬಂಗಾಳಕ್ಕೆ ಅವರು ಏನು ಮಾಡಿದ್ದಾರೆ? ಪ್ರಧಾನಿಯವರ 'ಗ್ಯಾರಂಟಿ'ಗಳಿಗೆ ಬಲಿಯಾಗಬೇಡಿ. ಅದು ಚುನಾವಣೆ ಜುಮ್ಲಾ (ಸುಳ್ಳು) ಹೊರತು ಬೇರೇನೂ ಅಲ್ಲʼ ಎಂದು ಹೇಳಿದರು.

Read More
Next Story