ಅಸ್ಸಾಂ ತೀವ್ರ ಪ್ರವಾಹ  ಪರಿಸ್ಥಿತಿ: 24.50 ಲಕ್ಷ ಜನರು ಸಂತ್ರಸ್ತ
x
ಅಸ್ಸಾಂನಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಅಸ್ಸಾಂ ತೀವ್ರ ಪ್ರವಾಹ ಪರಿಸ್ಥಿತಿ: 24.50 ಲಕ್ಷ ಜನರು ಸಂತ್ರಸ್ತ

ರಾಜ್ಯದಲ್ಲಿ ಈವರೆಗೆ ಪ್ರವಾಹಕ್ಕೆ ಸಿಲುಕಿ 52 ಮಂದಿ ಸಾವನ್ನಪ್ಪಿದರೆ, ಭೂಕುಸಿತ ಮತ್ತು ಚಂಡಮಾರುತದಿಂದಾಗಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.


Click the Play button to hear this message in audio format

ಗುವಾಹಟಿ: ಅಸ್ಸಾಂನಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿರುವುದರಿಂದ 30 ಜಿಲ್ಲೆಗಳಲ್ಲಿ 24.50 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ತತ್ತರಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಈವರೆಗೆ ಪ್ರವಾಹಕ್ಕೆ ಸಿಲುಕಿ 52 ಮಂದಿ ಸಾವನ್ನಪ್ಪಿದರೆ, ಭೂಕುಸಿತ ಮತ್ತು ಚಂಡಮಾರುತದಿಂದಾಗಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಗುರುವಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಶುಕ್ರವಾರ ತಡರಾತ್ರಿ ಹಿಂದಿರುಗಿದ ಅವರು ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದಾರೆ.

"ದಿಬ್ರುಗಢದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ, ನಾವು ಅಸ್ಸಾಂ ಆರೋಗ್ಯ ನಿಧಿ-ಆರೋಗ್ಯ ಹಣಕಾಸು ನೆರವು ಯೋಜನೆ ಸೇರಿದಂತೆ ಹಲವಾರು ವಿಷಯಗಳನ್ನು ಪರಿಶೀಲಿಸಿದ್ದೇವೆ. ಅಪರೂಪದ ಪ್ರಕರಣಗಳು ಮತ್ತು ಅಸ್ತಿತ್ವದಲ್ಲಿರುವ ಯಾವುದೇ ಯೋಜನೆಗೆ ಒಳಪಡದವರ ಅರ್ಜಿಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದಿಷ್ಟವಾಗಿ ಹೇಳಿದ್ದೇನೆ. ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸಂದೇಶಗಳನ್ನು ಕಳುಹಿಸಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಶುದ್ಧ ಕುಡಿಯುವ ನೀರಿನ ಪೂರೈಕೆಯ ಕುರಿತು ಮಾತನಾಡಿರುವ ಅವರು, ಪ್ರವಾಹವು ರಾಜ್ಯದಾದ್ಯಂತ ಸಾಕಷ್ಟು ಹಾನಿಯನ್ನುಂಟುಮಾಡಿದರೆ, 'ಜಲ್ ಜೀವನ್ ಮಿಷನ್' ಯೋಜನೆಯು ಈ ಕಠಿಣ ಸಮಯದಲ್ಲಿ ʼಬೆಳ್ಳಿ ರೇಖೆ" ಯಂತೆ ಹೊರಬಂದಿದೆ. ಪರಿವರ್ತನೀಯ ನೀರು ಸರಬರಾಜು ಯೋಜನೆಯು ಈ ಕಠಿಣ ಸಮಯದಲ್ಲಿ ಶುದ್ಧ ಕುಡಿಯುವ ನೀರನ್ನು ಪೂರೈಸುತ್ತಿದೆ ಎಂದು ಅವರು ಹೇಳಿದರು.

ಕಮ್ರೂಪ್ (ಮೆಟ್ರೋಪಾಲಿಟನ್), ಕಮ್ರೂಪ್ ಮತ್ತು ದಿಬ್ರುಗಢ್ ಮೂರು ಜಿಲ್ಲೆಗಳ ನಗರ ಪ್ರದೇಶಗಳಲ್ಲಿ ಪ್ರವಾಹ ವರದಿಯಾಗಿದೆ. ಸಂಪುಟದ ಸಚಿವರು ಕೂಡ ವಿವಿಧ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರವಾಹದಿಂದ ಉಂಟಾದ ಹಾನಿಯನ್ನು ನಿರ್ಣಯಿಸಲು ಅವರು ಮತ್ತು ಅವರ ಇಡೀ ತಂಡವು ಸ್ಥಳದಲ್ಲಿ ಬೀಡುಬಿಟ್ಟಿದೆ. ಜನರ ಕುಂದುಕೊರತೆಗಳನ್ನು ಆಲಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ಕ್ಯಾಚಾರ್, ಕಮ್ರೂಪ್, ಹೈಲಕಂಡಿ, ಹೊಜೈ, ಧುಬ್ರಿ, ನಾಗಾಂವ್, ಮೋರಿಗಾಂವ್, ಗೋಲ್ಪಾರಾ, ಬರ್ಪೇಟಾ, ದಿಬ್ರುಗಢ್, ನಲ್ಬರಿ, ಧೇಮಾಜಿ, ಬೊಂಗೈಗಾಂವ್, ಲಖಿಂಪುರ, ಜೋರ್ಹತ್, ಸೋನಿತ್‌ಪುರ್, ಕೊಕ್ರಜಾರ್, ಕರೀಮ್‌ಗಂಜ್, ದಕ್ಷಿಣ ಸಲ್ಮಾರಾ, ದರ್ಂಗ್ ಮತ್ತು ತಿನ್ಸುಕಿಯಾ ಜಿಲ್ಲೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ಪ್ರಕಾರ ಈ ವರ್ಷದ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತಗಳಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. 7,75,721 ಜನಸಂಖ್ಯೆಯನ್ನು ಹೊಂದಿರುವ ಧುಬ್ರಿ, 1,86,108 ದರಾಂಗ್, 1,75,231 ಜೊತೆ ಕ್ಯಾಚಾರ್, 1,39,399 ರೊಂದಿಗಿನ ಬಾರ್ಪೇಟಾ ಮತ್ತು 1,46,045 ರೊಂದಿಗಿನ ಮೋರಿಗಾಂವ್ ಅತ್ಯಂತ ಹಾನಿಗೊಳಗಾದ ಜಿಲ್ಲೆಗಳಲ್ಲಿ ಸೇರಿವೆ ಎಂದು ಹೇಳಿದೆ. ಒಟ್ಟು 47,103 ಸಂತ್ರಸ್ತ ಜನರು 612 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದರೆ, ಪರಿಹಾರ ರಹಿತ ಶಿಬಿರಗಳಲ್ಲಿ 4,18,614 ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದೆ.

ನಿಮತಿಘಾಟ್, ಗುವಾಹಟಿ, ಗೋಲ್ಪಾರಾ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಉಪನದಿಗಳಾದ ಚೆನಿಮಾರಿಯಲ್ಲಿ ಬುರ್ಹಿ ದಿಹಿಂಗ್, ಶಿವಸಾಗರ್‌ನಲ್ಲಿ ದಿಖೌ, ನಂಗ್ಲಾಮುರಘಾಟ್‌ನಲ್ಲಿ ದಿಸಾಂಗ್, ನುಮಾಲಿಗಢ್‌ನಲ್ಲಿ ಧನ್ಸಿರಿ, ಎನ್‌ಟಿ ರೋಡ್ ಕ್ರಾಸಿಂಗ್‌ನಲ್ಲಿ ಜಿಯಾ ಭಾರಾಲಿ, ಕಂಪುರ್ ಮತ್ತು ಧರಮ್ತುಲ್‌ನಲ್ಲಿ ಕೊಪಿಲಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಬರಾಕ್ ನದಿಯು ಎಪಿ ಘಾಟ್, ಬಿಪಿ ಘಾಟ್, ಚೋಟಾ ಬಕ್ರಾ ಮತ್ತು ಫುಲೆಟ್ರಾಲ್ ಮತ್ತು ಅದರ ಉಪನದಿಗಳಾದ ಘರ್ಮುರಾ, ಕಟಖಲ್ ಮಟಿಜುರಿ ಮತ್ತು ಕುಶಿಯಾರಾ ಕರೀಮ್‌ಗಂಜ್ ಪಟ್ಟಣದಲ್ಲಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ. ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಗಳಲ್ಲಿ 225 ರಸ್ತೆಗಳು ಮತ್ತು 10 ಸೇತುವೆಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.

Read More
Next Story