ಅಪ್ರಾಪ್ತ ವಯಸ್ಕಳ ಅತ್ಯಾಚಾರ: ಬಾಲಮಂಜುನಾಥ ಸ್ವಾಮಿ ಬಂಧನ
x

ಅಪ್ರಾಪ್ತ ವಯಸ್ಕಳ ಅತ್ಯಾಚಾರ: ಬಾಲಮಂಜುನಾಥ ಸ್ವಾಮಿ ಬಂಧನ


ತುಮಕೂರು, ಮಾ.8 : ಜಿಲ್ಲೆಯ ಕುಣಿಗಲ್ ತಾಲೂಕಿನ ವಿದ್ಯಾ ಚೌಡೇಶ್ವರಿ ಪೀಠದ ಬಾಲಮಂಜುನಾಥ ಸ್ವಾಮಿಯನ್ನು ಪೋಕ್ಸೋ ಕಾಯಿದೆಯಡಿ ಅತ್ಯಾಚಾರ ಆರೋಪದ ಮೇಲೆ ಬಂಧಿಸಲಾಗಿದೆ.

ಕಳೆದ ಐದು ವರ್ಷದಿಂದ ಹಲವು ಬಾರಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದ ಯುವತಿ(20), ಪೊಲೀಸರಿಗೆ ದೂರು ನೀಡಿದ್ದಳು.

ದೂರಿನ ಪ್ರಕಾರ, ಆಕೆ 15 ನೇ ವಯಸ್ಸಿನಲ್ಲಿ ತನ್ನ ತಂದೆಯೊಂದಿಗೆ ಮೊದಲ ಬಾರಿ ಮಠಕ್ಕೆ ಭೇಟಿ ನೀಡಿದ್ದಳು. ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುತ್ತಿದ್ದು, ಸ್ವಾಮಿ ʻಅಷ್ಟಮಂಗಲ ಪ್ರಶ್ನೆʼ ಮಾಡಿದರು. ಪರಿಸ್ಥಿತಿಯ ಲಾಭ ಪಡೆದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ದೂರಿದ್ದಾರೆ.

ನಂತರ, ವಿಡಿಯೋ ಕರೆಗಳನ್ನು ಸ್ವೀಕರಿಸುವಂತೆ ಹಾಗೂ ಬಟ್ಟೆಗಳನ್ನು ತೆಗೆದು ನಗ್ನಳಾಗಿ ನನ್ನನ್ನು ತೃಪ್ತಿಪಡಿಸು ಎಂದು ಬಲವಂತ ಪಡಿಸಿದರು ಎಂದು ಆರೋಪಿಸಿದ್ದಾರೆ.

ʻಸಂತ್ರಸ್ತೆ ನೀಡಿದ ದೂರು ಆಧರಿಸಿ ಸೆಕ್ಷನ್ 376 (ಅತ್ಯಾಚಾರ), 354 (ಶಿಷ್ಟತೆಗೆ ಭಂಗ ತರುವ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಸ್ಕೋ) ಹಾಗೂ ಐಟಿ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದೇವೆʼ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಗುರುವಾರ ರಾತ್ರಿ ಸ್ವಾಮಿಯನ್ನು ಬಂಧಿಸಲಾಗಿದೆ.

Read More
Next Story