ಸಬ್‌-ಅರ್ಬನ್‌ ರೈಲ್ವೆ ಯೋಜನೆಗೆ ಮರು ಜೀವ, ಎಂಡಿ ಹುದ್ದೆಗೆ ಅರ್ಜಿ ಆಹ್ವಾನ
x

ಸಾಂದರ್ಭಿಕ ಚಿತ್ರ

ಸಬ್‌-ಅರ್ಬನ್‌ ರೈಲ್ವೆ ಯೋಜನೆಗೆ ಮರು ಜೀವ, ಎಂಡಿ ಹುದ್ದೆಗೆ ಅರ್ಜಿ ಆಹ್ವಾನ

ವ್ಯಸ್ಥಾಪಕ ನಿರ್ದೇಶಕ ಹುದ್ದೆಗೆ ಮಾತ್ರವಲ್ಲದೆ, ಸಿವಿಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌, ಡಿಸೈನ್‌, ಪ್ಲಾನಿಂಗ್‌, ಪ್ರಾಕ್ಯೂರ್‌ಮೆಂಟ್‌, ಮಾನವ ಸಂಪನ್ಮೂಲ ವಿಭಾಗ ಸೇರಿ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಕಾಮಗಾರಿಗೆ ಸರ್ಕಾರ ಮರುಜೀವ ನೀಡಿ ವೇಗ ನೀಡಲು ಮುಂದಾಗಿದ್ದು ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿಯ (ಕೆ-ರೈಡ್‌) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ತಾಂತ್ರಿಕ ಪರಿಣಿತರನ್ನು ನೇಮಿಸಲು ಅರ್ಜಿ ಆಹ್ವಾನಿಸಲಾಗಿದೆ.

ಭಾರತೀಯ ರೈಲ್ವೆ ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು ವ್ಯಸ್ಥಾಪಕ ನಿರ್ದೇಶಕ ಹುದ್ದೆಗೆ ಮಾತ್ರವಲ್ಲದೆ, ಸಿವಿಲ್‌ ಎಂಜಿನಿಯರಿಂಗ್‌, ಎಲೆಕ್ಟ್ರಿಕಲ್‌, ಡಿಸೈನ್‌, ಪ್ಲಾನಿಂಗ್‌, ಪ್ರೊಕ್ಯೂರ್‌ಮೆಂಟ್, ಮಾನವ ಸಂಪನ್ಮೂಲ ವಿಭಾಗ ಸೇರಿ ಒಟ್ಟು 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹತೆಗಳು

ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ 25 ವರ್ಷ ಅನುಭವವುಳ್ಳ ಗ್ರೂಪ್‌ ʼಎʼ ವೃಂದದ ಅಧಿಕಾರಿಯಾಗಿರಬೇಕು, ರೈಲ್ವೆ ಮೂಲಸೌಕರ್ಯ ಯೋಜನೆ ಹಿನ್ನೆಲೆಯುಳ್ಳ ಹಾಗೂ ಹಿರಿಯ ಆಡಳಿತಾತ್ಮಕ ದರ್ಜೆಯ ಅಧಿಕಾರಿಗಳು ಅರ್ಜಿ ಸಲ್ಲಿಸಬೇಕು. ಮೂರು ವರ್ಷಗಳ ನಿಯೋಜನೆ ಆಧಾರದ ಮೇಲೆ ವ್ಯವಸ್ಥಾಪಕ ನಿರ್ದೇಶಕ ಹುದ್ದೆ ‌ ಭರ್ತಿಯಾಗಲಿದ್ದು, ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.

ಸಬ್‌-ಅರ್ಬನ್‌ ಯೋಜನೆ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಅನುಷ್ಠಾನ ಮಾಡುತ್ತಿವೆ. ಈ ಯೊಜನೆಯಲ್ಲಿ 2026ರಲ್ಲಿ ಮೊದಲ ರೈಲು ಸಂಚಾರ ನಡೆಸಲಿದೆ ಎಂದು ಅಂದಾಜಿಸಲಾಗಿದೆ. ಬಿಎಸ್‌ಆರ್‌ಪಿ ಸುಮಾರು 148 ಕಿ. ಮಿ. ಯೋಜನೆಯಾಗಿದ್ದು, 4 ಕಾರಿಡಾರ್‌ಗಳನ್ನು ಇದು ಒಳಗೊಂಡಿದೆ.

2022ರಲ್ಲಿ ಎಲ್‌ ಅಂಡ್‌ ಟಿ 'ಮಲ್ಲಿಗೆ' ಕಾರಿಡಾರ್ ನಿರ್ಮಾಣಕ್ಕೆ ಟೆಂಡರ್ ಪಡೆದಿತ್ತು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಯ ಮೊದಲ ಕಾರಿಡಾರ್ ಟೆಂಡರ್ ಇದಾಗಿದೆ. ಆದರೆ ಭೂ ಸ್ವಾಧೀನದ ವಿವಾದದ ಕಾರಣ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವುದು ತಡವಾಗುತ್ತಿದೆ.

Read More
Next Story