
ಬೆಂಗಳೂರು ಸ್ಟೇಡಿಯಂ ದುರಂತ: ಆರ್ಸಿಬಿ ನಿಖಿಲ್ ಸೊಸಲೆಗೆ ಹೈಕೋರ್ಟ್ನಲ್ಲಿ ಸಿಗದ ಜಾಮೀನು
ತಮ್ಮ ಅರ್ಜಿಯಲ್ಲಿ ಸೊಸಲೆ ಅವರು ಜೂನ್ ರ ಬೆಳಗಿನ ಜಾವ ನಡೆಸಿದ ತಮ್ಮ ಬಂಧನ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು: ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ಕಾಲ್ತುಳಿತದಲ್ಲಿ ನಡೆದ ದುರಂತದಲ್ಲಿ 11 ಜನರ ಜೀವಹಾನಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೊಸಲೆ ಅವರಿಗೆ ಕರ್ನಾಟಕ ಹೈಕೋರ್ಟ್ನಲ್ಲಿ ಮತ್ತೆ ಹಿನ್ನಡೆಯಾಗಿದೆ. ಅವರಿಗೆ ಬಂಧನದಿಂದ ಮುಕ್ತಿ ನೀಡಲು ನ್ಯಾಯಪೀಠ ನಿರಾಕರಿಸಿದೆ.
ಹೈಕೋರ್ಟ್, ಸೊಸಾಲೆ ಸಲ್ಲಿಸಿದ್ದ ಅರ್ಜಿಯ ತೀರ್ಪನ್ನು ಜೂನ್ 11 ಕ್ಕೆ ಕಾಯ್ದಿರಿಸಿದ್ದು, ಇನ್ನೊಂದು ದಿನ ಅವರು ಕಾಯಬೇಕಾಗಿದೆ. ನಿಖಿಲ್ ಸೊಸಲೆ ಅವರನ್ನು ಜೂನ್ 6 ಕೇಂದ್ರೀಯ ಕ್ರೈಂ ಬ್ರಾಂಚ್ (ಸಿಸಿಬಿ) ಪೊಲೀಸರು ಬಂಧಿಸಿದ್ದರು.
ತಮ್ಮ ಅರ್ಜಿಯಲ್ಲಿ, ಸೊಸಲೆ ಅವರು ಜೂನ್ ರ ಬೆಳಗಿನ ಜಾವ ನಡೆಸಿದ ತಮ್ಮ ಬಂಧನ ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಪ್ರಶ್ನಿಸಿದ್ದಾರೆ. ಪೊಲೀಸರ ಈ ಕ್ರಮವು ರಾಜಕೀಯ ಒತ್ತಡದಿಂದ ಪ್ರಭಾವಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
Next Story