ರಣಜಿ ಟ್ರೋಫಿ:  ಫೈನಲ್‌ ತಲುಪಿದ ವಿದರ್ಭ
x
ಯಶ್‌ ರಾಥೋಡ್

ರಣಜಿ ಟ್ರೋಫಿ: ಫೈನಲ್‌ ತಲುಪಿದ ವಿದರ್ಭ

ಮಧ್ಯಪ್ರದೇಶದ ಫೈನಲ್‌ ಆಸೆ ಭಂಗ


ವಿದರ್ಭ, ಮಾರ್ಚ್ 6 -ಮಧ್ಯಪ್ರದೇಶವನ್ನು ಸೋಲಿಸಿದ ವಿದರ್ಭ, ನಾಗ್ಪುರದಲ್ಲಿ 41 ಬಾರಿಯ ಚಾಂಪಿಯನ್‌ ಮುಂಬೈ ತಂಡವನ್ನು ಎದುರಿಸಲಿದೆ.

ನಾಲ್ಕನೇ ದಿನದಂತ್ಯಕ್ಕೆ 228/6ರಲ್ಲಿ ಅನಿಶ್ಚಿತ ಸ್ಥಿತಿಯಲ್ಲಿದ್ದ ಮಧ್ಯಪ್ರದೇಶದ ಗೆಲುವಿಗೆ 93 ರನ್‌ ಅಗತ್ಯವಿತ್ತು. ಅಂತಿಮ ದಿನದ ಮೊದಲ ಸೆಷನ್‌ನಲ್ಲಿ ಆದಿತ್ಯ ಠಾಕರೆ ಮತ್ತು ಯಶ್ ಠಾಕೂರ್ ಅವರ ಬೌಲಿಂಗ್‌ನಿಂದ ಕಳೆಗುಂದಿತು. ಪ್ರೀಮಿಯರ್ ದೇಶಿ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವ ನಿರೀಕ್ಷೆ ಭಗ್ನಗೊಂಡು, 81.3 ಓವರ್‌ಗಳಲ್ಲಿ 258 ರನ್‌ಗಳಿಗೆ ಆಲೌಟ್ ಆಯಿತು.

ಇದು ರಣಜಿ ಫೈನಲ್‌ಗೆ ವಿದರ್ಭದ ಮೂರನೇ ಪ್ರವೇಶವಾಗಿದೆ.ಮೊದಲಿನ ಎರಡೂ ಸಂದರ್ಭಗಳಲ್ಲಿ ಕ್ರಮವಾಗಿ ದೆಹಲಿ (2017-18) ಮತ್ತು ಸೌರಾಷ್ಟ್ರವನ್ನು (2018-19) ಸೋಲಿಸಿ, ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಗೆಲುವಿಗೆ 321 ರನ್‌ಗಳ ಗುರಿಯನ್ನು ಬೆನ್ನಟ್ಟಿದ 2021-22 ರ ರಣಜಿ ಚಾಂಪಿಯನ್ ಮಧ್ಯಪ್ರದೇಶ, ಆರು ವಿಕೆಟ್‌ ಕಳೆದುಕೊಂಡರೂ ಪಂದ್ಯದಲ್ಲಿ ಇತ್ತು. ಆದರೆ ಠಾಕರೆ ಮತ್ತು ಠಾಕೂರ್ ಅಂತಿಮ ದಿನದಂದು ಸ್ವಲ್ಪ ಬೌನ್ಸ್ ಮತ್ತು ಚಲನೆಯಿದ್ದ ಪಿಚ್‌ ನಲ್ಲಿ ಉತ್ತಮ ಬೌಲಿಂಗ್‌ ಮಾಡಿದರು. ಮುಂಜಾನೆಯ ವಿಕೆಟ್‌ನ ತಾಜಾತನವು ಅವರಿಗೆ ಸಹಾಯ ಮಾಡಿತು.

ಮಂಗಳವಾರ ರಾತ್ರಿ ಕಾಲುಗಾರವಾಗಿ ಉಳಿದುಕೊಂಡಿದ್ದಕುಮಾರ್ ಕಾರ್ತಿಕೇಯ ಅವರನ್ನು ಠಾಕರೆ ಪೆವಿಲಿಯನ್‌ ಗೆ ಕಳಿಸಿದರು. ಅನುಭವ್ ಅಗರ್ವಾಲ್ ಆನಂತರ ಠಾಕರೆ ಅವರಿಂದ ಬೌಲ್ಡ್‌ ಆದರು. 8 ವಿಕೆಟ್‌ಗೆ 234 ರನ್ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ಮೂರನೇ ಬಾರಿಗೆ ರಣಜಿ ಫೈನಲ್‌ಗೆ ಪ್ರವೇಶಿಸುವ ಅವಕಾಶ ತಪ್ಪಿಹೋಯಿತು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ 101.3 ಓವರ್‌ಗಳಲ್ಲಿ 170 ಮತ್ತು 402 (ಅಮನ್ ಮೊಖಾಡೆ 59, ಯಶ್ ರಾಥೋಡ್ 141, ಅಕ್ಷಯ್ ವಾಡ್ಕರ್ 77; ಅನುಭವ್ ಅಗರ್ವಾಲ್ 5/92). ಮಧ್ಯಪ್ರದೇಶ 252 ಮತ್ತು 81.3 ಓವರ್‌ಗಳಲ್ಲಿ 258 .



Read More
Next Story