
IPL 2025: 18ನೇ ಆವೃತ್ತಿಯ ಐಪಿಎಲ್ ಟ್ರೋಫಿ ನಂಬರ್ 18ರ ವಿರಾಟ್ ಕೊಹ್ಲಿಯ ಆರ್ಸಿಬಿಗೆ
ರಜತ್ ಪಾಟೀದಾರ್ ಮತ್ತು ಅವರ ತಂಡವು ಬೆಂಗಳೂರಿನ ನಿಷ್ಠಾವಂತ ಅಭಿಮಾನಿಗಳಿಗೆ ಈ ಗೆಲುವನ್ನು ಅರ್ಪಿಸಿದೆ. ವರ್ಷಗಳಿಂದ ತಂಡದ ಸೋಲು-ಗೆಲುವುಗಳಲ್ಲಿ ಜೊತೆಯಾಗಿ ನಿಂತ ಅಭಿಮಾನಿಗಳಿಗೆ ಇದು ನಿಜವಾದ ಕಾಣಿಕೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಂಬರ್ 18 ವಿರಾಟ್ ಕೊಹ್ಲಿ ಅವರ ಆರ್ಸಿಬಿಯದ್ದಾಯಿತು. ಮೆನ್ ಇನ್ ರೆಡ್ ತಂಡದ 18 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ತೆರೆ ಬಿತ್ತು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂತಿಮವಾಗಿ ತಮ್ಮ ಬಹುನಿರೀಕ್ಷಿತ ಟ್ರೋಫಿ ಎತ್ತಿಹಿಡಿಯಿತು.
ಇದು ಬೆಂಗಳೂರು ತಂಡಕ್ಕೆ ವಿಮೋಚನೆಯಾಗಿದೆ. ಅಭಿಮಾಣಿಗಳಿಗೆ ರೋಮಾಂಚನ ಮತ್ತು ಸಂಭ್ರಮದ ರಾತ್ರಿ. ಪಂಜಾಬ್ ಕಿಂಗ್ಸ್ಗೆ ಇದು ಹೃದಯ ವಿದ್ರಾವಕ ಸೋಲಿನ ಕ್ಷಣ ಆ ತಂಡವೂ ಟ್ರೋಫಿಯ ಹತ್ತಿರ ಬಂದು ಕಳೆದುಕೊಂಡಿತು. ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂಜಾಬ್ ಅಂತಿಮ ಪಂದ್ಯದಲ್ಲಿ ವೀರೋಚಿತ ಸೋಲು ಕಂಡಿತು.
ರಜತ್ ಪಾಟೀದಾರ್ ಮತ್ತು ಅವರ ತಂಡವು ಬೆಂಗಳೂರಿನ ನಿಷ್ಠಾವಂತ ಅಭಿಮಾನಿಗಳಿಗೆ ಈ ಗೆಲುವನ್ನು ಅರ್ಪಿಸಿದೆ. ವರ್ಷಗಳಿಂದ ತಂಡದ ಸೋಲು-ಗೆಲುವುಗಳಲ್ಲಿ ಜೊತೆಯಾಗಿ ನಿಂತ ಅಭಿಮಾನಿಗಳಿಗೆ ಇದು ನಿಜವಾದ ಕಾಣಿಕೆ. ವಿರಾಟ್ ಕೊಹ್ಲಿ ತಮ್ಮ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೆ, ಅಂತಿಮ ಚೆಂಡು ಎಸೆಯುವ ಮೊದಲೇ ಆನಂದ ಭಾಷ್ಪ ಸುರಿಸಿದರು. ಈ ಸುದೀರ್ಘ ಕಾಯುವಿಕೆಯ ಸುಂದರ ಕ್ಷಣವನ್ನು ಅನುಭವಿಸಿದರು. ತಂಡದ ನಿಷ್ಠಾವಂತ 18 ವರ್ಷಗಳಿಂದ ಅದೇ ತಂಡದಲ್ಲಿ ಆಡುತ್ತಿರುವ ಮಾಜಿ ನಾಯಕನಿಗೆ ಅಂತಿಮವಾಗಿ ಗೆಲುವಿನ ಸಿಹಿ ಸಿಕ್ಕಿತು, ಇದನ್ನು ಕಳೆದ 17 ವರ್ಷಗಳಲ್ಲಿ ಇತರರು ಹಲವು ಬಾರಿ ನಷ್ಟ ಮಾಡಿಕೊಂಡಿದ್ದರು.
ಪಂಜಾಬ್ನ ಬ್ಯಾಟಿಂಗ್ ಕುಸಿತ, ಆರ್ಸಿಬಿ ಬೌಲರ್ಗಳ ಶಿಸ್ತುಬದ್ಧ ಪ್ರದರ್ಶನ
ಆರ್ಸಿಬಿ ತಂಡ ತನ್ನ 190 ರನ್ಗಳ ಗುರಿಯನ್ನು ಕ್ರುನಾಲ್ ಪಾಂಡ್ಯ ಮತ್ತು ಜೋಶ್ ಹ್ಯಾಝಲ್ವುಡ್ ನೇತೃತ್ವದ ಶಿಸ್ತುಬದ್ಧ ಬೌಲಿಂಗ್ನೊಂದಿಗೆ ಯಶಸ್ವಿಯಾಗಿ ರಕ್ಷಿಸಿತು. ಆರ್ಸಿಬಿಯ ಬೌಲಿಂಗ್ ಶಿಸ್ತಿನ ಹೊರತಾಗಿಯೂ, ಪಂಜಾಬ್ನ ಬ್ಯಾಟಿಂಗ್ ನಿರ್ಣಾಯಕ ಕ್ಷಣದಲ್ಲಿ ಪುಟಿದಿದ್ದೆದ್ದರೂ ಕೊನೇ ಕ್ಷಣದಲ್ಲಿ ಸೋತರು.
ಇದಕ್ಕೂ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್ಗಳಲ್ಲಿ 9 ವಿಕೆಟ್ಗೆ 190 ರನ್ ಗಳಿಸಿತು. ಜಿತೇಶ್ ಶರ್ಮಾ (10 ಎಸೆತಗಳಲ್ಲಿ 24) ಮತ್ತು ರೊಮಾರಿಯೊ ಶೆಫರ್ಡ್ (9 ಎಸೆತಗಳಲ್ಲಿ 17) ಅವರ ಕೊನೆಯ ಕ್ಷಣದ ಕೊಡುಗೆಗಳ ಹೊರತಾಗಿಯೂ, ಈ ಮೊತ್ತವು ದೊಡ್ಡ ಹೊಡೆತಗಳಿಗೆ ಪೂರಕ ಪಿಚ್ನಲ್ಲಿ 15-20 ರನ್ಗಳ ಕೊರತೆಯಂತೆ ಕಂಡಿತು. ಹೀಗಾಗಿ ಕ್ರಿಕೆಟ್ ಪಂಡಿತರು ಬೆಂಗಳೂರು ತಂಡದ ಅಗ್ರ ಕ್ರಮಾಂಕದ ಬ್ಯಾಟಿಂಗ್ ಅನ್ನು ಟೀಕಿಸಿದರು. ಆದರೆ ಬೌಲಿಂಗ್ ವಿಭಾಗ ತಂಡದ ಮರ್ಯಾದೆ ಕಾಪಾಡಿತು.
ಅದಕ್ಕಿಂತ ಮೊದಲು, ಪಂಜಾಬ್ನ ವೇಗಿಗಳು ಕೊನೆಯ ಮೂರು ಓವರ್ಗಳಲ್ಲಿ ಕೇವಲ 22 ರನ್ಗಳನ್ನು ಬಿಟ್ಟುಕೊಟ್ಟು ಆರ್ಸಿಬಿ ಬ್ಯಾಟಿಂಗ್ಗೆ ಕಡಿವಾಣ ಹಾಕಿದರು. ಅರ್ಶದೀಪ್ ಸಿಂಗ್ ಅದ್ಭುತವಾದ ಕೊನೆಯ ಓವರ್ ಎಸೆದು, ಮೂರು ವಿಕೆಟ್ಗಳನ್ನು ಕಿತ್ತು ಕೇವಲ ಮೂರು ರನ್ಗಳನ್ನು ನೀಡಿದರು, ರೊಮಾರಿಯೊ ಮತ್ತು ಕ್ರುನಾಲ್ಗೆ ಬೌಂಡರಿ ಗಳಿಸಲೂ ಅವಕಾಶ ನೀಡಿರಲಿಲ್ಲ
ಆರ್ಸಿಬಿಯ ಬೌಲರ್ಗಳು ತಮ್ಮ ಧೈರ್ಯವನ್ನು ಕಾಯ್ದುಕೊಂಡು, ಸಾಮೂಹಿಕ ಪ್ರಯತ್ನದಿಂದ ಕೊನೆಗೂ ಬೆಂಗಳೂರಿಗೆ ಆ ಬಹುನಿರೀಕ್ಷಿತ ಟ್ರೋಫಿಯನ್ನು ತಂದಿತು.