ಜಡೇಶಾ ಕೆ ಹಂಪಿ ನಿರ್ದೇಶನದ ವಿಕೆ-29 ಚಿತ್ರತಂಡ ಸೇರಿದ ರಾಜ್ ಬಿ ಶೆಟ್ಟಿ
x
ವಿಕೆ-29 ಚಿತ್ರತಂಡವನ್ನು ಸೇರ್ಪಡೆಗೊಂಡ ರಾಜ್‌.ಬಿ ಶೆಟ್ಟಿ

ಜಡೇಶಾ ಕೆ ಹಂಪಿ ನಿರ್ದೇಶನದ 'ವಿಕೆ-29' ಚಿತ್ರತಂಡ ಸೇರಿದ ರಾಜ್ ಬಿ ಶೆಟ್ಟಿ

ಈ ಸಿನಿಮಾ ಕೆ ಶಿವರಾಮ ಕಾರಂತ್ ಅವರ ಕ್ಲಾಸಿಕ್ ʼಚೋಮನ ದುಡಿʼಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ.


Click the Play button to hear this message in audio format

ಜಡೇಶಾ ಕೆ ಹಂಪಿ ನಿರ್ದೇಶನದ ಮತ್ತು ದುನಿಯಾ ವಿಜಯ್ ನಟನೆಯ ಸಿನಿಮಾ ಹಲವು ಕಾರಣಗಳಿಗಾಗಿ ನಿರೀಕ್ಷೆ ಮೂಡಿಸಿದೆ. ಆ್ಯಕ್ಷನ್-ಪ್ಯಾಕ್ಡ್ ಫ್ಯಾಮಿಲಿ ಡ್ರಾಮಾ ಎಂದು ಬಿಂಬಿಸಲಾದ ಈ ಚಿತ್ರವು ಏಪ್ರಿಲ್ ಅಂತ್ಯದ ವೇಳೆಗೆ ಶೂಟಿಂಗ್ ಪ್ರಾರಂಭಿಸಲಿದೆ.

ಈ ಸಿನಿಮಾ ಕೆ ಶಿವರಾಮ ಕಾರಂತ್ ಅವರ ಕ್ಲಾಸಿಕ್ ʼಚೋಮನ ದುಡಿʼಯಿಂದ ಪ್ರೇರಿತವಾಗಿದೆ ಎಂದು ಹೇಳಲಾಗುತ್ತದೆ. 'ವಿಕೆ-29' ಪೋಸ್ಟರ್‌ನಲ್ಲಿ ಬಿಡುಗಡೆ ಶುಭ ಮುಹೂರ್ತದ ಸಮಯದಲ್ಲಿ ಹೊಸ ವಿಷಯವೊಂದು ಕೇಳಿ ಬಂದಿದೆ. ಮೂಲಗಳ ಪ್ರಕಾರ ಈ ಚಿತ್ರತಂಡಕ್ಕೆ ರಾಜ್ ಬಿ ಶೆಟ್ಟಿ ಸೇರಿದ್ದಾರೆ ಎಂದು ತಿಳಿದು ಬಂದಿದೆ.

'ಒಂದು ಮೊಟ್ಟೆಯ ಕಥೆ' ಮತ್ತು 'ಗರುಡ ಗಮನ ವೃಷಭ ವಾಹನ' ಚಿತ್ರದ ನಿರ್ದೇಶಕರು 'ಟೋಬಿ' ಮತ್ತು 'ಸ್ವಾತಿ ಮುತ್ತಿನ ಮಳೆ ಹನಿ'ಯಂತಹ ಚಿತ್ರಗಳಲ್ಲಿನ ಅವರ ಅಭಿನಯಕ್ಕಾಗಿ ಗಮನಸೆಳೆದಿದ್ದಾರೆ. ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದ '45' ಸಿನಿಮಾದಲ್ಲೂ ಕೂಡ ನಟಿಸುತ್ತಿದ್ದಾರೆ. ಇದರ ಜೊತೆಗೆ ಕೆಲವು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದಾರೆ. ಮುಖ್ಯವಾಗಿ ಮುಂಬರುವ ಮಮ್ಮುಟ್ಟಿ ಅಭಿನಯದ 'ಟರ್ಬೊ'ದಲ್ಲೂ ರಾಜ್ ಬಿ ಶೆಟ್ಟಿ ನಟಿಸುತ್ತಿದ್ದಾರೆ.

'ಗರುಡ ಗಮನ ವೃಷಭ ವಾಹನ'ದಲ್ಲಿ ರಾಜ್ ಮತ್ತು ರಿಷಬ್ ಶೆಟ್ಟಿ ಅವರ ಕಾಂಬಿನೇಷನ್ ನೋಡಿ ಆನಂದಿಸಿದರೆ, ದುನಿಯಾ ವಿಜಯ್ ಮತ್ತು ರಾಜ್ ಬಿ ಶೆಟ್ಟಿ ಅವರ ಕಾಂಬಿನೇಷನ್ ಮೊದಲ ಬಾರಿಗೆ ಬೆಳ್ಳಿಪರದೆಯಲ್ಲಿ ವೀಕ್ಷಿಸುವುದು ಅಷ್ಟೇ ಆಸಕ್ತಿದಾಯಕವಾಗಿದೆ, ಇದು ಖಂಡಿತವಾಗಿಯೂ ಹೈಲೈಟ್ ಆಗಿರುತ್ತದೆ. ತಯಾರಕರು ಚಿತ್ರೀಕರಣವನ್ನು ಪ್ರಾರಂಭಿಸಿದ ನಂತರ ಮತ್ತು ನಟರು ಸೆಟ್‌ಗೆ ಸೇರಿದ ನಂತರ ಈ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ.

ಈ ನಡುವೆ ಕೋಲಾರ, ಗುಡಿಬಂಡೆ ಸೇರಿದಂತೆ ಹಲವು ಸ್ಥಳಗಳನ್ನು ಶೂಟಿಂಗ್ ಗಾಗಿ 'ವಿಕೆ-29' ಚಿತ್ರತಂಡ ಅಂತಿಮಗೊಳಿಸಿದೆ. ಇನ್ನುಳಿದಂತೆ ರಚಿತಾ ರಾಮ್ ಅವರನ್ನು ನಾಯಕಿ ಎಂದು ಘೋಷಿಸಿದೆ. ಈ ಚಿತ್ರದಲ್ಲಿ ವಿಜಯ್ ಅವರ ಮಗಳು ರಿತನ್ಯಾ ಕೂಡ 'ಡೇರ್‌ಡೆವಿಲ್ ಮುಸ್ತಫಾ' ಖ್ಯಾತಿಯ ಶಿಶಿರ್ ಅವರೊಂದಿಗೆ ನಟಿಸಲಿದ್ದಾರೆ. ಇನ್ನುಳಿದಂತೆ ಚಿತ್ರತಂಡ ರಚಿತಾ ರಾಮ್ ಅವರನ್ನು ನಾಯಕಿ ಎಂದು ಘೋಷಿಸಿದೆ.

Read More
Next Story