RCB Champion : ಇಂದು ಆರ್‌ಸಿಬಿ ಐಪಿಎಲ್ 2025 ವಿಜಯೋತ್ಸವ: ಮೆರವಣಿಗೆ, ಎಲ್ಲಿ, ಏನು ಎಂಬ ವಿವರ ಇಲ್ಲಿದೆ
x

RCB Champion : ಇಂದು ಆರ್‌ಸಿಬಿ ಐಪಿಎಲ್ 2025 ವಿಜಯೋತ್ಸವ: ಮೆರವಣಿಗೆ, ಎಲ್ಲಿ, ಏನು ಎಂಬ ವಿವರ ಇಲ್ಲಿದೆ

ಇದು ನಿಮಗಾಗಿ, ನೀವೇ ನಮ್ಮ ಬಲ. ಪ್ರತಿಯೊಂದು ಹರ್ಷೋದ್ಗಾರಕ್ಕೂ, ಪ್ರತಿಯೊಂದು ಕಣ್ಣೀರಿಗೂ, ಪ್ರತಿಯೊಂದು ವರ್ಷಕ್ಕೂ, ಪ್ರತಿ ನಿರೀಕ್ಷೆಗೂ ನೀವೇ ಸರದಾರರು. ಈ ಕಿರೀಟ ನಿಮ್ಮದು ಎಂದು ಆರ್​ಸಿಬಿ ಹೇಳಿದೆ.


ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆಲುವಿನ ನಂತರ, ಅಭಿಮಾನಿಗಳಿಗಾಗಿ ವಿಜಯೋತ್ಸವದ ಮೆರವಣಿಗೆಯನ್ನು ಘೋಷಿಸಿದೆ. ಜೂನ್ 3ರಂದು ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡವನ್ನು 6 ರನ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ 18 ವರ್ಷಗಳ ಬರವನ್ನು ಅಂತ್ಯಗೊಳಿಸಿತ್ತು.



ಈ ಐತಿಹಾಸಿಕ ವಿಜಯವನ್ನು ತಮ್ಮ ನಿಷ್ಠಾವಂತ ಅಭಿಮಾನಿಗಳೊಂದಿಗೆ ಆಚರಿಸಲು, ಫ್ರಾಂಚೈಸಿ ಜೂನ್ 4 ರಂದು ಮಧ್ಯಾಹ್ನ 3.30ಕ್ಕೆ ವಿಧಾನ ಸೌಧದಿಂದ ಎಂ. ಚಿನ್ನಸ್ವಾಮಿ ಸ್ಟೇಡಿಯಂವರೆಗೆ ಮೆರವಣಿಗೆ ಆಯೋಜಿಸಿದೆ. ಈ ಐತಿಹಾಸಿಕ ಕ್ಷಣದಲ್ಲಿ ಮಿಂದೇಳಲಿದ್ದು, ಸಾವಿರಾರು ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

"ಇದು ನಿಮಗಾಗಿ, ನೀವೇ ನಮ್ಮ ಬಲ. ಪ್ರತಿಯೊಂದು ಹರ್ಷೋದ್ಗಾರಕ್ಕೂ, ಪ್ರತಿಯೊಂದು ಕಣ್ಣೀರಿಗೂ, ಪ್ರತಿಯೊಂದು ವರ್ಷಕ್ಕೂ, ಪ್ರತಿ ನಿರೀಕ್ಷೆಗೂ ನೀವೇ ಸರದಾರರು. ಈ ಕಿರೀಟ ನಿಮ್ಮದು ಎಂದು ಆರ್​ಸಿಬಿ ಹೇಳಿದೆ.

ವಿರಾಟ್ ಕೊಹ್ಲಿ ಕೂಡ ಟ್ರೋಫಿಯೊಂದಿಗೆ ಬೆಂಗಳೂರಿಗೆ ಮರಳಿದ ನಂತರ ಅಭಿಮಾನಿಗಳಿಗಾಗಿ ವಿಶೇಷ ಸಂಭ್ರಮದ ಭರವಸೆ ನೀಡಿದ್ದಾರೆ. "ನಗರವು ಕಾಯುತ್ತಿದೆ. ಅಭಿಮಾನಿಗಳು ಈಗ ಏನು ನಡೆಯುತ್ತಿರಬಹುದು ಎಂದು ಊಹಿಸಿ," ಎಂದು ಕೊಹ್ಲಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

Read More
Next Story