ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್‌ ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲ
x

ಶಿವಮೊಗ್ಗದಲ್ಲಿ ಗೀತಾ ಶಿವರಾಜಕುಮಾರ್‌ ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲ

ಶಿವಮೊಗ್ಗ ಕ್ಷೇತ್ರದಲ್ಲಿ ಸ್ಟಾರ್ ನಟ ಡಾ. ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್ ಅವರನ್ನು ಕನ್ನಡ ಚಿತ್ರರಂಗ ಬೆಂಬಲಿಸುವ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ರಂಗ ವರ್ಣರಂಜಿತವಾಗಲಿದೆ. ಕನ್ನಡ ಚಿತ್ರರಂಗದ ನಟ, ನಟಿಯರು ಗೀತಾ ಶಿವರಾಜ್ ಕುಮಾರ್‌ ಪರವಾಗಿ ಪ್ರಚಾರಕ್ಕೆ ಧುಮುಕಲಿದ್ದಾರೆ.


ಬಿಜೆಪಿಯ ಅದರಲ್ಲೂ ವಿಶೇಷವಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಕ್ಷೇತ್ರವೆಂದು ಪರಿಗಣಿಸಲಾಗುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಕರ್ನಾಟಕದ ಪ್ರಮುಖ ಲೋಕಸಭಾ ಕ್ಷೇತ್ರವಾಗಿ ಮಾರ್ಪಟ್ಟಿದೆ. ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಎಬ್ಬಿಸಿರುವ ಬಂಡಾಯ ಹಾಗೂ ಮಾಜಿ ಸಿಎಂ ಸಾರೆಕೊಪ್ಪ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜಕುಮಾರ್ ಅವರನ್ನು ಕಣಕ್ಕಿಳಿದಿರುವುದರಿಂದ ಈ ಲೋಕಸಭಾ ಕ್ಷೇತ್ರಕ್ಕೆ ಖದರ್‌ ಬಂದಿದೆ.

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಸೋಮವಾರ ಕನ್ನಡ ಚಿತ್ರರಂಗವು ಗೀತಾ ಶಿವರಾಜಕುಮಾರ್ ಅವರಿಗೆ ತನ್ನ ಬೆಂಬಲ ಸೂಚಿಸಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಅಧ್ಯಕ್ಷ ಮತ್ತು ಹಿರಿಯ ನಿರ್ಮಾಪಕ ಎನ್‌ಎಂ ಸುರೇಶ್ ಪ್ರಕಾರ, ನಿರ್ಮಾಪಕರು, ವಿತರಕರು, ಪ್ರದರ್ಶಕರು, ಕಲಾವಿದರು, ನಿರ್ದೇಶಕರು ಸೇರಿದಂತೆ ಕನ್ನಡ ಚಿತ್ರರಂಗ ಗೀತಾ ಶಿವರಾಜಕುಮಾರ್ ಅವರನ್ನು ಬೆಂಬಲಿಸಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಅವರ ಗೆಲುವಿಗೆ ಪ್ರಚಾರ ಮಾಡಲಿದ್ದಾರೆ.

ಕನ್ನಡದ ಸಾಂಸ್ಕøತಿಕ ನಾಯಕ ಹಾಗೂ ಕನ್ನಡ ಚಿತ್ರರಂಗದ ದಂತ ಕಥೆಯಾಗಿರುವ ನಟ ಡಾ.ರಾಜ್ ಕುಮಾರ್ ಅವರ ಕುಟುಂಬ ಎಂದಿನಿಂದಲೂ ರಾಜಕೀಯದಿಂದ ದೂರ ಉಳಿದಿತ್ತು. ಆದರೆ 2014ರಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಜನತಾ ದಳದಿಂದ (ಜಾತ್ಯತೀತ) ಸ್ಪರ್ಧಿಸಿದ್ದ ಗೀತಾ ಶಿವರಾಜಕುಮಾರ್ ಅವರು 3,65,580 ಮತಗಳ ಅಂತರದಿಂದ ಸೋತಿದ್ದರು. . ಆದರೆ ಈ ಬಾರಿ ಗೀತಾ ಶಿವರಾಜಕುಮಾರ್ ಅವರಿಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಬೆಂಬಲದ ಜೊತೆಗೆ ಕನ್ನಡ ಚಿತ್ರರಂಗದ ನೆರವೂ ದಕ್ಕಿದೆ.

ಕ್ಯಾಬಿನೆಟ್ ಮಂತ್ರಿ ಮತ್ತು ಅವರ ಸಹೋದರ ಮಧು ಬಂಗಾರಪ್ಪ ಅವರು ತಮ್ಮ ಸಹೋದರಿಯ ಹಿಂದೆ 'ಬಂಡೆ'ಯಂತೆ ನಿಂತಿದ್ದಾರೆ. ಈ ಮೂಲಕ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಹೆಣ್ಣ್ಮಕ್ಲೆ ಸ್ಟ್ರಾಂಗು ಗುರು..

ತಮ್ಮ ಪತ್ನಿ ಚುನಾವಣೆಗೆ ಸ್ಪರ್ಧಿಸುತ್ತಿರುವುದನ್ನು ಕುರಿತು ಶಿವರಾಜ್‌ ಕುಮಾರ್‌ ಹೇಳುವುದು ಇಷ್ಟು.

“ಕನ್ನಡ ಚಿತ್ರರಂಗದ ‘ಕುಟುಂಬ’ವು ಗೀತಾಗೆ ಬೇಷರತ್ ಬೆಂಬಲವನ್ನು ನೀಡಿದೆ ಎನ್ನುವುದು ನನಗೆ ನಿಜವಾಗಿಯೂ ಹೆಮ್ಮೆಯ ಸಂಗತಿ . ಈ ಮಾತನ್ನು ನಾನು ಗೀತಾಗೂ ಹೇಳಿದ್ದೇನೆ. ಅವಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಗೀತಾ ಯಾವುದೇ ಹಿಂಜರಿಕೆ ಇಲ್ಲದೆ ಮುಂದುವರಿಯಬಹುದು.

ನಿಮಗೆಲ್ಲ ತಿಳಿದಿರುವಂತೆ, ಅಪ್ಪಾಜಿ (ಡಾ ರಾಜ್‌ಕುಮಾರ್) ರಾಜಕೀಯದಿಂದ ದೂರವಿದ್ದರು. ಆದರೆ, ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದರು ಮತ್ತು ಪ್ರತಿ ಸಂದರ್ಭದಲ್ಲೂ ಅವರ ಆಶೀರ್ವಾದ ಪಡೆಯಲು ʼದೊಡ್ಡಮನೆʼ ಗೆ (ಕನ್ನಡ ಚಿತ್ರರಂಗದ ದೊಡ್ಡ ಮನೆ. ಡಾ ರಾಜ್‌ಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಚಲನಚಿತ್ರ ಬಂಧುಗಳು ಈ ರೀತಿ ಉಲ್ಲೇಖಿಸುತ್ತಿದ್ದರು) ಭೇಟಿ ನೀಡುತ್ತಿದ್ದರು. ಅಪ್ಪಾಜಿ ರಾಜಕೀಯದಿಂದ ದೂರವಿದ್ದರೂ ಎಂದೂ ರಾಜಕೀಯವನ್ನು ಧಿಕ್ಕರಿಸಲಿಲ್ಲ. ಅದಕ್ಕಾಗಿಯೇ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ಗೀತಾ ಅವರನ್ನು ಸೊಸೆಯನ್ನಾಗಿ ಮಾಡಿಕೊಂಡರು. ನಾನು ಅವರನ್ನು ಕಂಡಂತೆ ದೂರದಿಂದಲೇ ರಾಜಕೀಯ ನೋಡುತ್ತಿದ್ದರು. ರಾಜಕೀಯವು ಗೀತಾ ಅವರ ರಕ್ತದಲ್ಲಿದೆ, ಏಕೆಂದರೆ ಅವರು ಅದನ್ನು ತಮ್ಮ ತಂದೆಯಿಂದ ಪಡೆದಿದ್ದಾರೆ. ರಾಜಕೀಯದಲ್ಲಿ ಇರುವುದು ಮತ್ತು ಜನಪ್ರತಿನಿಧಿಯಾಗುವುದು ಒಂದು ಜವಾಬ್ದಾರಿಯಾಗಿದೆ, ಇದು ಹೊಣೆಗಾರಿಕೆಯೊಂದಿಗೆ ಬರುತ್ತದೆ. ಇದು ಕೇವಲ ‘ಯಾವುದೇ ಜವಾಬ್ದಾರಿ ಇಲ್ಲದ ಅಧಿಕಾರ’ ಅಲ್ಲ. ರಾಜಕೀಯ ಎನ್ನುವುದು ಕೇವಲ ಪುರುಷರಿಗಾಗಿ ಅಲ್ಲ; ಮಹಿಳೆಯರು ನೀತಿ ನಿರೂಪಣೆಯಲ್ಲಿ ಶಾಸನಗಳನ್ನು ರಚಿಸುವಲ್ಲಿ ಪಾಲುದಾರರಾಗಬೇಕು. ಕನ್ನಡ ಚಿತ್ರರಂಗದಲ್ಲಿ “ಹೆಣ್ಣುಮಕ್ಳೆ ಸ್ಟ್ರಾಂಗು ಗುರು” ಎಂಬ ಪ್ರಚಲಿತ ಮಾತೊಂದಿದೆ ಎಂಬ ಮಾತಿದೆ. ಗೀತಾಗೆ ನಾನು ಶುಭ ಹಾರೈಸುತ್ತೇನೆ”.

ಶಿವರಾಜ್‌ ಕುಮಾರ್‌ ಅವರ ಮಾತಿಗೆ ಪ್ರತಿಕ್ರಿಯಿಸಿರುವ; ಗೀತಾ ಶಿವರಾಜಕುಮಾರ್ ''ಚುನಾವಣಾ ರಾಜಕೀಯಕ್ಕೆ ಧುಮುಕುವುದರಲ್ಲಿ ನನಗೆ ಯಾವುದೇ ಆತಂಕವಿಲ್ಲ. ಈ ಮತ ಕದನದಲ್ಲಿ ಯಾರನ್ನು ಬೇಕಾದರೂ ಆತ್ಮವಿಶ್ವಾಸದಿಂದ ಎದುರಿಸುತ್ತೇನೆ. ನಾನು ವಿಜಯಶಾಲಿಯಾಗುವ ವಿಶ್ವಾಸ ಹೊಂದಿದ್ದೇನೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರ ಮತ್ತು ಕನ್ನಡ ಚಿತ್ರರಂಗಕ್ಕಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ.

ದೊಡ್ಡಮನೆಯ ಋಣ

ಗೀತಕ್ಕ (ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಸುವ ದಿನದಂದು ನಿರ್ಮಾಪಕರು, ವಿತರಕರು, ಪ್ರದರ್ಶಕರು ಮತ್ತು ಕೆಲವು ಕಲಾವಿದರು ಸೇರಿದಂತೆ ಇಡೀ ಚಿತ್ರೋದ್ಯಮ ಶಿವಮೊಗ್ಗದಲ್ಲಿ ಹಾಜರಿರುತ್ತದೆ . ದೊಡ್ಡಮನೆ ಕನ್ನಡ ಚಿತ್ರರಂಗಕ್ಕೆ ಆಸ್ತಿ ಮತ್ತು ದೇವಾಲಯವಾಗಿರುವುದರಿಂದ ನಾವೆಲ್ಲರೂ ಗೀತಾ ಶಿವರಾಜಕುಮಾರ್ ಅವರನ್ನು ಬೆಂಬಲಿಸುತ್ತೇವೆ", ಎಂದು ಕೆಎಫ್ ಸಿಸಿಯ ಅಧ್ಯಕ್ಷ ಎನ್ ಎಂ ಸುರೇಶ್ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ ವಿ ಚಂದ್ರಶೇಖರ್ ಮಾತನಾಡಿ, "ಡಾ. ರಾಜ್‌ಕುಮಾರ್ ಅವರ ಕುಟುಂಬಕ್ಕೆ ಉದ್ಯಮವು ಋಣಿಯಾಗಿರುವುದರಿಂದ, ಕರ್ನಾಟಕ ಮತ್ತು ಕನ್ನಡ ಚಿತ್ರರಂಗದ ಜನರಿಗೆ ಸೇವೆ ಸಲ್ಲಿಸಲು ಬಯಸುವ ಗೀತಾ ಅವರನ್ನು ಬೆಂಬಲಿಸುವುದು ಉದ್ಯಮದ ಸದಸ್ಯರ ಕರ್ತವ್ಯವಾಗಿದೆ" ಎಂದು ಹೇಳಿದರು.

ಶಿವರಾಜಕುಮಾರ್ ಅವರ ನಿಕಟ ಮೂಲಗಳು ಫೆಡರಲ್‌ಗೆ ತಿಳಿಸಿದ್ದು; ಗೀತಾ ಶಿವರಾಜಕುಮಾರ್ ಅವರು ಬುಧವಾರ ಭದ್ರಾವತಿಯಿಂದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದು, ಶಿವರಾಜಕುಮಾರ್ ಅವರು ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪೂಜೆಗಾಗಿ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಮಧು ಬಂಗಾರಪ್ಪ ಅವರು ತಮ್ಮ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಎಲ್ಲ ವರ್ಗದ ಜನರನ್ನು ತಲುಪಲು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹೋಬಳಿ ಕೇಂದ್ರ ಸೇರಿದಂತೆ ವಿವಿಧೆಡೆ 300ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಿದ್ದಾರೆ. ಆಕೆಯ ತಂದೆ ಬಂಗಾರಪ್ಪ ಅವರು ಕೂಡ”ಚುನಾವಣೆ ವೇಳೆ ಈ ರೀತಿ ಪ್ರಚಾರ ಮಾಡುತ್ತಿದ್ದರು’ ಎಂದು ಶಿವಮೊಗ್ಗದ ಹಿರಿಯ ಸಮಾಜವಾದಿ ನಾಯಕರೊಬ್ಬರು ಹೇಳಿದರು.

ಈಶ್ವರಪ್ಪ ಅಖಾಡಕ್ಕಿಳಿದರೆ ಚುನಾವಣಾ ಗತಿಯೇ ಬದಲಾಗುತ್ತದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಬಿವೈ ರಾಘವೇಂದ್ರ ಹಾಗೂ ಗೀತಾ ಶಿವರಾಜಕುಮಾರ್ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದಾಗ್ಯೂ, ಯಡಿಯೂರಪ್ಪ ಅವರು ನಡೆಸುತ್ತಿರುವ ರಾಜವಂಶದ ರಾಜಕೀಯವನ್ನು ವಿರೋಧಿಸಿ ಕೆ ಎಸ್ ಈಶ್ವರಪ್ಪ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ಮುಂದಿನ ಕೆಲವು ದಿನಗಳಲ್ಲಿ ಚುನಾವಣೆ ಯ ಚಹರೆಯೇ ಬದಲಾಗುವ ಸಾಧ್ಯತೆ ಇದೆ.

ರಾಘವೇಂದ್ರ ವಿರುದ್ಧ ಈಶ್ವರಪ್ಪ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸೇರಿದಂತೆ ವಿವಿಧ ವಲಯಗಳ ಒತ್ತಡದ ಹೊರತಾಗಿಯೂ ಮಾಜಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಿದ ಸಾರ್ವಜನಿಕ ಸಭೆಗೆ ಈಶ್ವರಪ್ಪ ಹಾಜರಾಗಲಿಲ್ಲ.

ಇದು ತ್ರಿಕೋನ ಹೋರಾಟವೇ?

ಈಶ್ವರಪ್ಪ ಅಖಾಡಕ್ಕಿಳಿದರೆ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆಗಳಿದ್ದು, ಈಶ್ವರಪ್ಪನವರಿಗೆ ಈ ಕ್ಷೇತ್ರದ ಮತದಾರರ ಮೇಲೆ ಇರುವ ಪ್ರಭಾವವನ್ನು ಕಡೆಗಣಿಸುವುದು ಅಸಾಧ್ಯ. ಹೇಗಿದ್ದರೂ ಮಾಜಿ ಸಿಎಂ ಮಕ್ಕಳು ಸಂಸತ್ತಿಗೆ ಸ್ಪರ್ಧಿಸುವುದು ಖಚಿತವಾಗಿದೆ. ಬಿ.ವೈ ರಾಘವೇಂದ್ರ ಅವರು 2009ರ ಮೊದಲ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜಕುಮಾರ್ ಅವರ ತಂದೆ ಬಂಗಾರಪ್ಪ ಅವರನ್ನು ಸೋಲಿಸಿದ್ದರು.

ಕುಟುಂಬದ ರಾಜಕಾರಣ

Read More
Next Story