ಡಿಕೆಶಿಯವರಿಗೆ ಬುದ್ಧಿಭ್ರಮಣೆಯಾಗಿದೆ : ಆರ್ ಅಶೋಕ್ ಟೀಕೆ
x

ಡಿಕೆಶಿಯವರಿಗೆ ಬುದ್ಧಿಭ್ರಮಣೆಯಾಗಿದೆ : ಆರ್ ಅಶೋಕ್ ಟೀಕೆ


ʻʻಆದಿಚುಂಚನಗಿರಿ ಮಠ ಎಲ್ಲ ಸಮುದಾಯವನ್ನು ಪ್ರೀತಿ ಮಾಡುತ್ತದೆ. ಮಠಕ್ಕೆ ನಾವು ಭೇಟಿ ನೀಡಿದ್ದನ್ನು ಸಹಿಸದೆ, ಹೊಟ್ಟೆ ಉರಿಗೆ ಏನೇನೋ ಹೇಳುತ್ತಿರುವ ಶಿವಕುಮಾರ್ ಅವರಿಗೆ ಬುದ್ಧಿಭ್ರಮಣೆಯಾಗಿದೆʼ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಕೋಲಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʻʻಕಾಂಗ್ರೆ‌ಸ್‌ನಿಂದಲೇ ಒಕ್ಕಲಿಗರಿಗೆ ಹೆಚ್ಚು ಅನ್ಯಾಯವಾಗಿದೆ. ಹಾಗಾಗಿ ಒಕ್ಕಲಿಗರ ಮತ ಕೇಳುವ ನೈತಿಕತೆ ಕಾಂಗ್ರೆಸ್‌ಗೆ ಇಲ್ಲʼʼ ಎಂದು ಹರಿಹಾಯ್ದಿದ್ದಾರೆ.

ʻʻಡಿ.ಕೆ. ಶಿವಕುಮಾರ್ ಒಕ್ಕಲಿಗ ಸಮುದಾಯದ ನಾಯಕ ಅಲ್ಲ. ಕುಕ್ಕರ್ ಬಾಂಬರ್‌ನನ್ನು ಬ್ರದರ್ ಎಂದಿರುವ ಶಿವಕುಮಾರ್, ನಮ್ಮನ್ನು ಬ್ರದರ್ ಎಂದು ಹೇಳುವ ನೈತಿಕತೆ ಕಳೆದುಕೊಂಡಿದ್ದಾರೆʼʼ ಎಂದರು.

ʻʻಕುಮಾರಸ್ವಾಮಿ ಸರ್ಕಾರ ಉರುಳಿಸಿದ್ದು ಮತ್ತು ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದು ಕಾಂಗ್ರೆಸ್ಸಿನವರೇ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರʼʼ ಎಂದು ಹೇಳಿದರು.

Read More
Next Story