LIVE | ಚಿನ್ನಯ್ಯ ಹೇಳಿಕೆಯಲ್ಲ, ಅಸಹಜ ಸಾವುಗಳ ತನಿಖೆಯಾಗಲಿ! SIT ವೈಖರಿಗೆ ಮಹಿಳಾ ಆಯೋಗ ಗರಂ | Dharmasthala Case

5 Nov 2025 10:56 AM IST

ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು! ವಿಶೇಷ ತನಿಖಾ ತಂಡದ (SIT) ತನಿಖಾ ವೈಖರಿಗೆ ರಾಜ್ಯ ಮಹಿಳಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ಚಿನ್ನಯ್ಯನ ಹೇಳಿಕೆ ಮತ್ತು ಪತ್ತೆಯಾದ ತಲೆಬುರುಡೆಗಳ ಸುತ್ತ ಮಾತ್ರ ತನಿಖೆ ಸೀಮಿತವಾಗಿದೆ ಎಂದು ಆಕ್ಷೇಪಿಸಿರುವ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ, ಎಸ್‌ಐಟಿ ಮುಖ್ಯಸ್ಥರಿಗೆ ಖಡಕ್ ಪತ್ರ ಬರೆದಿದ್ದಾರೆ. ಈ ವಿಷಯದ ಬಗ್ಗೆ ದ ಫೆಡರಲ್ ಕರ್ನಾಟಕದ LIVE ವರದಿ ವೀಕ್ಷಿಸಿ....