ಕೆ.ಎನ್.ರಾಜಣ್ಣ V/S ರಂಗನಾಥ್- ಕೃಷಿ ಸಾಲ ವಿತರಣೆ ವಿಚಾರಕ್ಕೆ ಗುದ್ದಾಟ
ತುಮಕೂರು ಜಿಲ್ಲೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ವಿರುದ್ಧ ಕುಣಿಗಲ್ ಕ್ಷೇತ್ರದ ಶಾಸಕ ಡಾ.ಎಚ್.ಡಿ.ರಂಗನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಆಗುತ್ತಿದೆ. ನಮ್ಮ ಕುಣಿಗಲ್ ತಾಲ್ಲೂಕಿಗೆ ಬೇಕಂತಲೇ ಕೃಷಿ ಸಾಲ ಬಿಡುಗಡೆ ಮಾಡುತ್ತಿಲ್ಲ ಎಂದು ಸದನದಲ್ಲಿ ರಂಗನಾಥ್ ಪ್ರಶ್ನೆ ಮಾಡಿದ್ದರು. ಈ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ.


