ಭ್ರಷ್ಟಾಚಾರ| ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲದಲ್ಲಿ ಏನೇನಾಗಿದೆ ಎಂದು ಪ್ರಶ್ನಿಸಿದ ಖಾದರ್

30 Oct 2025 4:31 PM IST

ವಿಧಾನಭಾಧ್ಯಕ್ಷ ಯು.ಟಿ.‌ಖಾದರ್ ಅವರು ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ʼದ ಫೆಡರಲ್ ಕರ್ನಾಟಕʼದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ವಿಧಾನಸೌಧದ ಆವರಣದಲ್ಲಿ ನಡೆದ ಪುಸ್ತಕ ಮೇಳದಲ್ಲಿ ಭ್ರಷ್ಟಾಚಾರ, ಶಾಸಕರ ಭವನದ ರೂಮುಗಳಿಗೆ ಕೇವಲ 11 ಸಾವಿರ ರೂಪಾಯಿ ಸ್ಮಾರ್ಟ್ ಲಾಕ್ ಹಾಕಿದ್ದು, ಅದರ ಮೂರು ಪಟ್ಟು ಬಿಲ್ ಮಾಡಿ ಹಣ ಪಡೆದಿದ್ದಾರೆ. ಅಧಿವೇಶನದ ವೇಳೆ ಶಾಸಕರಿಗೆ ಅಗತ್ಯ ಇಲ್ಲದಿದ್ದರೂ ಊಟ, ತಿಂಡಿ ವ್ಯವಸ್ಥೆ, ರೀಕ್ಲೇನರ್ ಚೇರ್ ವ್ಯವಸ್ಥೆ ಮಾಡಿ ಹಣ ಪೋಲು ಮಾಡಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ್ದರು.‌ ಈ ಎಲ್ಲಾ ಆರೋಪಗಳಿಗೆ ಯು.ಟಿ.‌ಖಾದರ್‌ ಉತ್ತರ ‌ನೀಡಿದ್ದಾರೆ