ಮದ್ಯ ನಿಷೇಧಿಸಿದರೆ ಸಿದ್ದರಾಮಯ್ಯ ಪೊಟೋ ಇಟ್ಟು ಪೂಜಿಸುತ್ತೇನೆ-ಬಿಜೆಪಿ ಶಾಸಕ ಶರಣು ಸಲಗಾರ್
ಉತ್ತರ ಕರ್ನಾಟಕ ಅಭಿವೃದ್ಧಿ ಹಾಗು ಸಮಸ್ಯೆಗಳ ಬಗ್ಗೆ ವಿಧಾನಸಭೆಯ ಕಲಾಪದಲ್ಲಿ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗಾರ್ ಮಾತನಾಡಿದರು. ಮದ್ಯ ಮಾರಾಟ ನಿಷೇಧ ಹಾಗು ಮಾದಕವಸ್ತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಿಎಂ ಪೊಟೋ ಇಟ್ಟು ಪೂಜೆ ಮಾಡುತ್ತೇನೆ ಎಂದು ಮನವಿಮಾಡಿದರು. ದ ಫೆಡರಲ್ ಕರ್ನಾಟಕದ ಜತೆ ಶರಣು ಸಲಗಾರ್ ಮದ್ಯ ಹಾಗು ಮಾದಕ ವಸ್ತುಗಳ ಹಾವಳಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ.


