Bheema Shaale | ಗ್ರಾಮೀಣ ಮಕ್ಕಳಿಗಾಗಿ ಕನ್ನಡಿಗನ ಭೀಮಶಾಲೆ | ಉಚಿತ ತಮಟೆ, ಇಂಗ್ಲಿಷ್ ತರಬೇತಿ | Jai Bhim |Tejaswi

11 Jun 2024 10:38 AM GMT

ಕನ್ನಡದ ಯುವ ಬರಹಗಾರ ನವೀನ್ ತೇಜಸ್ವಿ , ಭೀಮಶಾಲೆ ಎನ್ನುವ ಪರಿಕಲ್ಪನೆಯೊಂದಿಗೆ ಗ್ರಾಮೀಣ ಭಾಗದ ಮಕ್ಕಳಿಗೆ ತಮಟೆ ಬಾರಿಸುವುದು ಸೇರಿದಂತೆ ವಿವಿಧ ಕಲೆಗಳನ್ನು ಉಚಿತವಾಗಿ ಹೇಳಿಕೊಡುತ್ತಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪಠ್ಯ – ಪುಸ್ತಕದ ಹೊರತಾದ ಕಲೆಗಳಿಂದ ಇಂದಿಗೂ ವಂಚಿತರಾಗುತ್ತಿದ್ದು, ಅವಕಾಶ ವಂಚಿತ ಮಕ್ಕಳಿಗಾಗಿಯೇ ಭೀಮಶಾಲೆ ಎನ್ನುವ ಪರಿಕಲ್ಪನೆ ಶುರುವಾಗಿದೆ. ಭೀಮಶಾಲೆ ಎಂದರೇನು, ಗ್ರಾಮೀಣ ಮಕ್ಕಳು ಇದರಿಂದ ಕಲಿಯುತ್ತಿರುವುದೇನು ಎನ್ನುವ ವಿವರ ಈ ವಿಡಿಯೋದಲ್ಲಿದೆ.