ಬೆಂಗಳೂರಿನಲ್ಲಿ ಮಳೆ : ಬಿಬಿಎಂಪಿ ಸಿದ್ಧತೆಯ ಬಣ್ಣ ಬಯಲು!

7 Jun 2024 2:08 PM GMT  ( Updated:2024-06-07 14:22:48  )

ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದ್ದು ಉತ್ತಮ ಮಳೆಯಾಗುತ್ತಿದೆ. ಆದರೆ, ಇದೇ ವೇಳೆ ಮಳೆಯಿಂದ ಎದುರಾಗುವ ಅನಾಹುತಗಳನ್ನು ತಪ್ಪಿಸಲು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಬಿಬಿಎಂಪಿ ಎಡವಿದೆ ಎನ್ನುವ ಆರೋಪವೂ ಸಹ ಸಾರ್ವಜನಿಕರಿಂದ ಕೇಳಿಬಂದಿದೆ. ಬೆಂಗಳೂರಿನಲ್ಲಿ ಮಳೆಯಿಂದ ಮರಗಳು, ಮರದ ರಂಬೆ, ಕೊಂಬೆಗಳು ಧರೆಗುರುಳಿದ್ದು, ತರೆರವು ಕಾರ್ಯಾಚರಣೆ ನಡೆದಿಲ್ಲ. ತಗ್ಗು ಪ್ರದೇಶ ಹಾಗೂ ಅಂಡರ್ ಪಾಸ್‌ಗಳಿಗೆ ನೀರು ನುಗ್ಗುತ್ತಿದ್ದು, ಸಂಚಾರ ದಟ್ಟಣೆ ಉಂಟಾಗುತ್ತಿದೆ.