ಗುಡ್ಡ ಕುಸಿತ | ಕೊಂಕಣ ರೈಲ್ವೇ ಸಂಚಾರ ರದ್ದು, ಮಾರ್ಗ ಬದಲಾವಣೆ
x

ಗುಡ್ಡ ಕುಸಿತ | ಕೊಂಕಣ ರೈಲ್ವೇ ಸಂಚಾರ ರದ್ದು, ಮಾರ್ಗ ಬದಲಾವಣೆ


ಗೋವಾದ ಪೆರ್ನೆಮ್‌ನಲ್ಲಿ ಸುರಂಗ ರೈಲು ಮಾರ್ಗದೊಳಗೆ ನೀರು ನಿಂತಿದ್ದರಿಂದ ಬುಧವಾರ ಬೆಳಿಗ್ಗೆ ಕೊಂಕಣ ರೈಲ್ವೆ ಮಾರ್ಗದ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಲವು ರೈಲುಗಳ ರದ್ದತಿ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕೊಂಕಣ ರೈಲ್ವೆ ನಿಗಮ (ಕೆಆರ್‌ಸಿಎಲ್) ಉಪ ಪ್ರಧಾನ ವ್ಯವಸ್ಥಾಪಕ ಬಾಬನ್ ಘಾಟ್ಗೆ ಅವರು, ʻʻಮಧುರೆ-ಪೆರ್ನೆಮ್ ವಿಭಾಗದ ನಡುವಿನ ಪೆರ್ನೆಮ್ ಸುರಂಗದಲ್ಲಿ ನೀರು ತುಂಬಿಕೊಂಡಿರುವುದರಿಂದ ಮಂಗಳವಾರ ಮಧ್ಯಾಹ್ನ 2.35 ರಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆʼʼ ಎಂದು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ 10.13ಕ್ಕೆ ಸುರಂಗದೊಳಗಿನ ನೀರನ್ನು ಹೊರತೆಗೆದು ಸಂಚಾರಕ್ಕೆ ಅನುವು ಮಾಡಲಾಯಿತು. ಆದಾಗ್ಯೂ, ಬುಧವಾರ ಬೆಳಗಿನಜಾವ 2.59 ಕ್ಕೆ ಮತ್ತೆ ಹೆಚ್ಚಿನ ನೀರು ಸುರಂಗದೊಳಗೆ ಹರಿದಿದ್ದರಿಂದ ಮತ್ತೆ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಎಂದು ಅಧಿಕಾರಿ ತಿಳಿಸಿದ್ದಾರೆ.

ಬುಧವಾರ ಕೆಆರ್‌ಸಿಎಲ್ ಹೊರಡಿಸಿದ ಬುಲೆಟಿನ್ ಪ್ರಕಾರ, 10104 ಮಾಂಡೋವಿ ಎಕ್ಸ್‌ಪ್ರೆಸ್ (ಮಾಂಡೋವಿಯಿಂದ ಮುಂಬೈಗೆ), 50108 ಮಾರ್ಗೋವಾದಿಂದ ಸಾವಂತವಾಡಿ (ಮಹಾರಾಷ್ಟ್ರ) ಪ್ಯಾಸೆಂಜರ್ ರೈಲು, 22120 ಮಾರ್ಗೋವಾದಿಂದ ಮುಂಬೈ ತೇಜಸ್ ಎಕ್ಸ್‌ಪ್ರೆಸ್, 12052 ಜನಶತಾಬ್ಧಿ ಮುಂಬೈ ಎಕ್ಸ್‌ಪ್ರೆಸ್ ಮತ್ತು 10106 ಸಾವಂತವಾಡಿ-ದಿವಾ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

19577 ತಿರುನೆಲ್ವೇಲಿ-ಜಾಮ್‌ನಗರ ಎಕ್ಸ್‌ಪ್ರೆಸ್, 16336 ನಾಗರ್‌ಕೋಯಿಲ್-ಗಾಂಧಿಧಾಮ್ ಎಕ್ಸ್‌ಪ್ರೆಸ್, 12283 ಎರ್ನಾಕುಲಂ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್, 22655 ಎರ್ನಾಕುಲಂ-ಹಜರತ್ ನಿಜಾಮುದ್ದೀನ್ ಎಕ್ಸ್‌ಪ್ರೆಸ್ ಮತ್ತು 16346 ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

Read More
Next Story