
Maha Kumbh 2025 : ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ, ಐವರು ಮಕ್ಕಳು ಸೇರಿ 18 ಭಕ್ತರ ಸಾವು
Maha Kumbh 2025: ಏಕಕಾಲಕ್ಕೆ ಹಲವಾರು ಪ್ರಯಾಣಿಕರು ನುಗ್ಗಿದ ಕಾರಣ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿ: ಶನಿವಾರ ರಾತ್ರಿ ನವದೆಹಲಿ ರೈಲ್ವೇ ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ 15 ಮಂದಿ ಸಾವನ್ನಪ್ಪಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಲೋಕ್ ನಾರಾಯಣ ಜೈ ಪ್ರಕಾಶ್ (LNJP) ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮೃತಪಟ್ಟವರಲ್ಲಿ ಇಬ್ಬರು ಮಕ್ಕಳು ಇದ್ದಾರೆ ಎಂದು ವರದಿಯಾಗಿವೆ. ಇವರೆಲ್ಲರೂ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಐತಿಹಾಸಿಕ ಕುಂಭ ಮೇಳಕ್ಕೆ ಹೋಗಲು ನಿಲ್ದಾಣದಲ್ಲಿ ಸೇರಿದ್ದರು ಎಂದು ಪ್ರಾಥಮಿಕ ವರದಿಗಳು ಹೇಳಿವೆ.
ಕಾಲ್ತುಳಿತದಲ್ಲಿ 10 ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದಂತೆ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಹಾಗೂ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ಲಾಟ್ಫಾರ್ಮ್ 13 ಮತ್ತು 14ರಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಹಾ ಕುಂಭ ಮೇಳಕ್ಕೆ ಹೋಗಿದ್ದ ಸಾವಿರಾರು ಭಕ್ತರು ತಮ್ಮ ಊರಿಗೆ ತೆರಳುವ ರೈಲುಗಳನ್ನು ಹತ್ತಲು ಜಮಾಯಿಸಿದ್ದರಿಂದ ದುರ್ಘಟನೆ ಸಂಭವಿಸಿದೆ.
ಭೀಕರ ಘಟನೆಗೆ ಸಾಕ್ಷಿಯಾಗಿರುವ ಹಲವು ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ಮಕ್ಕಳು ಪೋಷರಕರು ತಮ್ಮ ಸಾಮಾಗ್ರಿಗಳನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ದಾಖಲಾಗಿವೆ.
ಆರಂಭಿಕ ವರದಿಗಳ ಪ್ರಕಾರ, ಭಾರಿ ಜನಸಂದಣಿಯಿಂದ ಉಸಿರಾಟದ ತೊಂದರೆ ಉಂಟಾಗಿ ನಾಲ್ಕು ಮಹಿಳೆಯರು ಪ್ರಜ್ಞಾಹೀನರಾಗಿದ್ದರು. ನಂತರ ಉಂಟಾದ ದೊಬಿಯಿಂದ ಹಲವರು ಮೃತಪಟ್ಟಿದ್ದಾರೆ.
ಏನಿದು ಘಟನೆ:
ಪ್ರಯಾಗರಾಜ್ ಎಕ್ಸ್ಪ್ರೆಸ್ ರೈಲು ನಿಲ್ದಾಣದ 14ನೇ ಪ್ಲ್ಯಾಟ್ಫಾರ್ಮ್ನಲ್ಲಿ ನಿಲ್ಲಿಸಿದ ವೇಳೆ ಭಾರಿ ಪ್ರಮಾಣದ ಪ್ರಯಾಣಿಕರು ಹತ್ತಲು ಮುಂದಾದಾಗ ಘಟನೆ ಸಂಭವಿಸಿದೆ. ಸ್ವಾತಂತ್ರ್ಯ ಸೇನಾನಿ ಎಕ್ಸ್ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲುಗಳು ತಡವಾಗಿರುವುದು ಕೂಡ ಇದಕ್ಕೆ ಕಾರಣ. ಪ್ರಯಾಣಿಕರು ಪ್ಲ್ಯಾಟ್ಫಾರ್ಮ್ 12, 13, 14ರಲ್ಲಿಏಕಾಏಕಿ ಜಮಾಯಿಸಿದ್ದರು. ಅಧಿಕೃತ ಮೂಲಗಳ ಪ್ರಾ 1500 ಜನರಲ್ ಟಿಕೆಟ್ಗಳು ಮಾರಾಟವಾಗಿದ್ದವು, ಇದರಿಂದ ಜನಸಂದಣಿ ಅತಿಯಾಗಿ ಹೆಚ್ಚಾಗಿ ನಿಯಂತ್ರಣ ತಪ್ಪಿತು ಎಂದು ರೈಲ್ವೆ ಪೊಲೀಸ್ ಉಪ ಆಯುಕ್ತ (DCP) ಕೆ.ಪಿ.ಎಸ್. ಮಲ್ಹೋತ್ರಾ ಚತಿಳಿಸಿದ್ದಾರೆ.
Live Updates
- 16 Feb 2025 9:57 AM IST
ನನ್ನ ಅಮ್ಮ ಮೃತಪಟ್ಟರು
ಕಾಲ್ತುಳಿತದಲ್ಲಿ ತನ್ನ ತಾಯಿ ಮೃತಪಟ್ಟಿದ್ದಾರೆ ಎಂದು ಸಂತ್ರಸ್ತರಲ್ಲಿ ಒಬ್ಬರು ಹೇಳಿದ್ದಾರೆ. "ನಾವು ಬಿಹಾರದ ಛಾಪ್ರಾದವರು. ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದೆವು, ಆದರೆ ನನ್ನ ತಾಯಿ ಗಲಾಟೆಯಲ್ಲಿ ಮೃತಪಟ್ಟಿದ್ದಾಳೆ.
ಘಟನೆ ಬಳಿಕ ಆ ಕುಟಂಬದ ಮಹಿಳೆಯೊಬ್ಬರು ಕುಸಿದು ಬಿದ್ದಿದ್ದಾರೆ. ಪ್ರಯಾಣಿಕರು ಪರಸ್ಪರ ತಳ್ಳಿದ್ದರಿಂದ ಕೆಲವರಿಗೆ ಗಾಯಗಳಾಗಿವೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್ಒ ) ಹಿಮಾಂಶು ಉಪಾಧ್ಯಾಯ ತಿಳಿಸಿದ್ದಾರೆ.
- 16 Feb 2025 9:55 AM IST
ಎನ್ಡಿಆರ್ಎಫ್ನಿಂದ ಪರಿಹಾರ ಕಾರ್ಯಾಚರಣೆ
- 16 Feb 2025 9:54 AM IST
ರೈಲ್ವೆ ಇಲಾಖೆ ಡಿಸಿಪಿ ಹೇಳುವುದೇನು?
- 16 Feb 2025 9:51 AM IST
ಮೃತಪಟ್ಟ 18ರಲ್ಲಿ 5 ಮಕ್ಕಳು ಸೇರಿದ್ದಾರೆ
ಮೃತರನ್ನು ಆಶಾ ದೇವಿ (79), ಪಿಂಕಿ ದೇವಿ (41), ಶೀಲಾ ದೇವಿ (50), ವ್ಯೋಮ್ (25), ಪೂನಂ ದೇವಿ (40), ಲಲಿತಾ ದೇವಿ (35), ಸುರುಚಿ (11), ಕೃಷ್ಣ ದೇವಿ (40), ವಿಜಯ್ ಸಾಹ್ (15), ನೀರಜ್ (12), ಶಾಂತಿ ದೇವಿ (40), ಪೂಜಾ ಕುಮಾರ್ (8), ಸಂಗೀತಾ ಮಲಿಕ್ (4), ಪೂನಂ (3), ಪೂನಂ (3) ಮನೋಜ್ (47) ಎಂದು ಎಂದು ಗುರುತಿಸಲಾಗಿದೆ.
- 16 Feb 2025 9:50 AM IST
ಹಿಂದಿನಿಂದ ತಳ್ಳಿದ್ದೇ ಘಟನೆ ಕಾರಣ
ಪ್ರಯಾಣಿಕ ಧರ್ಮೇಂದ್ರ ಸಿಂಗ್ ಎಂಬುವರು ಘಟನೆ ಬಗ್ಗೆ ವಿವರಿಸಿ "ನಾನು ಪ್ರಯಾಗ್ರಾಜ್ಗೆ ಹೋಗುತ್ತಿದ್ದೆ ರೈಲುಗಳು ತಡವಾಗಿ ಬಂದಿದ್ವವು. ಕೆಲವು ರದ್ದಾಗಿದ್ದವು. ಹೀಗಾಗಿ ನಿಲ್ದಾಣ ಜನದಟ್ಟಣೆಯಿಂದ ಕೂಡಿತ್ತು. ಈ ನಿಲ್ದಾಣದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಜನರು ಇದ್ದರು. ನನ್ನ ಮುಂದೆಯೇ ಆರೇಳು ಮಹಿಳೆಯರನ್ನು ಸ್ಟ್ರೆಚರ್ ಮೇಲೆ ಕರೆದೊಯ್ಯಲಾಯಿತು ಎಂದು ಹೇಳಿದ್ದಾರೆ.
ಪ್ರಮೋದ್ ಚೌರಾಸಿಯಾ ಎಂಬುವರು ಮಾತನಾಡಿ, "ನಾನು ಪುರುಷೋತ್ತಮ್ ಎಕ್ಸ್ಪ್ರೆಸ್ನಲ್ಲಿ ಸ್ಲೀಪರ್ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದೆ. ಆದರೂ ರೈಲು ಹತ್ತಲು ಸಾಧ್ಯವಾಗಲಿಲ್ಲ. ಮಹಿಳಾ ಪ್ರಯಾಣಿಕರು ಜನಸಂದಣಿಯಲ್ಲಿ ಸಿಲುಕಿಕೊಂಡರು. ನೂಕುನುಗ್ಗಲು ಇತ್ತು. ನಾವು ನೂಕಾಟ ನೋಡಿ ಹೆದರಿ ಹೊರಗೆ ಬಂದೆವು. ಹೀಗಾಗಿ ಜೀವ ಉಳಿಯಿತು ಎಂದು ಹೇಳಿದ್ದಾರೆ.
- 16 Feb 2025 9:47 AM IST
ಪರಿಹಾರ ಘೋಷಿಸಿದ ರೈಲ್ವೆ
ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ., ಸಣ್ಣಪುಟ್ಟ ಗಾಯಗೊಂಡವರಿಗೆ 1 ಲಕ್ಷ ರೂಪಾಯಿ ಪ್ರಕಟಿಸಲಾಗಿದೆ.
- 16 Feb 2025 9:45 AM IST
ಆಘಾತಕಾರಿ ಘಟನೆ : ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘಟನೆ ಬಗ್ಗ ಪ್ರತಿಕ್ರಿಯಿಸಿ , "ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಉಂಟಾಗಿರುವ ಪ್ರಾಣಹಾನಿ ಅತ್ಯಂತ ದುಃಖಕರ ಮತ್ತು ಆಘಾತಕಾಗಿ. ದುಃಖಿತ ಕುಟುಂಬಗಳಿಗೆ ನನ್ನ ಸಂತಾಪವಿದೆ. ಅಗಲಿದ ಆತ್ಮಗಳಿಗೆ ಮೋಕ್ಷ ಸಿಗಲಿ. ದುಃಖಿತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಅದೇ ರೀತಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ರಾಮನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
- 16 Feb 2025 9:43 AM IST
ದೆಹಲಿ ಪೊಲೀಸರಿಂದ ತನಿಖೆ ಆರಂಭ
ಕಾಲ್ತುಳಿತದ ಬಗ್ಗೆ ದೆಹಲಿ ಪೊಲೀಸರು ತನಿಖೆ ಆರಂಭಿಸಿದ್ದು, ಏನಾಯಿತು ಎಂಬುದನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.
"ಕಾಲ್ತುಳಿತಕ್ಕೆ ಕಾರಣ ಕಂಡು ಹಿಡಿಯುವುದು ನಮ್ಮ ಮುಖ್ಯ ಗುರಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಆ ಸಮಯದಲ್ಲಿ ಅಧಿಕಾರಿಗಳು ಮಾಡಿರುವ ಪ್ರಕಟಣೆಗಳ ಎಲ್ಲಾ ಮಾಹಿತಿಯನ್ನು ನಾವು ಸಂಗ್ರಹಿಸುತ್ತೇವೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ಲಾಟ್ ಫಾರ್ಮ್ ಬದಲಾವಣೆಯ ಬಗ್ಗೆ ತಪ್ಪು ಪ್ರಕಟಣೆ ಗೊಂದಲಕ್ಕೆ ಕಾರಣವಾಗಿರಬಹುದು ಎಂದು ಮೂಲಗಳು ತಿಳಿಸಿವೆ.
ಕಾಲ್ತುಳಿತಕ್ಕೂ ಮುನ್ನ ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ಪ್ರಯಾಗ್ರಾಜ್ಗೆ ಹೋಗುವ ರೈಲುಗಳನ್ನು ಹತ್ತಲು ದೊಡ್ಡ ಸಂಖ್ಯೆಯ ಪ್ರಯಾಣಿಕರು ಕಾಯುತ್ತಿದ್ದರು. ರೈಲು ವಿಳಂಬವೇ ಕಾಲ್ತುಳಿತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.