ಯೆಚೂರಿ ಅವರಿಗೆ ಸೋನಿಯಾ, ಪಿಣರಾಯಿ ಅಂತಿಮ ನಮನ
x
ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಅವರ ಪತ್ನಿ ಸೀಮಾ ಚಿಶ್ತಿ ಅವರೊಂದಿಗೆ ಸೋನಿಯಾ ಗಾಂಧಿ

ಯೆಚೂರಿ ಅವರಿಗೆ ಸೋನಿಯಾ, ಪಿಣರಾಯಿ ಅಂತಿಮ ನಮನ


ನವದೆಹಲಿ: ಪಕ್ಷದ ಪ್ರಧಾನ ಕಚೇರಿ ಎ.ಕೆ.ಜಿ. ಭವನದಲ್ಲಿ ಹಿರಿಯ ಮಾರ್ಕ್ಸ್‌ವಾದಿ ನಾಯಕ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಿಗೆ ಶನಿವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕೆಂಪು ಬಾವುಟದಲ್ಲಿ ಸುತ್ತಿದ ಅವರ ಪಾರ್ಥಿವ ಶರೀರವನ್ನು ಲಾಲ್ ಸಲಾಂ ಘೋಷಣೆಗಳ ನಡುವೆ ಇಂದು ಬೆಳಗ್ಗೆ ಪಕ್ಷದ ಕಚೇರಿಗೆ ತರಲಾ ಯಿತು. ಪ್ರಕಾಶ್ ಕಾರಟ್, ಬೃಂದಾ ಕಾರಟ್, ಪಿಣರಾಯಿ ವಿಜಯನ್ ಮತ್ತು ಎಂ.ಎ. ಬೇಬಿ ಸೇರಿದಂತೆ ಇತರ ಮುಖಂಡರು ಅವರಿಗೆ ಶ್ರದ್ಧಾಂ ಜಲಿ ಸಲ್ಲಿಸಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಎ.ಕೆ.ಜಿ. ಭವನಕ್ಕೆ ಪಕ್ಷದ ಇತರ ಮುಖಂಡರೊಂದಿಗೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು. ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್, ಆರ್‌ಜೆಡಿ ಸಂಸದ ಮನೋಜ್ ಝಾ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅಂತಿಮ ನಮನ ಸಲ್ಲಿಸಿದರು.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಪುಷ್ಪಗುಚ್ಛ ಅರ್ಪಿಸಿ, ಶುಕ್ರವಾರ ಸಂಜೆ ನಮನ ಸಲ್ಲಿಸಿದ್ದರು.

ಜೆಎನ್‌ಯುನಲ್ಲಿ ಶ್ರದ್ಧಾಂಜಲಿ: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಯೆಚೂರಿ(72), ಏಮ್ಸ್‌ ನಲ್ಲಿ ಗುರುವಾರ ನಿಧನರಾದರು. ಅವ ರನ್ನು ಆಗಸ್ಟ್ 19 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಶುಕ್ರವಾರ ಅವರ ಪಾರ್ಥಿವ ಶರೀರವನ್ನು ಏಮ್ಸ್‌ನಿಂದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಅವರಿಗೆ ಅಂತಿಮ ನಮನ ಸಲ್ಲಿಸಿದರು. ಜೆಎನ್‌ಯುನಲ್ಲಿ ವಿದ್ಯಾರ್ಥಿಯಾಗಿದ್ದಾಗ ಯೆಚೂರಿ ಅವರು 1974 ರಲ್ಲಿ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಭಾಗವಾಗಿದ್ದರು. 1977-78ರಲ್ಲಿ ಜೆಎನ್‌ಯುಎಸ್‌ಯು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಅವರನ್ನು ತುರ್ತು ಪರಿಸ್ಥಿತಿ ಸಮಯದಲ್ಲಿ ಬಂಧಿಸಲಾಯಿತು.

ಆನಂತರ, ಪಾರ್ಥಿವ ಶರೀರವನ್ನು ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಸಿಪಿಐ(ಎಂ) ನಾಯಕರು ತಮ್ಮ ಒಡನಾಡಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರ ದೇಹವನ್ನು ಏಮ್ಸ್‌ಗೆ ಸಂಶೋಧನೆಗಾಗಿ ದಾನ ಮಾಡಲಾಗುವುದು.

ಯೆಚೂರಿ ಅವರು ಪತ್ನಿ ಸೀಮಾ ಚಿಶ್ತಿ, ಇಬ್ಬರು ಮಕ್ಕಳು ಅಖಿಲಾ ಮತ್ತು ಡ್ಯಾನಿಶ್ ಅವರನ್ನು ಅಗಲಿದ್ದಾರೆ. ಹಿರಿಯ ಮಗ, ಆಶಿಶ್ ಅವರು 2021 ರಲ್ಲಿ ಕೋವಿಡ್‌ನಿಂದ ನಿಧನರಾದರು. ಯೆಚೂರಿ ಅವರು ಮೊದಲು ಇಂದ್ರಾಣಿ ಮಜುಂದಾರ್ ಅವರನ್ನು ವಿವಾಹವಾಗಿದ್ದರು.

Read More
Next Story