ಭಯೋತ್ಪಾದಕರ ದಾಳಿ ಆತಂಕ:  ಪ್ರಧಾನಿ  ಪ್ರಮಾಣ ವಚನ ವೇಳೆ ದೆಹಲಿಯಲ್ಲಿ ವಿಮಾನ ಹಾರಾಟ ನಿಷೇಧ
x
ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಭಯೋತ್ಪಾದಕರ ದಾಳಿ ಆತಂಕ: ಪ್ರಧಾನಿ ಪ್ರಮಾಣ ವಚನ ವೇಳೆ ದೆಹಲಿಯಲ್ಲಿ ವಿಮಾನ ಹಾರಾಟ ನಿಷೇಧ

ರಾಷ್ಟ್ರ ರಾಜಧಾನಿ ವಿಮಾನ ಹಾರಾಟ ನಿಷೇಧಿತ ವಲಯ ಎಂದು ಪೊಲೀಸ್ ಆಯುಕ್ತ ಸಂಜಯ್ ಅರೋರಾ ಶುಕ್ರವಾರ ( ಜೂನ್‌8) ಆದೇಶ ಹೊರಡಿಸಿದ್ದಾರೆ.


Click the Play button to hear this message in audio format

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಭಾನುವಾರ (ಜೂನ್ 9) ರಾತ್ರಿ 7.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಹಿನ್ನಲೆ ದೆಹಲಿ ಪೊಲೀಸರು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಹೊರಡಿಸಿದ್ದು, ರಾಷ್ಟ್ರ ರಾಜಧಾನಿ ವಿಮಾನ ಹಾರಾಟ ನಿಷೇಧಿತ ವಲಯ ಎಂದು ಪೊಲೀಸ್ ಆಯುಕ್ತ ಸಂಜಯ್ ಅರೋರಾ ಶುಕ್ರವಾರ ( ಜೂನ್‌8) ಆದೇಶ ಹೊರಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರದ ಅಂಗವಾಗಿ ಕೆಲವು ಕ್ರಿಮಿನಲ್, ಸಮಾಜವಿರೋಧಿ ಅಂಶಗಳು ಅಥವಾ ಭಯೋತ್ಪಾದಕರು ಸಾರ್ವಜನಿಕರಿಗೆ, ಗಣ್ಯರಿಗೆ ಮತ್ತು ಪ್ರಮುಖ ಸ್ಥಾಪನೆಗಳ ಸುರಕ್ಷತೆಗೆ ಅಪಾಯವನ್ನುಂಟುಮಾಡಬಹುದು ಎಂದು ವರದಿಯಾಗಿದೆ. ಈ ನಿಟ್ಟಿನಲ್ಲಿ ಮೋದಿ ಪ್ರಮಾಣವಚನ ಸ್ವೀಕಾರ ಸಮಯದಲ್ಲಿ "CrPC ಯ ಸೆಕ್ಷನ್ 144 ರ ಪ್ರಕಾರ ಪ್ಯಾರಾ ಗ್ಲೈಡರ್‌ಗಳು, ಪ್ಯಾರಾ-ಮೋಟರ್‌ಗಳು, ಹ್ಯಾಂಗ್ ಗ್ಲೈಡರ್‌ಗಳು, ಯುಎವಿಗಳು, ಯುಎಎಸ್‌ಗಳು, ಮೈಕ್ರೋಲೈಟ್ ಏರ್‌ಕ್ರಾಫ್ಟ್‌ಗಳು, ರಿಮೋಟ್‌ಲಿ ಪೈಲಟ್ ಏರ್‌ಕ್ರಾಫ್ಟ್‌ಗಳಂತಹ ಉಪ-ಸಾಂಪ್ರದಾಯಿಕ ವೈಮಾನಿಕ ಪ್ಲಾಟ್‌ಫಾರ್ಮ್‌ಗಳ ಹಾರಾಟವನ್ನು ನಿಷೇಧಿಸುತ್ತದೆ. ಏರ್ ಬಲೂನ್‌ಗಳು, ಸಣ್ಣ ಗಾತ್ರದ ಚಾಲಿತ ವಿಮಾನಗಳು, ಕ್ವಾಡ್‌ಕಾಪ್ಟರ್‌ಗಳು ಅಥವಾ ಪ್ರಮಾಣ ವಚನ ಸಮಾರಂಭದ ಸಮಯದಲ್ಲಿ ದೆಹಲಿಯ ಮೇಲೆ ವಿಮಾನದಿಂದ ಪ್ಯಾರಾ ಜಂಪ್ ಮಾಡಿದ್ದು ಕಂಡು ಬಂದರೆ ಭಾರತೀಯ ದಂಡ ಸಂಹಿತೆಯ 188 ರ ಪ್ರಕಾರ ಶಿಕ್ಷಾರ್ಹವಾಗಿರುತ್ತದೆ. ಸಂಬಂಧಿತ ಎಲ್ಲರಿಗೂ ಪ್ರತ್ಯೇಕವಾಗಿ ನೋಟಿಸ್ ನೀಡಲು ಸಾಧ್ಯವಿಲ್ಲದ ಕಾರಣ, ಈ ಮೂಲಕ ಆದೇಶವು ಎಕ್ಸ್ಪಾರ್ಟ್ ಆಗಿ ಅಂಗೀಕರಿಸಲ್ಪಟ್ಟಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ತಿಳಿಸಿದ್ದಾರೆ.

ಈ ನಿರ್ಬಂಧಗಳು ಜೂನ್ 9 ರಿಂದ ಜಾರಿಗೆ ಬರುತ್ತವೆ ಮತ್ತು ಜೂನ್ 10 ರವರೆಗೆ ಇರುತ್ತವೆ ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Read More
Next Story