IPL 2024:  ಕೆಕೆಆರ್‌ ಗೆಲ್ಲುವ ತಂಡ- ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್
x

IPL 2024: ಕೆಕೆಆರ್‌ ಗೆಲ್ಲುವ ತಂಡ- ಮ್ಯಾಥ್ಯೂ ಹೇಡನ್, ಕೆವಿನ್ ಪೀಟರ್ಸನ್


ಚೆನ್ನೈ, ಮೇ 25- ಉತ್ತಮ ಸ್ಪಿನ್ ದಾಳಿ ಮತ್ತು ಎದುರಾಳಿಗಳಾದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಉತ್ತಮ ದಾಖಲೆಯಿಂದಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ಭಾನುವಾರ ಐಪಿಎಲ್ ಪ್ರಶಸ್ತಿ ಹಿಡಿಯುವ ಸಾಧ್ಯತೆ ಹೆಚ್ಚು ಎಂದು ಖ್ಯಾತ ಆಟಗಾರರಾದ ಮ್ಯಾಥ್ಯೂ ಹೇಡನ್ ಮತ್ತು ಕೆವಿನ್ ಪೀಟರ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಕೆಕೆಆರ್‌ ಲೀಗ್ ಹಂತದ ಪಂದ್ಯಗಳಲ್ಲಿ ಸನ್‌ ರೈಸರ್ಸ್‌ ಅನ್ನು ಸೋಲಿಸಿತ್ತು. ಇದು ಭಾನುವಾರದ ಪಂದ್ಯದಲ್ಲಿ ಮೇಲುಗೈ ನೀಡಲಿದೆ ಎಂದು ಹೇಳಿದ್ದಾರೆ.

ʻಕೆಕೆಆರ್ ಗೆಲುವಿನ ವಿಶ್ವಾಸವಿದೆ. ಏಕೆಂದರೆ ತಂಡಕ್ಕೆ ಕೆಲವು ದಿನಗಳ ಬಿಡುವು ಸಿಕ್ಕಿದೆ. ಇದರಿಂದ ಸನ್‌ರೈಸರ್ಸ್ ಹೈದರಾಬಾದ್‌ನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯಕವಾಗುತ್ತದೆ,ʼ ಎಂದು ಮ್ಯಾಥ್ಯೂ ಹೇಡನ್(52) ಹೇಳಿದರು.

ʻಸನ್‌ರೈಸರ್ಸ್ ಅನ್ನುಈಗಾಗಲೇ ಸೋಲಿಸಿರುವ, ಉತ್ತಮ ವೇಗವನ್ನು ಪಡೆದುಕೊಂಡಿದೆ. ಕೆಂಪು ಜೇಡಿಮಣ್ಣಿನ ಮೇಲೆ ಸುನೀಲ್ ನರೈನ್ ಮತ್ತು ವರುಣ್ ಚಕ್ರವರ್ತಿ ಅವರ ಗುಣಮಟ್ಟದ ಸ್ಪಿನ್ ತಿರುವು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ನಂತಹ ಕಠಿಣ ಪಂದ್ಯಾವಳಿಯನ್ನು ಗೆಲ್ಲಲು ಆಟಗಾರರಿಗೆ ದೃಢ ಮನೋಬಲ ಮುಖ್ಯʼ ಎಂದು 52 ವರ್ಷದ ಆಸ್ಟ್ರೇಲಿಯದ ಮಾಜಿ ಆರಂಭಿಕ ಆಟಗಾರ ನಂಬಿದ್ದಾರೆ.

ʻಸರಳವಾಗಿ ಹೇಳಬೇಕೆಂದರೆ, ಕೆಲಸವನ್ನು ಸರಿಯಾಗಿ ಮಾಡುವುದು ಮುಖ್ಯ. ಇದು ನಿಜವಾಗಿಯೂ ಸವಾಲಿನ, ಕಠಿಣ ಪಂದ್ಯಾವಳಿ. ಗಟ್ಟಿ ಹೃದಯವುಳ್ಳವರಿಗೆ ಮಾತ್ರ ಕೊನೆಯಲ್ಲಿ ಆ ಟ್ರೋಫಿಯನ್ನು ಎತ್ತುವ ಅವಕಾಶ ಸಿಗುತ್ತದೆ. ಕ್ರೀಡಾಪಟುಗಳ ಜೀವನದಲ್ಲಿ ಅದೃಷ್ಟ ಯಾವಾ ಗಲೂ ಒಂದು ಸಣ್ಣ ಪಾತ್ರವನ್ನು ವಹಿಸುತ್ತದೆ. ಆದರೆ, ಎಲ್ಲಕ್ಕಿಂತ ಹೆಚ್ಚಾಗಿ ಆ ನಿರ್ದಿಷ್ಟ ದಿನದಂದು ತಂಡಕ್ಕೆ ಬದ್ಧತೆ ಖಚಿತಗೊಳ್ಳಲಿದೆ. ರಾಜಸ್ಥಾನ್ ರಾಯಲ್ಸ್‌ ಶುಕ್ರವಾರ ಬ್ಯಾಟಿಂಗ್‌ಗೆ ಬಂದಾಗ ಅವರು ತಮ್ಮನ್ನು ಸಂಪೂರ್ಣವಾಗಿ ನಂಬಲಿಲ್ಲ,ʼ ಎಂದು ಹೇಳಿದರು.

ʻಅವರು ಒತ್ತಡ ಮತ್ತು ಉದ್ವೇಗವನ್ನು ಅನುಭವಿಸಿದರು, ಮತ್ತು ಅವರು ಅದಕ್ಕೆ ಬಲಿಯಾದರು. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾ ದ್ ಪುಟಿದೆದ್ದು ನಿಂತಿತು.ಒಂದು ಸೋಲಿನ ನಂತರ ದೊಡ್ಡ ಪಂದ್ಯಗಳಲ್ಲಿ ಪುಟಿದೇಳುವುದು ಸುಲಭವಲ್ಲ. ಇದು ಬೇಟೆ, ಮತ್ತು ಅದನ್ನು ಗೆಲ್ಲಲು ನೀವು ಅದರಲ್ಲಿರಬೇಕುʼ ಎಂದು ವಿವರಿಸಿದರು.

ʻಈ ಬಾರಿ ಐಪಿಎಲ್ ಕಿರೀಟದ ಸ್ಪರ್ಧೆಯಲ್ಲಿ ಕೆಕೆಆರ್ ಮುಂಚೂಣಿಯಲ್ಲಿದೆ,ʼ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ನಂಬಿದ್ದಾರೆ.

ʻಅಹಮದಾಬಾದ್‌ನಲ್ಲಿ ಸನ್‌ರೈಸರ್ಸ್ ಸೋಲೊಪ್ಪಿದ ರೀತಿ ಇಷ್ಟವಾಗಲಿಲ್ಲ. ಇದು ಭಾನುವಾರ ಅವರನ್ನು ಹಿಂದೆ ಸರಿಸಲಿದೆ ಎಂದುಕೊಂಡಿದ್ದೇನೆ. ಪ್ಯಾಟ್ ಕಮ್ಮಿನ್ಸ್ ಅವರು ಟ್ರಾವಿಸ್ ಹೆಡ್‌ಗೆ ಚೆಂಡು ನೀಡಿದರು. ಶ್ರೇಯಸ್ ಅಯ್ಯರ್ ನಿರಂತರವಾಗಿ ಚೆಂಡು ಬಾರಿಸಿದರು. ಕೆಕೆಆರ್‌ ಈಗಾಗಲೇ ಎಸ್‌ಆರ್‌ಎಚ್‌ ಅನ್ನು ಸೋಲಿಸಿರುವುದು ಸಾಕಷ್ಟುಆತ್ಮವಿಶ್ವಾಸ ನೀಡುತ್ತದೆ. ಆದರೆ, ಎಸ್‌ಎ 20 ಗೆದ್ದಿರುವುದರಿಂದ, ಹೇಗೆ ಗೆಲ್ಲಬೇಕು ಎಂಬುದು ಅವರಿಗೆ ತಿಳಿದಿದೆ. ಟಾಸ್ ನಿರ್ಣಾಯಕ ಅಂಶ ವಹಿಸುತ್ತದೆ,ʼ ಎಂದು ಪೀಟರ್ಸನ್ ಹೇಳಿದರು.

ʻಟಾಸ್ 50-50 ಆಗಿದೆ. ಇಬ್ಬನಿಯ ಸಾಧ್ಯತೆಯನ್ನು ಪರಿಗಣಿಸಬೇಕು ಮತ್ತು ಇಬ್ಬನಿ ಇದ್ದರೆ ಅದಕ್ಕೆ ಸಿದ್ಧವಾಗಿರಬೇಕು. ಕೆಕೆಆರ್ ಆಡಿದ ರೀತಿ, ಕ್ವಾಲಿಫೈಯರಿನಲ್ಲಿ ಗೆಲುವು ಮತ್ತು ಕಳೆದ ಮೂರ್ನಾಲ್ಕು ದಿನದಿಂದ ಅವರ ತಯಾರಿಯನ್ನು ಗಮನಿಸಿದರೆ, ಕೆಕೆಆರ್ ಹೆಚ್ಚು ಅವಕಾಶ ಹೊಂದಿದೆ. ಅಗ್ರಸ್ಥಾನದಲ್ಲಿರುವ ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ಅವರ ಬ್ಯಾಟಿಂಗ್, ಕಳೆದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರ ಅಜೇಯ 50 ಮತ್ತು ಅವರ ಬೌಲರ್‌ಗಳು, ವಿಶೇಷವಾಗಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ನರೇನ್ ಅವರು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇರುವ ಆಟಗಾರರು,ʼ ಎಂದು ಹೇಳಿದರು.



Read More
Next Story