ಕೇರಳ: ಇ.ಪಿ. ಜಯರಾಜನ್ ಸಂಚಾಲಕ ಸ್ಥಾನದಿಂದ ವಜಾ
x

ಕೇರಳ: ಇ.ಪಿ. ಜಯರಾಜನ್ ಸಂಚಾಲಕ ಸ್ಥಾನದಿಂದ ವಜಾ


ಕೇರಳದ ಎಡ ಪ್ರಜಾಸತ್ತಾತ್ಮಕ ರಂಗದ ಸಂಚಾಲಕ ಸ್ಥಾನದಿಂದ ಹಿರಿಯ ಸಿಪಿಐ(ಎಂ) ನಾಯಕ ಇ.ಪಿ. ಜಯರಾಜನ್ ಅವರನ್ನು ತೆಗೆದುಹಾಕಲಾಗಿದೆ.

ಪಕ್ಷದ ರಾಜ್ಯ ಕಾರ್ಯದರ್ಶಿ ಶುಕ್ರವಾರ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಸ್ವಲ್ಪ ಮೊದಲು ಬಿಜೆಪಿ ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರೊಂದಿಗಿನ ಜಯರಾಜನ್‌ ಅವರ ಭೇಟಿ ವಿವಾದ ಸೃಷ್ಟಿಸಿತ್ತು.

ಜಯರಾಜನ್ ಅವರು ರಾಜ್ಯ ಸಮಿತಿ ಸಭೆಗೆ ಹಾಜರಾಗದೆ ತಿರುವನಂತಪುರಂನಿಂದ ಕಣ್ಣೂರಿಗೆ ಮರಳಿದರು. ಕಣ್ಣೂರಿನ ಮನೆಯಲ್ಲಿ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಎಲ್‌ಡಿಎಫ್ ಸಂಚಾಲಕರಾಗಿ ಮಾಜಿ ಸಚಿವ ಟಿ.ಪಿ.ರಾಮಕೃಷ್ಣನ್ ನೇಮಕವಾಗಲಿದ್ದಾರೆ.

Read More
Next Story