J&K: ಭದ್ರತಾ ಪಡೆಗಳಿಂದ ಇಬ್ಬರು 2 ಉಗ್ರರ ಹತ್ಯೆ
x

J&K: ಭದ್ರತಾ ಪಡೆಗಳಿಂದ ಇಬ್ಬರು 2 ಉಗ್ರರ ಹತ್ಯೆ


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಭಾರತೀಯ ಸೇನೆ ಶನಿವಾರ ತಿಳಿಸಿದೆ.

ʻಮುಂದುವರಿದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ,ʼ ಎಂದು ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ತಿಳಿಸಿದೆ.

ಕುಪ್ವಾರದ ಗುಗಲ್‌ಧರ್‌ನಲ್ಲಿ ಪಡೆಗಳು ಅನುಮಾನಾಸ್ಪದ ಚಟುವಟಿಕೆಯನ್ನು ಗುರುತಿಸಿದ್ದು, ಗುಂಡಿನ ಕಾಳಗ ನಡೆಯಿತು ಎಂದು ಕಾರ್ಪ್ಸ್ ಈ ಹಿಂದೆ ಎಕ್ಸ್‌ನ ಪೋಸ್ಟ್‌ನಲ್ಲಿ ಹೇಳಿತ್ತು. ಎನ್‌ಕೌಂಟರ್ ವಲಯದಲ್ಲಿ ಶಸ್ತಾಸ್ತ್ರ ಸಂಗ್ರಹವನ್ನು ಪತ್ತೆಹಚ್ಚಲಾಗಿದೆ. ಶೋಧ ಮುಂದುವರಿದಿದೆ ಎಂದು ಸೇನೆ ಹೇಳಿದೆ.

Read More
Next Story