J&K Election| ಕಾಶ್ಮೀರಿ ಪಂಡಿತ ಮಹಿಳೆ ಸ್ಪರ್ಧೆ;  ಮೂರು ದಶಕಗಳ ಬಳಿಕ ಇದೇ ಮೊದಲು
x
ದೆಹಲಿಯ ಖಾಸಗಿ ವಲಯದ ಮಾಜಿ ಉದ್ಯೋಗಿ ಮತ್ತು ಪುಲ್ವಾಮಾದ ಫ್ರಿಸಲ್ ಗ್ರಾಮದ ಸರಪಂಚ್ ಆಗಿರುವ ಡೈಸಿ ರೈನಾ ಅವರು ಬಿಜೆಪಿಯ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ನಿಂದ ಕಣಕ್ಕಿಳಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.

J&K Election| ಕಾಶ್ಮೀರಿ ಪಂಡಿತ ಮಹಿಳೆ ಸ್ಪರ್ಧೆ; ಮೂರು ದಶಕಗಳ ಬಳಿಕ ಇದೇ ಮೊದಲು

ದೆಹಲಿಯ ಖಾಸಗಿ ವಲಯದ ಮಾಜಿ ಉದ್ಯೋಗಿ ಮತ್ತು ಪುಲ್ವಾಮಾದ ಫ್ರಿಸಲ್ ಗ್ರಾಮದ ಸರಪಂಚ್ ಆಗಿರುವ ಡೈಸಿ ರೈನಾ ಅವರು ಬಿಜೆಪಿಯ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ)ದಿಂದ ಕಣಕ್ಕಿಳಿದ ಏಕೈಕ ಅಭ್ಯರ್ಥಿಯಾಗಿದ್ದಾರೆ.


Click the Play button to hear this message in audio format

ಜಮ್ಮು ಮತ್ತು ಕಾಶ್ಮೀರದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೂರು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಪುಲ್ವಾಮಾ ಪ್ರದೇಶದ ಕಾಶ್ಮೀರಿ ಪಂಡಿತ್ ಮಹಿಳೆ ಡೈಸಿ ರೈನಾ ಸ್ಪರ್ಥಿಸುತ್ತಿದ್ದಾರೆ.

ಭಯೋತ್ಪಾದನೆ ಕಾರಣಕ್ಕಾಗಿ ಕಾಶ್ಮೀರ ಪಂಡಿತರಲ್ಲಿ ಬಹುಮಂದಿ ಜಮ್ಮು ಮತ್ತು ಕಾಶ್ಮೀರ ಬಿಟ್ಟು ವಲಸೆ ಹೋಗಿದ್ದು, ಚುನಾವಣಾ ರಾಜಕೀಯದಲ್ಲಿ ಮಹಿಳಾ ಕಾಶ್ಮೀರ ಪಂಡಿತ ಸಮೂದಾಯದವರು ಕಾಣಿಸಿಕೊಳ್ಳುವುದೇ ದುಸ್ತರವಾಗಿತ್ತು. ಇಂತಹ ಸಂದರ್ಭದಲ್ಲಿ ಡೈಸಿ ರೈನಾ ಸ್ಪರ್ಧಿಸುತ್ತಿರುವುದು ಈ ಬಾರಿಯ ಚುನಾವಣೆಯ ವಿಶೇಷವಾಗಿದೆ.

ದೆಹಲಿಯಲ್ಲಿ ಖಾಸಗಿ ವಲಯದ ಮಾಜಿ ಉದ್ಯೋಗಿ ಮತ್ತು ಪುಲ್ವಾಮಾದ ಫ್ರಿಸಲ್ ಗ್ರಾಮದ ಸರಪಂಚ್ ಆಗಿರುವ ರೈನಾ, ಬಿಜೆಪಿಯ ಮಿತ್ರಪಕ್ಷವಾದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅಠಾವಳೆ) ನಿಂದ ಕಣಕ್ಕಿಳಿದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಅವರು ಪುಲ್ವಾಮಾದ ರಾಜ್ಪೋರಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಯೋಚನೆ ಮಾಡಿರಲಿಲ್ಲ

ಸರಪಂಚ್ ಆಗಿ ಸೇವೆ ಸಲ್ಲಿಸುತ್ತಿದ್ದಾಗ ಅವರು ನಿಯಮಿತವಾಮಗಿ ಯುವಜನರ ಸಮಸ್ಯೆಗಳನ್ನು ಆಲಿಸಿ ಅವರ ಹೋರಾಟಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಜಮ್ಮು ಮತ್ತು ಕಾಶ್ಮೀರದ ಯುವಕರು ವಿಶೇಷವಾಗಿ 1990 ರ ದಶಕದಲ್ಲಿ ಜನಿಸಿದವರು ಮುಗ್ಧರಾಗಿದ್ದರೂ, ತಮ್ಮ ಜೀವನದುದ್ದಕ್ಕೂ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದರೂ ಅಪಾರ ನೋವನ್ನು ಸಹಿಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ.

ರಾಜ್ಯತ್ವ ಮರುಸ್ಥಾಪನೆಗಾಗಿ ಪ್ರತಿಪಾದಿಸಿದ ರಾಮದಾಸ್ ಅಠಾವಳೆ ಅವರ ಇತ್ತೀಚಿನ ಭೇಟಿಯು ಅವರ ಸ್ಪರ್ಧೆಯ ನಿರ್ಧಾರದ ಮೇಲೆ ಪ್ರಭಾವ ಬೀರಿದೆಯೇ ಎಂದು ಕೇಳಿದಾಗ, ಅವರು ಅದನ್ನು ನಿರಾಕರಿಸಿದರು, ಅವರು ಆರಂಭದಲ್ಲಿ ಸ್ಪರ್ಧಿಸಲು ಯೋಚಿಸಿರಲಿಲ್ಲ. ಒಂದು ದಿನ ಮುಖ್ಯಮಂತ್ರಿಯಾಗಿ ಅವಕಾಶ ನೀಡಿದರೆ ಪುಲ್ವಾಮಾವನ್ನು ಸರಿಪಡಿಸಬಹುದು ಎಂದು ಯುವಕರು ಸಲಹೆ ನೀಡಿದರು. 2019 ರ ಸಿಆರ್‌ಪಿಎಫ್ ದಾಳಿ ಸೇರಿದಂತೆ ಪುಲ್ವಾಮಾದ ತೊಂದರೆಗೀಡಾದ ಭೂತಕಾಲದ ಹೊರತಾಗಿಯೂ, ಈ ಪ್ರದೇಶವನ್ನು ನಕಾರಾತ್ಮಕವಾಗಿ ನೋಡುವುದಿಲ್ಲ. ಪ್ರಗತಿಯನ್ನು ಮಾಡಲಾಗುತ್ತಿದೆ ಮತ್ತು ಅಗತ್ಯವಿರುವ ಎಲ್ಲಾ ಕೆಲಸಗಳನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪ್ರಮುಖ ಸಮಸ್ಯೆಗಳಿಲ್ಲ

ತಾನು ಬೇರೆ ಸಮುದಾಯಕ್ಕೆ ಸೇರಿದವಳಾಗಿದ್ದರೂ, ತಾನು ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ. ಯಾವುದೇ ಭದ್ರತೆಯಿಲ್ಲದೆ ಪುಲ್ವಾಮಾದಲ್ಲಿ ಮುಕ್ತವಾಗಿ ಪ್ರಯಾಣಿಸುತ್ತಿದ್ದೆ. ಯಾವುದೇ ವೈಯಕ್ತಿಕ ಭದ್ರತಾ ಅಧಿಕಾರಿಗಳ ಅಗತ್ಯವಿರಲಿಲ್ಲ ಎಂದು ಅವರು ತಿಳಿಸಿದರು.

ಕೇಂದ್ರಾಡಳಿತ ಪ್ರದೇಶವಾಗಿ ಜಮ್ಮು- ಕಾಶ್ಮೀರದಲ್ಲಿ ಇದು ಮೊದಲ ಚುನಾವಣೆಯಾಗಿದ್ದು, ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1 ರವರೆಗೆ ಮೂರು ಹಂತಗಳಲ್ಲಿ 90 ಸ್ಥಾನಗಳಿಗೆ ಮತದಾನವನ್ನು ನಿಗದಿಪಡಿಸಲಾಗಿದೆ ಮತ್ತು ಅಕ್ಟೋಬರ್ 8 ರಂದು ಎಣಿಕೆ ನಡೆಯಲಿದೆ.

Read More
Next Story