Indore mans murder in Meghalaya: Wife, 3 others arrested
x

ಮದುವೆಯ ಚಿತ್ರ.

ಮೇಘಾಲಯ ಹನಿಮೂನ್ ಹತ್ಯೆ ಪ್ರಕರಣಕ್ಕೆ ತಿರುವು, ಸುಪಾರಿ ಕೊಟ್ಟು ಕೊಂದ ಪತ್ನಿ

ಜೂನ್ 2ರಂದು ಚೆರಾಪುಂಜಿಯ ಜಲಪಾತದ ಕಮರಿಯಲ್ಲಿ ರಾಜ ರಘುವಂಶಿಯ ಶವ ಪತ್ತೆಯಾಯಿತು. ಶವವು ತುಂಡುತುಂಡಾಗಿದ್ದು, ಕೊಡಲಿಯಿಂದ ಕೊಚ್ಚಲಾಗಿತ್ತು ಎಂದು ಪೊಲೀಸರು ದೃಢಪಡಿಸಿದ್ದರು.


ಮಧ್ಯಪ್ರದೇಶದ ಇಂದೋರ್‌ನಿಂದ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದ್ದ ಜೋಡಿಯ ಹತ್ಯೆಯ ಕಥೆ ಇದೀಗ ದೇಶವನ್ನೇ ಬೆಚ್ಚಿಬೀಳಿಸಿದೆ. ರಾಜ ರಘುವಂಶಿ ಎಂಬುವ ನವವರನ ಭೀಕರ ಹತ್ಯೆ ಮತ್ತು ಪತ್ನಿ ಸೋನಮ್ ರಘುವಂಶಿಯ ನಾಪತ್ತೆಯಿಂದ ಆರಂಭವಾದ ಈ ಪ್ರಕರಣವು ಈಗ ಕೊಲೆಯೊಂದಿಗೆ ಅಂತ್ಯವಾಗಿದೆ. ವಧು ಸೋನಮ್‌ ಸುಪಾರಿ ನೀಡಿ ಕೊಂದಿರುವುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಮಧ್ಯಪ್ರದೇಶದ ಇಂದೋರ್‌ನ ರಘುವಂಶಿ ಕುಟುಂಬವು ಸಾರಿಗೆ ವ್ಯವಹಾರದಲ್ಲಿ ಗುರುತಿಸಿಕೊಂಡಿದೆ. ಆ ಕುಟುಂಬದ ರಾಜ ರಘುವಂಶಿ (28) ಮತ್ತು ಸೋನಮ್ ರಘುವಂಶಿ (26) ಮೇ 11ರಂದು ವಿವಾಹವಾಗಿದ್ದರು. ವಿವಾಹವಾದ ಒಂಬತ್ತು ದಿನಗಳ ನಂತರ ಈ ದಂಪತಿ ಹನಿಮೂನ್‌ಗಾಗಿ ಮೇಘಾಲಯದ ಚೆರಾಪುಂಜಿಗೆ ತೆರಳಿತ್ತು. ಆದರೆ, ಮೇ 23ರಂದು ಈ ದಂಪತಿ ಕಾಣೆಯಾಗಿದ್ದರು. ಇದು ದೇಶಾದ್ಯಂತ ಸಂಚಲನ ಮೂಡಿಸಿತ್ತು.

ಜೂನ್ 2ರಂದು ಚೆರಾಪುಂಜಿಯ ಜಲಪಾತದ ಕಮರಿಯಲ್ಲಿ ರಾಜ ರಘುವಂಶಿಯ ಶವ ಪತ್ತೆಯಾಯಿತು. ಶವವು ತುಂಡುತುಂಡಾಗಿದ್ದು, ಕೊಡಲಿಯಿಂದ ಕೊಚ್ಚಲಾಗಿತ್ತು ಎಂದು ಪೊಲೀಸರು ದೃಢಪಡಿಸಿದ್ದರು, ದೇಹದ ಮೇಲಿನ ಟ್ಯಾಟೂ ಆಧರಿಸಿ ಗುರುತು ಪತ್ತೆ ಹಚ್ಚಲಾಗಿತ್ತು. ಆದರೆ ಆ ಬಳಿಕ ಸೋನಮ್‌ ಸುಳಿವು ಸಿಗದೇ ಇದ್ದುದರಿಂದ, ಆಕೆಯನ್ನು ಅಪಹರಿಸಲಾಗಿದೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಮಧ್ಯಪ್ರದೇಶ ಮತ್ತು ಮೇಘಾಲಯ ಸರ್ಕಾರಗಳು ಸಂಯುಕ್ತವಾಗಿ ಸೋನಮ್‌ಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು.

ತನಿಖೆಯಲ್ಲಿ ಬಯಲಾದ ಸತ್ಯ

ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣವನ್ನು ಭೇದಿಸಲು ತೀವ್ರ ಪ್ರಯತ್ನ ನಡೆಸಿದೆ. . ಜೂನ್ 8 ಒಬ್ಬ ಟೂರ್ ಗೈಡ್‌ನ ಸಾಕ್ಷಿಯಿಂದ ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿತು. ಅಲ್ಲಿನ ಗೈಡ್, ಸೋನಮ್‌ರನ್ನು ಮೂವರು ಪುರುಷರೊಂದಿಗೆ ಕೊನೆಯ ಬಾರಿಗೆ ಜಲಪಾತದ ಬಳಿ ಕಂಡಿದ್ದಾಗಿ ತಿಳಿಸಿದ್ದರು. ಈ ಸಾಕ್ಷಿಯ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.

ಜೂನ್ 9 ಸೋನಮ್ ರಘುವಂಶಿ ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ಪತಿಯ ಕೊಲೆಗೆ ತಾನೇ ಸುಪಾರಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಪೊಲೀಸರು ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಒಬ್ಬರನ್ನು ಉತ್ತರ ಪ್ರದೇಶದಲ್ಲಿ ಮತ್ತು ಇನ್ನಿಬ್ಬರನ್ನು ಇಂದೋರ್‌ನಲ್ಲಿ ಬಂಧಿಸಲಾಗಿದೆ. ಸೋನಮ್‌ರ ಸೂಚನೆಯ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಮೇಘಾಲಯದ ಡಿಜಿಪಿ ಐ. ನೊಂಗ್ರಾಂಗ್ ಪತ್ರಿಕಾಗೋಷ್ಠಿಯಲ್ಲಿ, “ಈ ಪ್ರಕರಣದಲ್ಲಿ ಸೋನಮ್ ರಘುವಂಶಿಯವರೇ ಕೊಲೆಗೆ ಸುಪಾರಿ ನೀಡಿರುವುದು ದೃಢಪಟ್ಟಿದೆ. ತನಿಖೆಯು ಇನ್ನೂ ಮುಂದುವರಿದಿದ್ದು, ಇತರ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ,” ಎಂದು ತಿಳಿಸಿದ್ದಾರೆ.

ಕೊಲೆಯ ರೂಪುರೇಷೆ

ತನಿಖೆಯ ಪ್ರಕಾರ, ಸೋನಮ್‌ ಸುಪಾರಿ ನೀಡಿ, ಚೆರಾಪುಂಜಿಯ ಜಲಪಾತದ ಬಳಿ ರಾಜ ರಘುವಂಶಿಯವರನ್ನು ಕೊಲೆಗೈಯಲು ಯೋಜನೆ ರೂಪಿಸಿದ್ದರು. ಆರೋಪಿಗಳು ಕೊಡಲಿಯಿಂದ ರಾಜರನ್ನು ಕೊಚ್ಚಿ, ಶವವನ್ನು ಕಮರಿಯಲ್ಲಿ ಬಿಟ್ಟು ಪರಾರಿಯಾಗಿದ್ದರು. ಸೋನಮ್‌ರವರು ಕೊಲೆಯ ನಂತರ ನಾಪತ್ತೆಯಾಗಿ, ನಾಪತ್ತೆ ಆಗಿರುವಂತೆ ನಾಟಕ ಮಾಡಿದ್ದಳು.

ಕೊಲೆಯ ದಿನದಂದು, ದಂಪತಿಯನ್ನು ಜಲಪಾತಕ್ಕೆ ಕರೆದೊಯ್ದ ಟೂರ್ ಗೈಡ್, ಸೋನಮ್‌ರವರ ವರ್ತನೆಯಲ್ಲಿ ಅನುಮಾನಾಸ್ಪದ ವರ್ತನೆ ಗಮನಿಸಿದ್ದರು. ಅದರ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Read More
Next Story