
Kamal Hasan : ನನಗೆ ಬೆಂಬಲ ಕೊಟ್ಟ ತಮಿಳುನಾಡು ಸರ್ಕಾರಕ್ಕೆ ಧನ್ಯವಾದ ಎಂದ ಕಮಲ್ ಹಾಸನ್
"ಮಣಿ ರತ್ನಂ ಅವರ ಚಿತ್ರದಲ್ಲಿ ಕೆಲಸ ಮಾಡುವುದೇ ಒಂದು ಗೌರವ. ಈ ಚಿತ್ರದ ನಟವರ್ಗ ನಮ್ಮ ಯೋಧರಂತೆ. ದೊಡ್ಡ ದೊಡ್ಡ ನಟರು, 30 ವರ್ಷಗಳ ಅನುಭವ ಇದ್ದರೂ, ಮಣಿ ರತ್ನಂ ಅವರ ಹೆಸರಿಗಾಗಿ ಈ ಚಿತ್ರಕ್ಕೆ ಬಂದಿದ್ದಾರೆ," ಎಂದು ಕಮಲ್ ಹಾಸನ್ ಹೇಳಿದರು.
ಥಗ್ ಲೈಫ್ ಚಿತ್ರದ ಬಿಡುಗಡೆಗೆ ಒಂದು ದಿನ ಮೊದಲು ಅಂದರೆ ಜೂನ್ 4ರಂದು ಚೆನ್ನೈಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಾದಿತ ನಟ ಕಮಲ್ "ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಯಾವುದೇ ಪ್ರತ್ಯುತ್ತರ ನೀಡಲಿಲ್ಲ. ಆದರೆ ಅವರು, "ನನ್ನ ಹಿಂದೆ ನಿಂತಿರುವ ಸಂಪೂರ್ಣ ತಮಿಳುನಾಡು ರಾಜ್ಯಕ್ಕೆ ನಾನು ಧನ್ಯವಾದ ಹೇಳಬೇಕು" ಎಂದು ಹೇಳಿದರು.
"ಮಣಿ ರತ್ನಂ ಅವರ ಚಿತ್ರದಲ್ಲಿ ಕೆಲಸ ಮಾಡುವುದೇ ಒಂದು ಗೌರವ. ಈ ಚಿತ್ರದ ನಟವರ್ಗ ನಮ್ಮ ಯೋಧರಂತೆ. ದೊಡ್ಡ ದೊಡ್ಡ ನಟರು, 30 ವರ್ಷಗಳ ಅನುಭವ ಇದ್ದರೂ, ಮಣಿ ರತ್ನಂ ಅವರ ಹೆಸರಿಗಾಗಿ ಈ ಚಿತ್ರಕ್ಕೆ ಬಂದಿದ್ದಾರೆ," ಎಂದು ಕಮಲ್ ಹಾಸನ್ ಹೇಳಿದರು.
ಥಗ್ ಲೈಫ್ ' ಚಿತ್ರದ ನಟರಾದ ಸಿಲಂಬರಸನ್ ಸೇರಿದಂತೆ ಹಲವರೊಂದಿಗೆ ವೇದಿಕೆ ಹಂಚಿಕೊಂಡ ಕಮಲ್ ಹಾಸನ್, ಚಿತ್ರದ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟ ಹಾಗೂ ತಂಡದ ಶ್ರಮವನ್ನು ಪ್ರಶಂಸಿಸಿದರು.
"ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ತೀವ್ರ ಟೀಕೆ ಮಾಡಿದ ನಂತರ ಕಮಲ್ ಹಾಸನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಹಾಗೂ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.
ಕರ್ನಾಟಕದಲ್ಲಿ ಬಿಡುಗಡೆ ತಾತ್ಕಾಲಿಕವಾಗಿ ಸ್ಥಗಿತ
ಕಮಲ್ ಹಾಸನ್ ಅವರ ಹೇಳಿಕೆ ಕನ್ನಡಿಗರ ಭಾವನೆಗಳಿಗೆ ಧಕ್ಕೆ ಮಾಡಿದ ಎಂಬ ಆಕ್ರೋಶದ ಹಿನ್ನೆಲೆಯಲ್ಲಿ, ಅವರು ಚಿತ್ರವನ್ನು ಕರ್ನಾಟಕದಲ್ಲಿ ತಾತ್ಕಾಲಿಕವಾಗಿ ಬಿಡುಗಡೆ ಮಾಡದಿರಲು ಒಪ್ಪಿಕೊಂಡಿದ್ದಾರೆ. ತಮ್ಮ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆಯೇ ಹೊರತು ಕ್ಷಮೆ ಕೇಳದೆ ಉದ್ಧಟತನ ಮುಂದುವರಿಸಿದ್ದಾರೆ.
ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (KFCC) ಅಧ್ಯಕ್ಷ ನರಸಿಂಹಲು ಅವರೊಂದಿಗೆ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದ್ದಾರೆ. ಚಿತ್ರವು ಜೂನ್ 5ರಂದು ಪ್ಯಾನ್-ಇಂಡಿಯಾ ಬಿಡುಗಡೆಗಾಗಬೇಕಿದ್ದರೂ, ಈಗ ಕರ್ನಾಟಕದಲ್ಲಿ ಬಿಡುಗಡೆ ಮುಂದೂಡಲಾಗಿದೆ.