ಮಹಿಳೆಯರ ವಿರುದ್ಧದ ಅಪರಾಧ ಕೊನೆಗೊಳಿಸಿ: ರಾಷ್ಟ್ರಪತಿ
x

ಮಹಿಳೆಯರ ವಿರುದ್ಧದ ಅಪರಾಧ ಕೊನೆಗೊಳಿಸಿ: ರಾಷ್ಟ್ರಪತಿ


ʻಮಹಿಳೆಯರ ವಿರುದ್ಧದ ಅಪರಾಧಗಳ ವಿಕೃತಿಯಿಂದ ಎಚ್ಚೆತ್ತುಕೊಳ್ಳುವ ಸಮಯ ಮತ್ತು ಮಹಿಳೆಯರನ್ನು ಕಡಿಮೆ ಶಕ್ತಿಶಾಲಿ, ಕಡಿಮೆ ಸಾಮರ್ಥ್ಯ, ಕಡಿಮೆ ಬುದ್ಧಿವಂತ ಎಂದು ನೋಡುವ ಮನಸ್ಥಿತಿಯನ್ನು ಎದುರಿಸುವ ಸಮಯ ಬಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಬುಧವಾರ ಘೋಷಿಸಿದರು.

ʻಹೆಣ್ಣನ್ನು ಒಂದು ವಸ್ತುವಾಗಿ ನೋಡಲಾಗುತ್ತದೆ. ಭಯದಿಂದ ಗೆಲ್ಲುವ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಿದ ನಮ್ಮ ಹೆಣ್ಣುಮಕ್ಕಳಿಗೆ ನಾವು ಋಣಿಯಾಗಿದ್ದೇವೆ,ʼ ಎಂದು ಅವರು ವಿಶೇಷ ಲೇಖನದಲ್ಲಿ ತಿಳಿಸಿದ್ದಾರೆ.

ಆಗಸ್ಟ್ 9 ರಂದು ಕೋಲ್ಕತ್ತಾ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯನ್ನು ಉಲ್ಲೇಖಿಸಿ, ʻನಿರಾಶೆ ಮತ್ತು ಗಾಬರಿ ಹುಟ್ಟಿಸುವ ಘಟನೆ. ಮಹಿಳೆಯರ ವಿರುದ್ಧದ ಅಪರಾಧಗಳ ಸರಣಿಯ ಭಾಗವಾಗಿದೆ ಎಂಬುದು ಹೆಚ್ಚು ಖಿನ್ನತೆಯ ಸಂಗತಿಯಾಗಿದೆ. ಹೆಣ್ಣುಮಕ್ಕಳು ಮತ್ತು ಸಹೋದರಿಯರು ಇಂತಹ ದೌರ್ಜನ್ಯಕ್ಕೆ ಒಳಗಾಗುವುದನ್ನು ಯಾವುದೇ ಸುಸಂಸ್ಕೃತ ಸಮಾಜ ಅನುಮತಿಸುವುದಿಲ್ಲ. ರಾಷ್ಟ್ರ ಆಕ್ರೋಶಗೊಂಡಿದೆ ಮತ್ತು ನಾನು ಕೂಡ ಸಿಟ್ಟಾಗಿದ್ದೇನೆ,ʼ ಎಂದು ಬರೆದಿದ್ದಾರೆ.

ʻಮಹಿಳೆಯರ ಸುರಕ್ಷತೆ: ಎನಫ್ ಈಸ್ ಎನಫ್ʼ ಎಂಬ ಶೀರ್ಷಿಕೆಯ ಈ ಲೇಖನದಲ್ಲಿ ಆಗಸ್ಟ್ 9 ರ ಕೋಲ್ಕತ್ತಾದ ಘಟನೆ ಬಗ್ಗೆ ಮೊದಲ ಬಾರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 27, 1947 ರಂದು ಪಿಟಿಐ ಸುದ್ದಿ ಸಂಸ್ಥೆಯ 77 ನೇ ವಾರ್ಷಿಕೋತ್ಸವ. ರಾಷ್ಟ್ರಪತಿ ಭವನದಲ್ಲಿ ಅವರನ್ನು ಭೇಟಿ ಮಾಡಿದ ಪಿಟಿಐ ಹಿರಿಯ ಸಂಪಾದಕರ ತಂಡದೊಂದಿಗೆ ರಾಷ್ಟ್ರಪತಿ ಮಾತನಾಡಿದರು.

ʻಕೋಲ್ಕತ್ತಾದಲ್ಲಿ ವಿದ್ಯಾರ್ಥಿಗಳು, ವೈದ್ಯರು ಮತ್ತು ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದರೂ, ಅಪರಾಧಿಗಳು ಬೇರೆಡೆ ಅಲೆದಾಡುತ್ತಿದ್ದರು. ಬಲಿಪಶುಗಳಲ್ಲಿ ಶಿಶುವಿಹಾರದ ಹುಡುಗಿಯರೂ ಸೇರಿದ್ದಾರೆ, ʼ ಎಂದು ಹೇಳಿದರು.

ರಕ್ಷಾ ಬಂಧನದಂದು ಶಾಲಾ ಮಕ್ಕಳ ಗುಂಪಿನೊಂದಿಗೆ ಇತ್ತೀಚೆಗೆ ನಡೆದ ಸಭೆಯನ್ನು ನೆನಪಿಸಿಕೊಂಡರು. ʻಭವಿಷ್ಯದಲ್ಲಿ ನಿರ್ಭಯಾ ಮಾದರಿಯ ಘಟನೆಯು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಬಹುದೇ ಎಂದು ಮಕ್ಕಳು ನನ್ನನ್ನು ಕೇಳಿದರು. ನಿರ್ಭಯಾ ಘಟನೆ ನಂತರ ಆರಂಭಿಸಿದ ಉಪಕ್ರಮಗಳು ಸ್ವಲ್ಪ ವ್ಯತ್ಯಾಸ ಮಾಡಿವೆ. 12 ವರ್ಷಗಳಲ್ಲಿ ಇದೇ ರೀತಿಯ ಅಸಂಖ್ಯಾತ ದುರಂತಗಳು ನಡೆದಿವೆ. ಆದರೆ, ಕೆಲವೇ ಕೆಲವು ರಾಷ್ಟ್ರವ್ಯಾಪಿ ಗಮನ ಸೆಳೆದಿವೆ,ʼ ಎಂದು ಹೇಳಿದರು.

ʻನಾವು ಪಾಠ ಕಲಿತಿದ್ದೇವೆಯೇ? ʻಇದು ಶೋಚನೀಯ ಮನಸ್ಥಿತಿ. ಇಂಥ ಮನಸ್ಥಿತಿಯು ಹೆಣ್ಣನ್ನು ಕಡಿಮೆ ಮನುಷ್ಯ, ಕಡಿಮೆ ಶಕ್ತಿಶಾಲಿ, ಕಡಿಮೆ ಸಾಮರ್ಥ್ಯ, ಕಡಿಮೆ ಬುದ್ಧಿವಂತಿಕೆ ಎಂದು ನೋಡುತ್ತದೆ. ಇದು ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಈ ಮನಸ್ಥಿತಿಯನ್ನು ಎದುರಿಸುವುದು ರಾಜ್ಯ ಮತ್ತು ಸಮಾಜ ಎರಡಕ್ಕೂ ಪ್ರಯಾಸದ ಕೆಲಸ,ʼ ಎಂದರು.

ʻಸಮಾಜಕ್ಕೆ ಪ್ರಾಮಾಣಿಕ, ನಿಷ್ಪಕ್ಷಪಾತ ಆತ್ಮಾವಲೋಕನದ ಅಗತ್ಯವಿದೆ ಮತ್ತು ಕೆಲವು ಕಷ್ಟಕರವಾದ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಿ. ನಾವು ಎಲ್ಲಿ ತಪ್ಪು ಮಾಡಿದೆವು? ಮತ್ತು ದೋಷಗಳನ್ನು ತೆಗೆದುಹಾಕಲು ನಾವು ಏನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯದೆ, ನಮ್ಮ ಜನಸಂಖ್ಯೆಯ ಅರ್ಧದಷ್ಟು ಜನರು ಉಳಿದ ಅರ್ಧದಷ್ಟು ಮುಕ್ತವಾಗಿ ಬದುಕಲು ಸಾಧ್ಯವಿಲ್ಲ,ʼ ಎಂದು ಅವರು ಹೇಳಿದರು.

Read More
Next Story