Kolkata rape-murder: ರಾಜ್ಯ ಯಂತ್ರ ಸಂಪೂರ್ಣ ವಿಫಲ- ಕಲ್ಕತ್ತಾ ಹೈಕೋರ್ಟ್
x

Kolkata rape-murder: ರಾಜ್ಯ ಯಂತ್ರ ಸಂಪೂರ್ಣ ವಿಫಲ- ಕಲ್ಕತ್ತಾ ಹೈಕೋರ್ಟ್


ಕೋಲ್ಕತ್ತಾದ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 15 ರಂದು ಮುಂಜಾನೆ ʻರಾಜ್ಯ ಯಂತ್ರಗಳ ಸಂಪೂರ್ಣ ವೈಫಲ್ಯʼ ವಿಧ್ವಂಸಕ ಕೃತ್ಯಗಳಿಗೆ ಕಾರಣವಾಯಿತು ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ (ಆಗಸ್ಟ್ 16) ಹೇಳಿದೆ.

ವೈದ್ಯಕೀಯ ಸೌಲಭ್ಯವನ್ನು ಸರಿಯಾಗಿ ರಕ್ಷಿಸದಿದ್ದರೆ, ಅದನ್ನು ಮುಚ್ಚಲು ಆದೇಶಿಸುವುದಾಗಿ ನ್ಯಾಯಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

7,000 ಜನರ ಗುಂಪಿನಿಂದ ದಾಳಿ: ಕಾಲೇಜು ಮತ್ತು ಆಸ್ಪತ್ರೆ ಆವರಣದ ಮೇಲೆ ದಾಳಿ ಮಾಡಿದ ಗುಂಪು ಏಕಾಏಕಿ 7,000 ಜನರಷ್ಟು ಹಿಗ್ಗಿತು. ಅವರು ಬ್ಯಾರಿಕೇಡ್‌ಗಳನ್ನು ಮುರಿದರು, ಪೊಲೀಸ್ ವಾಹನ ಹಾನಿಗೊಳಿಸಿದರು, ತುರ್ತು ಚಿಕಿತ್ಸಾ ಕೊಠಡಿಯನ್ನು ಧ್ವಂಸಗೊಳಿಸಿದರು ಮತ್ತು ಸುಮಾರು 15 ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದರು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು ಎಂದು ರಾಜ್ಯ ಹೇಳಿತು.

ಆದರೆ, ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ಪೀಠವು ರಾಜ್ಯದ ವಾದಗಳನ್ನು ತಳ್ಳಿಹಾಕಿತು. ʻಪ್ರತಿಭಟನೆಗೆ ಏಕೆ ಅನುಮತಿ ನೀಡಲಾಯಿತು? ಗುಪ್ತಚರ ವಿಭಾಗದ ಹೊರತಾಗಿಯೂ ಪೊಲೀಸರಿಗೆ 7,000 ಜನರು ಸೇರುತ್ತಾರೆ ಎಂಬ ಸುಳಿವು ಇರಲಿಲ್ಲ ಎಂದು ನಂಬುವುದು ಕಷ್ಟ,ʼ ಎಂದು ಹೇಳಿತು.

ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ ಎಂದು ರಾಜ್ಯ ಹೇಳಿತು. ಆದರೆ, ಆಗ ಸೆಕ್ಷನ್ 144 ಜಾರಿಯಲ್ಲಿತ್ತು ಮತ್ತು ಪೊಲೀಸರು ಆ ಪ್ರದೇಶವನ್ನು ಸುತ್ತುವರಿದಿರಬೇಕಿತ್ತು ಎಂದು ನ್ಯಾಯಾಲಯ ಹೇಳಿತು.

ವೈದ್ಯರು ನಿರ್ಭೀತಿಯಿಂದ ಹೇಗೆ ಕೆಲಸ ಮಾಡುತ್ತಾರೆ?: ಹೈಕೋರ್ಟ್- ʻಇದು ರಾಜ್ಯ ಯಂತ್ರದ ಸಂಪೂರ್ಣ ವೈಫಲ್ಯ. ಪೊಲೀಸರಿಗೆ ತಮ್ಮ ಸ್ವಂತ ಸಿಬ್ಬಂದಿಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲವೇ? ಇದು ವಿಷಾದನೀಯ ಸ್ಥಿತಿ. ಅಲ್ಲಿ ವೈದ್ಯರು ನಿರ್ಭಯವಾಗಿ ಹೇಗೆ ಕೆಲಸ ಮಾಡುತ್ತಾರೆ? ಯಾವ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ? ನಾವು ಆಸ್ಪತ್ರೆಯನ್ನು ಮುಚ್ಚುತ್ತೇವೆ. ಎಲ್ಲ ರೋಗಿಗಳನ್ನು ಸ್ಥಳಾಂತರಿಸುತ್ತೇವೆ. ಎಷ್ಟು ರೋಗಿಗಳು ಇದ್ದಾರೆ?,ʼ ಎಂದು ನ್ಯಾಯಾಲಯ ಪ್ರಶ್ನಿಸಿತು.

ʻಆಸ್ಪತ್ರೆ ಸುರಕ್ಷಿತವಾಗಿದೆ,ʼ ಎಂದು ರಾಜ್ಯ ಪುನರುಚ್ಚರಿಸಿತು.

ʻಸರಿ. ನಿಮ್ಮ ಮಾತನ್ನು ನಂಬುತ್ತೇವೆ. ನಗರದ ನಾಗರಿಕನಾದ ನನಗೆ ನೋವಾಗಿದೆ. ಇದು ನಿಮಗೂ ನೋವುಂಟು ಮಾಡಬೇಕು,ʼ ಎಂದು ನ್ಯಾಯಾಲಯ ಹೇಳಿತು.

Read More
Next Story