ರಾಮಮಂದಿರ ಉದ್ಘಾಟನೆ ವೇಳೆ ನಾಚ್-ಗಾನ; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಆಕ್ರೋಶ
x
ರಾಹುಲ್‌ ಗಾಂಧಿ

ರಾಮಮಂದಿರ ಉದ್ಘಾಟನೆ ವೇಳೆ ನಾಚ್-ಗಾನ; ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಆಕ್ರೋಶ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಿ "ನಾಚ್-ಗಾನ" ನಡೆಯುತ್ತಿತ್ತು ಎಂಬ ಹೇಳಿಕೆಯ ವಿರುದ್ಧ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ.


Click the Play button to hear this message in audio format

ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆದ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಲ್ಲಿ "ನಾಚ್-ಗಾನ" ನಡೆಯುತ್ತಿತ್ತು ಎಂಬ ಹೇಳಿಕೆಯ ವಿರುದ್ಧ ಬಿಜೆಪಿ ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದೆ. ರಾಹುಲ್‌ ಗಾಂಧಿ ಅವರನ್ನು "ಸುಳ್ಳುಗಾರ" ಎಂದು ಕರೆದಿದೆ.

ರಾಹುಲ್‌ ಗಾಂಧಿ ಅವರ ಈ ಹೇಳಿಕೆ ಗಾಂಧಿ ಕುಟುಂಬದ ನೈಜ ಸ್ವರೂಪ ಮತ್ತು ಹಿಂದೂ ಧರ್ಮದ ಬಗ್ಗೆ ತಿರಸ್ಕಾರವನ್ನು ತೋರಿಸುತ್ತದೆ ಎಂದು ಬಿಜೆಪಿ ಹೇಳಿದೆ.

ರಾಹುಲ್‌ ಗಾಂಧಿಯವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೈರಲ್‌ ವಿಡಿಯೋದಲ್ಲಿ ರಾಮ ಮಂದಿರದ ಶಂಕುಸ್ಥಾಪನೆಗೆ ಹಾಜರಾಗಲು "ಅಮಿತಾಭ್ ಬಚ್ಚನ್, ಅಂಬಾನಿ ಮತ್ತು ಅದಾನಿಗಳನ್ನು ಆಹ್ವಾನಿಸಿದ್ದಾರೆ. ಆದರೆ " ಯಾವುದೇ ಬಡವರು, ಕಾರ್ಮಿಕರು ಅಥವಾ ರೈತರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿಲ್ಲ. "ನಾಚ್-ಗಾನ (ನೃತ್ಯ-ಹಾಡುವಿಕೆ) ಅಲ್ಲಿ ನಡೆಯುತ್ತಿತ್ತು. ಅದಕ್ಕಾಗಿಯೇ ಸಂಸತ್ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅವಧೇಶ್ ಸಿಂಗ್ ವಿರುದ್ಧ ಬಿಜೆಪಿ ಅಯೋಧ್ಯೆ ಲೋಕಸಭಾ ಸ್ಥಾನವನ್ನು ಕಳೆದುಕೊಂಡಿತು ಎಂದು ಅವರು ಗುರುವಾರ ಹರಿಯಾಣದ ಬರ್ವಾಲಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಅವರು ಹೇಳಿದ್ದರು. ಇದು ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ರಾಮ ಮಂದಿರವನ್ನು ಕಾಂಗ್ರೆಸ್ ಪದೇ ಪದೇ ಅಗೌರವಗೊಳಿಸುತ್ತಿದೆ ಎಂದು ಆರೋಪಿಸಿದರು. ರಾಮಮಂದಿರ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ಪ್ರಧಾನಿ ನರೇಂದ್ರ ಮೋದಿಯವರು ಸನ್ಮಾನಿಸಿ, ಹೂವಿನ ದಳಗಳನ್ನು ಸುರಿಸಿದ್ದಾರೆ ಎಂದು ಹೇಳಿದರು.

‘ಲೋಕಸಭೆಯಲ್ಲಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸದ ರಾಹುಲ್ ಗಾಂಧಿ ಅವರು ಧಾರ್ಮಿಕ ವಿಷಯಗಳ ಕುರಿತು ನಾನಾ ರೀತಿಯ ಅಸಂಬದ್ಧ ಮಾತನಾಡುತ್ತಿರುವುದು ಅತ್ಯಂತ ದುಃಖಕರ ಮತ್ತು ಗಂಭೀರ ಸಂಗತಿ’. ದೇವಾಲಯದ ಶಂಕುಸ್ಥಾಪನೆ ಸಮಾರಂಭದ ಸಂದರ್ಭವನ್ನು ʻʻನಾಚ್‌-ಗಾನʼʼಎಂಬ ಪದಗಳನ್ನು ಬಳಸಿರುವುದನ್ನು ಬಿಜೆಪಿ ನಾಯಕರು ಆಕ್ಷೇಪಿಸಿದ್ದಾರೆ.

ಗಾಂಧಿ ಕುಟುಂಬದ ಮೂರು ತಲೆಮಾರುಗಳು ಅಫ್ಘಾನಿಸ್ತಾನದ ಮೊಘಲ್ ಚಕ್ರವರ್ತಿ ಬಾಬರ್ ಅವರ ಸಮಾಧಿಗೆ ಗೌರವ ಸಲ್ಲಿಸಲು ಹೋಗಿದ್ದಾರೆ. ಇದು ದೇವಾಲಯದ ಮೇಲಿನ ಅವರ ನಿಲುವು ಅವರ ನೈಜ ಸ್ವರೂಪ ಮತ್ತು ಹಿಂದೂ ಧರ್ಮದ ಮೇಲಿನ ತಿರಸ್ಕಾರವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಗಾಂಧಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ, ಕಾಂಗ್ರೆಸ್ ನಾಯಕ ಹಿಂದೂ ವಿರೋಧಿ ಮಾತ್ರವಲ್ಲ, "ಉನ್ನತ ಆದೇಶದ ಸುಳ್ಳುಗಾರ" ಎಂದು ಹೇಳಿದರು.

ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, "ಯಾವುದೇ ಬಡವರು ಅಥವಾ ಕಾರ್ಮಿಕರು ಅಲ್ಲಿಲ್ಲ ಎಂದು ಅವರು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ವರ್ಷದಿಂದ ಮಾಡಿದ ಸ್ವಾತತ್, ಸತ್ಕಾರ್ಯಕ್ಕೆ ಅವರು ಕುರುಡರೇ?" ಎಂದು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮದ ವೀಡಿಯೊವನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಂಡಿದ್ದಾರೆ.

ರಾಮ ಮಂದಿರದ "ಪ್ರಾಣ ಪ್ರತಿಷ್ಠೆಯ ಪುಣ್ಯ ಸಂದರ್ಭ"ವನ್ನು ಗುರಿಯಾಗಿಸಿಕೊಂಡಿದ್ದಕ್ಕಾಗಿ ಅವರು ಗಾಂಧಿಯನ್ನು ಕಟುವಾಗಿ ಟೀಕಿಸಿದ ಅವರು, "ಅವರು ಸುಳ್ಳು ಹೇಳಿದ್ದು ಇದೇ ಮೊದಲಲ್ಲ -- ಐಶ್ವರ್ಯಾಜಿ ಅವರು ಇಲ್ಲದಿದ್ದಾಗ ಒಮ್ಮೆ ಅವರು ಐಶ್ವರ್ಯಾ ರೈ ನಾಚ್ ರಹೀ ಥಿ ಎಂದು ಹೇಳಿದ್ದರು ಎಂದು ಅವರು ಆರೋಪಿಸಿದರು.

Read More
Next Story