Ahmedabad Plane Crash ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದ 7 ವಿದ್ಯಾರ್ಥಿಗಳ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ
x

Ahmedabad Plane Crash ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದ 7 ವಿದ್ಯಾರ್ಥಿಗಳ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಏರ್ ಇಂಡಿಯಾ ತಿಳಿಸಿರುವಂತೆ, ದುರಂತದಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬೋಯಿಂಗ್ 787-8 ವಿಮಾನದಲ್ಲಿ ಒಟ್ಟು 242 ಮಂದಿ ಇದ್ದರು, ಅದರಲ್ಲಿ 12 ಮಂದಿ ಸಿಬ್ಬಂದಿ. ಪ್ರಯಾಣಿಕರಲ್ಲಿ 169 ಭಾರತೀಯರು.


ಅಹಮದಾಬಾದ್​ನಲ್ಲಿ ದುರಂತತಕ್ಕೆ ಈಡಾಧ ಏರ್ ಇಂಡಿಯಾ ವಿಮಾನವು ಸಮೀಪದ ಬಿಜೆ ಮೆಡಿಕಲ್ ಕಾಲೇಜು ಸಂಕೀರ್ಣಕ್ಕೆ ಅಪ್ಪಳಿಸಿತ್ತು. ವಿಮಾನದಲ್ಲಿ ಪ್ರಯಾಣಿಕರಲ್ಲದೆ, ಕಾಲೇಜಿನ ಸಂಕೀರ್ಣದಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದು. 60ಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (FAIMA) ತಿಳಿಸಿದೆ.

ಮೃತಪಟ್ಟವರಲ್ಲಿ ಐದು ಎಂಬಿಬಿಎಸ್ ವಿದ್ಯಾರ್ಥಿಗಳು, ಒಬ್ಬ ಪಿಜಿ ರೆಸಿಡೆಂಟ್ ಡಾಕ್ಟರ್ ಮತ್ತು ಬಿಜೆ ಮೆಡಿಕಲ್ ಕಾಲೇಜಿನ ಒಬ್ಬ ಸೂಪರ್‌ಸ್ಪೆಷಲಿಸ್ಟ್ ಡಾಕ್ಟರ್‌ನ ಪತ್ನಿ ಸೇರಿದ್ದಾರೆ. ಫೈಮಾ ರಾಷ್ಟ್ರೀಯ ಉಪಾಧ್ಯಕ್ಷ ಡಾ. ದಿವ್ಯಾಂಶ್ ಸಿಂಗ್ ಅವರು, "ಪತ್ತೆಯಾದ ಶವಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ" ಎಂದು ಹೇಳಿದ್ದಾರೆ. ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಇನ್ನೂ ಹಲವರು ಶಿಥಿಲಗಳಡಿಯಲ್ಲಿ ಸಿಲುಕಿರುವ ಆತಂಕವಿದೆ.

ಏರ್ ಇಂಡಿಯಾ ತಿಳಿಸಿರುವಂತೆ, ದುರಂತದಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬೋಯಿಂಗ್ 787-8 ವಿಮಾನದಲ್ಲಿ ಒಟ್ಟು 242 ಮಂದಿ ಇದ್ದರು, ಅದರಲ್ಲಿ 12 ಮಂದಿ ಸಿಬ್ಬಂದಿ. ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟಿಷ್ ನಾಗರಿಕರು, ಏಳು ಪೋರ್ಚುಗೀಸ್ ನಾಗರಿಕರು ಮತ್ತು ಒಬ್ಬ ಕೆನಡಾದ ನಾಗರಿಕನಿದ್ದರು. ಈ ದುರಂತದಲ್ಲಿ ಕೇವಲ ಒಬ್ಬ ವ್ಯಕ್ತಿ ಮಾತ್ರ ಜೀವಂತವಾಗಿ ಉಳಿದಿದ್ದಾರೆ ಎಂದು ಏರ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ದುರಂತದ ಸಂದರ್ಭ

ಡಾ. ದಿವ್ಯಾಂಶ್ ಸಿಂಗ್ ಅವರ ಪ್ರಕಾರ, ವಿಮಾನವು ಹಾರಾಟದ ಕೆಲವೇ ಕ್ಷಣಗಳಲ್ಲಿ ಸಮತೋಲನ ಕಳೆದುಕೊಂಡು ಬಿಜೆ ಮೆಡಿಕಲ್ ಕಾಲೇಜಿನ ಬಾಲಕರ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ. ಘಟನೆಯ ಸಮಯದಲ್ಲಿ ಊಟದ ವೇಳೆಯಾಗಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ರೆಸಿಡೆಂಟ್ ಡಾಕ್ಟರ್‌ಗಳು ಹಾಸ್ಟೆಲ್‌ನಲ್ಲಿಯೇ ಇದ್ದರು ಎನ್ನಲಾಗಿದೆ. ವಿಮಾನವು ಅಪ್ಪಳಿಸಿದ ತಕ್ಷಣ ಬೆಂಕಿಯ ಜ್ವಾಲೆಯಾಗಿ ಸಿಡಿದಿದ್ದು, ದಟ್ಟವಾದ ಕಪ್ಪು ಹೊಗೆ ಆಕಾಶದಲ್ಲಿ ಕಾಣಿಸಿತು.

ಬ್ಲ್ಯಾಕ್ ಬಾಕ್ಸ್ ಶೋಧ ಮತ್ತು ತನಿಖೆ

ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಈ 11 ವರ್ಷ ಹಳೆಯ ವಿಮಾನದ ಕೊನೆಯ ಕ್ಷಣಗಳಲ್ಲಿ ಏನಾಯಿತು ಎಂಬುದನ್ನು ತಿಳಿಯಲು ಬ್ಲ್ಯಾಕ್ ಬಾಕ್ಸ್‌ನ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ವಿಮಾನವು ತೀವ್ರವಾಗಿ ಎತ್ತರ ಕಳೆದುಕೊಂಡು ಬೆಂಕಿಯ ಜ್ವಾಲೆಯಾಗಿ ಸಿಡಿದಿದೆ. ಈ ದುರಂತಕ್ಕೆ ಎಂಜಿನ್ ವೈಫಲ್ಯವೇ ಅಥವಾ ಪಕ್ಷಿಯ ಡಿಕ್ಕಿಯೇ ಎಂಬ ಬಗ್ಗೆ ತಜ್ಞರು ತನಿಖೆ ನಡೆಸುತ್ತಿದ್ದಾರೆ.

Read More
Next Story