ಸರ್ಕಾರ ಕೊಟ್ಟ ಭರಸೆಗಳೆಷ್ಟು? ಈಡೇರಿದ್ದೆಷ್ಟು?: ಬಜೆಟ್-2025ರ ರಿಪೋರ್ಟ್ ಕಾರ್ಡ್
x
ಕಳೆದ ಬಾರಿ ಮುಂಗಡ ಪತ್ರವನ್ನು ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವು ಹೊಸ ನೀತಿ ನಿರ್ಧಾರಗಳನ್ನು ಘೋಷಿಸಿದ್ದರು ಮತ್ತು ಕೆಲವನ್ನು ಹಿಂದಿನಂತೆ ಮುಂದುವರಿಸಿದ್ದರು.

ಸರ್ಕಾರ ಕೊಟ್ಟ ಭರಸೆಗಳೆಷ್ಟು? ಈಡೇರಿದ್ದೆಷ್ಟು?: ಬಜೆಟ್-2025ರ ರಿಪೋರ್ಟ್ ಕಾರ್ಡ್

2026ರ ಕೇಂದ್ರ ಮುಂಗಡ ಪತ್ರವನ್ನು ಮಂಡಿಸುವುದಕ್ಕೂ ಮುನ್ನ ಕಳೆದ ಒಂದು ವರ್ಷದಲ್ಲಿ ಭಾರತದ ಹಣಕಾಸು ಕಾರ್ಯಕ್ಷಮತೆಯು ಮಿಶ್ರ ಫಲಿತಾಂಶವನ್ನು ತೋರಿಸುತ್ತಿದೆ. ಕಾರಣ ಹುಡುಕುವುದಕ್ಕೆ ಇದು ಸಕಾಲ


Click the Play button to hear this message in audio format

“ಮುಂದಿನ ಐದು ವರ್ಷಗಳ ಅವಧಿಯಲ್ಲಿ ಎಲ್ಲ ಪ್ರದೇಶಗಳ ಸಮತೋಲಿತ ಬೆಳವಣಿಗೆಗಳನ್ನು ಉತ್ತೇಜಿಸುವ ಮೂಲಕ ʼಸಬ್ ಕಾ ವಿಕಾಸ್ʼ ಪರಿಕಲ್ಪನೆಯನ್ನು ಸಾಕಾರಗೊಳಿಸಲಾಗುತ್ತದೆ,” ಹಾಗೆಂದು 2025ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭರವಸೆ ನೀಡಿದ್ದರು. ಹಳೆಯ ಕೆಲವು ನಿರ್ಧಾರಗಳನ್ನು ಮುಂದುವರಿಸಿ ಕೆಲವು ಹೊಸ ನೀತಿ ನಿರ್ಧಾರಗಳನ್ನೂ ಅವರು ವರುಷದ ಹಿಂದೆ ಘೋಷಿಸಿದ್ದರು.

ಈಗ ಒಂದು ವರುಷ ಕಳೆದು ಹೋಗಿದೆ. ಅಂದು ಮಂಡಿಸಿದ ಮುಂಗಡ ಪತ್ರದ ನೈಜ ಕಾರ್ಯಕ್ಷಮತೆಯ ಮರ್ಮದ ಅರಿವಾಗುವುದು ಈ ಫೆ. 1ರಂದು ಬಜೆಟ್ ಹೇಳಿಕೆಗಳನ್ನು ಮಂಡಿಸಿದಾಗ. ಆದರೆ ಬಹುತೇಕ ಪ್ರಕರಣಗಳಲ್ಲಿ ಅದರ ಸುಳಿವುಗಳು ಈಗಾಗಲೇ ಸ್ಪಷ್ಟವಾಗಿ ಕಾಣುತ್ತಿವೆ. ಹಾಗಾಗಿ ಕಳೆದ ಬಜೆಟ್-ನಲ್ಲಿ ಭರವಸೆ ನೀಡಲಾದ ಕೆಲವು ಪ್ರಮುಖ ಬದಲಾವಣೆಗಳು ಮತ್ತು ಅವುಗಳಲ್ಲಿ ಎಷ್ಟು ಜಾರಿಯಾಗಿವೆ ಎಂಬುದರ ಒಂದು ಅವಲೋಕನ ಇಲ್ಲಿದೆ.

ಬಳಕೆಗೆ ಉತ್ತೇಜನ

ಬಳಕೆಯನ್ನು ಹೆಚ್ಚಿಸಲು ಅಥವಾ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಹೆಚ್ಚಿಸಲು ಕಳೆದ ವರ್ಷ ವೈಯಕ್ತಿಕ ಆದಾಯ ತೆರಿಗೆ ವ್ಯವಸ್ಥೆಯನ್ನು ಪರಿಷ್ಕರಿಸಲಾಗಿತ್ತು. ಮಧ್ಯಮ ವರ್ಗದವರಿಗೆ ವಾರ್ಷಿಕ 12 ಲಕ್ಷ ರೂ.ಗಳ ತನಕ ತೆರಿಗೆ ವಿನಾಯಿತಿಯನ್ನು ನೀಡಲಾಗಿತ್ತು. (ಇದು 2023ರಲ್ಲಿ ಘೋಷಿಸಲಾದ 7ಲಕ್ಷ ರೂ.ಗಿಂತ ಅಧಿಕ). ಇದರ ಜೊತೆಗೆ ವೇತನದಾರರಿಗೆ ಪ್ರಮಾಣಿತ ಕಡಿತ (ಸ್ಟಾಂಡರ್ಡ್ ಡಿಡಕ್ಷನ್)ದಲ್ಲಿ ಹೆಚ್ಚುವರಿಯಾಗಿ 75,000 ರೂ. ವಿನಾಯ್ತಿಯನ್ನೂ ನೀಡಲಾಗಿತ್ತು.

24 ಲಕ್ಷ ರೂ.ಗಳಿಗಿಂತ ಹೆಚ್ಚಿನ ಆದಾಯಕ್ಕೆ ಗರಿಷ್ಠ ತೆರಿಗೆ ದರವು ಶೇ. 30ರಷ್ಟೇ ಉಳಿದಿದ್ದರೂ ಕೂಡ ತೆರಿಗೆ ಸ್ಲ್ಯಾಬ್-ಗಳ ಪುನರಚನೆಯು ನಾನಾ ಆದಾಯ ಮಟ್ಟಗಳಲ್ಲಿನ ಹೊರೆಯನ್ನು ತಗ್ಗಿಸಿದೆ. ಇದರೊಂದಿಗೆ ಹೊಸ ಸರಳೀಕೃತ ಆದಾಯ ತೆರಿಗೆ ಪದ್ಧತಿಯನ್ನೂ ಕೂಡ ಘೋಷಣೆ ಮಾಡಲಾಗಿತ್ತು.

ಈಗಿನ ಸ್ಥಿತಿಗತಿ:

ನೈಜ ಬಳಕೆಯ ಬೆಳವಣಿಗೆಯು (PFCE) 2025ರ ಆರ್ಥಿಕ ವರ್ಷದಲ್ಲಿದ್ದ ಶೇ 7.2 ರಿಂದ 2026ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ 7.5ಕ್ಕೆ ಏರಿತ್ತು. ಆದರೆ, ಮುಂಗಡ ಅಂದಾಜುಗಳ ಪ್ರಕಾರ 2026ರ ಆರ್ಥಿಕ ವರ್ಷದ ಅಂತ್ಯಕ್ಕೆ ಇದು ಶೇ 7 ಕ್ಕೆ ಕುಸಿಯುವ ಸಾಧ್ಯತೆ ಗೋಚರಿಸುತ್ತಿದೆ.

ಇದರರ್ಥ, 2025ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಜೆಟ್ ಅವಧಿಯ ಮಧ್ಯದಲ್ಲಿ ಮಾಡಲಾದ ಜಿಎಸ್ಟಿ ಕಡಿತವು ಬಳಕೆಯ ಬೆಳವಣಿಗೆಯನ್ನು ದೀರ್ಘಕಾಲ ಕಾಯ್ದುಕೊಳ್ಳುವ ಸಾಧ್ಯತೆ ಕಡಿಮೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಪ್ರಕಾರ, ಆರ್ಥಿಕ ಬೆಳವಣಿಗೆಯು 2026ರ ಆರ್ಥಿಕ ವರ್ಷದ ಶೇ 7.4 ರಿಂದ 2027ರ ಆರ್ಥಿಕ ವರ್ಷದಲ್ಲಿ ಶೇ 6.4ಕ್ಕೆ ಇಳಿಕೆಯಾಗಲಿದೆ. ಹೀಗಾಗಿ, ಬಳಕೆಯ ಬೆಳವಣಿಗೆಯು ಮಂದಗತಿಯಲ್ಲಿಯೇ ಮುಂದುವರಿಯುವ ಸಾಧ್ಯತೆಯಿದೆ.

ಬಂಡವಾಳ ವೆಚ್ಚಕ್ಕೆ ಉತ್ತೇಜನ

ಬಂಡವಾಳ ವೆಚ್ಚವನ್ನು ಹೆಚ್ಚಿಸಲು ಹಲವಾರು ಹೊಸ ಉಪಕ್ರಮಗಳನ್ನು ಘೋಷಿಸಲಾಗಿತ್ತು:

• ಮೂಲಸೌಕರ್ಯ ಸಂಬಂಧಿತ ಸಚಿವಾಲಯಗಳು ಮತ್ತು ರಾಜ್ಯಗಳಿಂದ ಮೂರು ವರ್ಷಗಳ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಗಳು.

• ನಿರ್ದಿಷ್ಟ ಸುಧಾರಣೆಗಳಿಗೆ ಒಳಪಟ್ಟು, ರಾಜ್ಯಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲಕ್ಕಾಗಿ 1.5 ಲಕ್ಷ ಕೋಟಿ ರೂ. ಹಂಚಿಕೆ.

• ಹೊಸ ಯೋಜನೆಗಳಿಂದ 10 ಲಕ್ಷ ಕೋಟಿ ರೂ. ಸಂಗ್ರಹಿಸಲು 'ಆಸ್ತಿ ನಗದೀಕರಣ ಯೋಜನೆ 2025-30'

• ನಗರಗಳನ್ನು 'ಬೆಳವಣಿಗೆಯ ಕೇಂದ್ರಗಳನ್ನಾಗಿ' ಅಭಿವೃದ್ಧಿಪಡಿಸಲು 1 ಲಕ್ಷ ಕೋಟಿ ರೂ. ಗಳ 'ಅರ್ಬನ್ ಚಾಲೆಂಜ್ ಫಂಡ್' (UCF) ಸ್ಥಾಪನೆ; ಇದಕ್ಕೆ 2025ರ ಆರ್ಥಿಕ ವರ್ಷದಲ್ಲಿ 10,000 ಕೋಟಿ ರೂ. ಮೀಸಲಿಡಲಾಗಿತ್ತು.

• ವಿದ್ಯುತ್ ವಿತರಣಾ ಸುಧಾರಣೆಗಳು ಮತ್ತು ಅಂತರ್-ರಾಜ್ಯ ವಿದ್ಯುತ್ ಪ್ರಸರಣ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ, ರಾಜ್ಯಗಳಿಗೆ ತಮ್ಮ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (GSDP) ಶೇ̤ 0.5 ರಷ್ಟು ಹೆಚ್ಚುವರಿ ಸಾಲ ಪಡೆಯಲು ಅವಕಾಶ ನೀಡಲಾಗಿದೆ.

• ಪರಮಾಣು ಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಲು ಮತ್ತು ಪರಮಾಣು ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಈಗಿರುವ 8.8 ಗಿಗಾವ್ಯಾಟ್-ನ್ನು (GW) 2047ರ ವೇಳೆಗೆ 100 GWಗೆ ಏರಿಸಲು ಸಂಬಂಧಪಟ್ಟ ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ. ಅಲ್ಲದೆ, 2033ರ ವೇಳೆಗೆ ಕನಿಷ್ಠ ಐದು ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳನ್ನು (SMRs) ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ.

• ವಿಮಾ ಕ್ಷೇತ್ರದಲ್ಲಿನ ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ. 74 ರಿಂದ 100ಕ್ಕೆ ಏರಿಸಲಾಗಿದೆ.

ಈಗಿನ ಸ್ಥಿತಿಗತಿ:

ಒಟ್ಟು ಬಂಡವಾಳ ವೆಚ್ಚದ (GFCF) ನೈಜ ಬೆಳವಣಿಗೆಯು 2025ರ ಆರ್ಥಿಕ ವರ್ಷದಲ್ಲಿದ್ದ ಶೇ 7.1 ರಿಂದ 2026ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಶೇ 7.6 ಕ್ಕೆ ಏರಿಕೆಯಾಗಿದೆ. ಮುಂಗಡ ಅಂದಾಜುಗಳ ಪ್ರಕಾರ ಇದು ಆರ್ಥಿಕ ವರ್ಷದ ಅಂತ್ಯಕ್ಕೆ ಶೇ 7.8 ರಷ್ಟಿರಲಿದೆ ಎಂದು ಅಂದಾಜಿಸಲಾಗಿದೆ.

ಏಪ್ರಿಲ್-ನವೆಂಬರ್ ಅವಧಿಯಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು ಬಜೆಟ್ನ ಶೇ 58.7 ರಷ್ಟಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತಮ ಪ್ರಗತಿಯಲ್ಲಿದೆ. ಆದರೆ, ಕೇಂದ್ರವು ಉತ್ತೇಜಿಸಲು ಪ್ರಯತ್ನಿಸುತ್ತಿರುವ ರಾಜ್ಯಗಳ ಬಂಡವಾಳ ವೆಚ್ಚವು ಇದೇ ಅವಧಿಯಲ್ಲಿ ಕೇವಲ ಶೇ.38ರಷ್ಟಿದ್ದು, ಉತ್ಸಾಹಜನಕವಾಗಿಲ್ಲ (21 ರಾಜ್ಯಗಳ ಸಿಎಜಿ ಮಾಸಿಕ ವರದಿಗಳ ವಿಶ್ಲೇಷಣೆ ಪ್ರಕಾರ). ರಾಜ್ಯಗಳ ಈ ಕಳಪೆ ಪ್ರದರ್ಶನಕ್ಕೆ ಅವುಗಳ ಮೇಲಿರುವ ಅಧಿಕ 'ಕಂದಾಯ ವೆಚ್ಚದ' ಹೊರೆಯೇ ಪ್ರಮುಖ ಕಾರಣ.

ಇದುವರೆಗೆ ಯುಸಿಎಫ್ (ಅರ್ಬನ್ ಚಾಲೆಂಜ್ ಫಂಡ್) ಸ್ಥಾಪನೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ವಿದ್ಯುತ್ ಸಚಿವಾಲಯವು ವಿದ್ಯುತ್ ವಿತರಣಾ ಕಂಪನಿಗಳ ಕಾರ್ಯಕ್ಷಮತೆಯಲ್ಲಿ ಐತಿಹಾಸಿಕ ಬದಲಾವಣೆಯನ್ನು ಘೋಷಿಸಿದೆ. 2024ರ ಆರ್ಥಿಕ ವರ್ಷದಲ್ಲಿ 25,553 ಕೋಟಿ ರೂ. ನಷ್ಟದಲ್ಲಿದ್ದ ಈ ಕಂಪನಿಗಳು, 2025ರ ಆರ್ಥಿಕ ವರ್ಷದಲ್ಲಿ 2,701 ಕೋಟಿ ರೂಪಾಯಿ ತೆರಿಗೆ ನಂತರದ ಲಾಭವನ್ನು ದಾಖಲಿಸಿವೆ. ಇದು ದಶಕಗಳ ಕಾಲದ ಶ್ರಮದ ಫಲವಾಗಿದೆ.

'ಆಸ್ತಿ ನಗದೀಕರಣ ಯೋಜನೆ 2025-30'ಕ್ಕೆ ಸಂಬಂಧಿಸಿದಂತೆ, ಎನ್ಎಚ್ಎಐ 2025ರ ಜೂನ್ 9ರಂದು ತನ್ನ “ಕಾರ್ಯತಂತ್ರ”ವನ್ನು ಬಿಡುಗಡೆ ಮಾಡಿದೆ. ಆದರೆ ಅಂದಿನಿಂದ ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ವಿಮಾ ಕ್ಷೇತ್ರದಲ್ಲಿನ ವಿದೇಶಿ ನೇರ ಹೂಡಿಕೆಯನ್ನು 2025ರ ಡಿಸೆಂಬರ್ ತಿಂಗಳಿನಲ್ಲಿ ಹೆಚ್ಚಿಸಲಾಯಿತು. ಆದರೆ ಕಳೆದ ದಶಕದಲ್ಲಿ ಎಫ್ಡಿಐ ಮಿತಿಯನ್ನು ಶೇ.26ರಿಂದ 74ಕ್ಕೆ ಏರಿಸಿದಾಗಲೂ ಯಾವುದೇ ದೊಡ್ಡ ಬದಲಾವಣೆ ಕಂಡುಬರದ ಕಾರಣ, ಈ ಬಾರಿಯ ಏರಿಕೆಯೂ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ಭಾವಿಸಲಾಗಿದೆ.

ಅದೇ ಸಮಯದಲ್ಲಿ, ಲಾಭವನ್ನು ನಗದು ಮಾಡಿಕೊಳ್ಳುವ ಮತ್ತು ಹೊರಹರಿವಿನ ಹೂಡಿಕೆಗಳಿಂದಾಗಿ, ಒಟ್ಟು ಎಫ್ಡಿಐ ಒಳಹರಿವು 2024ರ ಆರ್ಥಿಕ ವರ್ಷದಲ್ಲಿದ್ದ 22 ಶತಕೋಟಿ ಡಾಲರ್ನಿಂದ 2025ರಲ್ಲಿ 595 ಮಿಲಿಯನ್ ಡಾಲರ್ಗೆ ಭಾರಿ ಕುಸಿತ ಕಂಡಿದೆ. ಏಪ್ರಿಲ್-ಅಕ್ಟೋಬರ್ 2025ರ ಅವಧಿಯಲ್ಲಿ ಇದು 6 ಶತಕೋಟಿ ಡಾಲರ್ಗೆ ಚೇತರಿಸಿಕೊಂಡಿದೆಯಾದರೂ, ಆಗಸ್ಟ್-ಅಕ್ಟೋಬರ್ ಅವಧಿಯಲ್ಲಿ 4.5 ಬಿಲಿಯನ್ ಡಾಲರ್ ಹಣದ ಹೊರಹರಿವಿನಿಂದ ಮತ್ತೆ ಕುಸಿಯುವ ಸಾಧ್ಯತೆ ಕಾಣುತ್ತಿದೆ.

ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು ಕೂಡ ನಿರ್ಗಮಿಸುತ್ತಿದ್ದಾರೆ. 2025ರ ಆರ್ಥಿಕ ವರ್ಷದಲ್ಲಿ 2.7 ಶತಕೋಟಿ ಡಾಲರ್ ಒಳಹರಿವು ಇತ್ತು, ಆದರೆ 2025ರ ಏಪ್ರಿಲ್ ತಿಂಗಳಿನಿಂದ 2026ರ ಜನವರಿ ನಡುವೆ ಹೂಡಿಕೆದಾರರು ಬರೋಬ್ಬರಿ 6.7 ಶತಕೋಟಿ ಡಾಲರ್ ಹಣವನ್ನು ಹಿಂಪಡೆದಿರುವುದು ವಿಶೇಷ.

ಪರಮಾಣು ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ನೀಡಲು ಕಾನೂನುಗಳಿಗೆ ತಿದ್ದುಪಡಿ ತರಲಾಗಿದೆ ಮತ್ತು ನಾಗರಿಕ ಹೊಣೆಗಾರಿಕೆಯ ನಿಯಮಗಳನ್ನು ಸಡಿಲಗೊಳಿಸಲಾಗಿದೆ.

ತಯಾರಿಕಾ ಕ್ಷೇತ್ರಕ್ಕೆ ಉತ್ತೇಜನ

'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಬಲ ನೀಡಲು ಹೊಸ ರಾಷ್ಟ್ರೀಯ ತಯಾರಿಕಾ ಮಿಷನ್ ಪ್ರಾರಂಭಿಸಲಾಯಿತು. ಇದು ಐದು ಪ್ರಮುಖ ಅಂಶಗಳ ಮೇಲೆ ಗಮನಹರಿಸಿದೆ: ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ ಮತ್ತು ವೆಚ್ಚ ಕಡಿತ, ಬೇಡಿಕೆಯಲ್ಲಿರುವ ಉದ್ಯೋಗಗಳಿಗೆ ತಕ್ಕಂತೆ ಸಿದ್ಧವಿರುವ ಕಾರ್ಯಪಡೆ, ಸಕ್ರಿಯ ಎಂಎಸ್ಎಂಇ ವಲಯ, ಮತ್ತು ಸುಧಾರಿತ ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳ ಲಭ್ಯತೆ.

ಇದರ ಜೊತೆಗೆ, ಹಲವಾರು ನಿರ್ಣಾಯಕ ಖನಿಜಗಳು, ತಾಂತ್ರಿಕ ಜವಳಿ ಉತ್ಪನ್ನಗಳು, ಎಲೆಕ್ಟ್ರಾನಿಕ್ ಬಿಡಿಭಾಗಗಳು, ಇವಿ ಬ್ಯಾಟರಿಗಳ ಬಂಡವಾಳ ಸರಕುಗಳು ಮತ್ತು ಟೆಲಿಕಾಂ ಉಪಕರಣಗಳಿಗೆ ಸುಂಕ ಕಡಿತ ಮತ್ತು ವಿನಾಯಿತಿಗಳನ್ನು ನೀಡಲಾಗಿದೆ.

ಈಗಿನ ಸ್ಥಿತಿಗತಿ: ಹೊಸ ತಯಾರಿಕಾ ಮಿಷನ್ನ ಯಾವುದೇ ಲಕ್ಷಣಗಳು ಇನ್ನೂ ಕಂಡುಬಂದಿಲ್ಲ. ಉತ್ಪಾದನಾ ಆಧಾರಿತ ಉತ್ತೇಜಕ (ಪಿಎಲ್ಐ) 1.0 ಮತ್ತು ಪಿಎಲ್ಐ 2.0 ಯೋಜನೆಗಳು ಕಳಪೆ ಪ್ರದರ್ಶನದ ಕಾರಣದಿಂದ ಸ್ಥಗಿತಗೊಳ್ಳಲಿವೆ ಎಂಬ ಸುದ್ದಿ ಬಂದ ಬೆನ್ನಲ್ಲೇ, ಕೇಂದ್ರ ಸರ್ಕಾರವು 2025ರ ಮಾರ್ಚ್ 28 ರಂದು ಎಲೆಕ್ಟ್ರಾನಿಕ್ ಬಿಡಿಭಾಗಗಳಿಗಾಗಿ 22,919 ಕೋಟಿ ರೂಪಾಯಿ ವೆಚ್ಚದ ಪಿಎಲ್ಐ 3.0 ಅನ್ನು ಜಾರಿಗೆ ತಂದಿತು.

ಅದೇ ಸಮಯದಲ್ಲಿ, ತಯಾರಿಕಾ ವಲಯದ ಒಟ್ಟು ಮೌಲ್ಯವರ್ಧಿತ (GVA) ಪಾಲು 2025ರ ಆರ್ಥಿಕ ವರ್ಷದಲ್ಲಿದ್ದ ಶೇ 17.2 ರಿಂದ 2026ರಲ್ಲಿ ಶೇ 17.1ಕ್ಕೆ ಕುಸಿಯುವ ಸಾಧ್ಯತೆ ಕಾಣುತ್ತಿದೆ. ಆದರೆ ಇದೇ ಅವಧಿಯಲ್ಲಿ ಅದರ ನೈಜ ಬೆಳವಣಿಗೆಯು ಶೇ 4.5 ರಿಂದ ಶೇ 7 ಕ್ಕೆ ಏರುವ ಅಂದಾಜಿದೆ.

ರಫ್ತು ಉತ್ತೇಜನಕ್ಕೆ ಕ್ರಮಗಳು

ಅಮೆರಿಕದ 'ಪರಸ್ಪರ ಸುಂಕ'ದ ಬೆದರಿಕೆಗಳ ಹಿನ್ನೆಲೆಯಲ್ಲಿ, ಸುಂಕದ ರಚನೆಯನ್ನು ಸರಳಗೊಳಿಸಲಾಯಿತು. ಇದರಲ್ಲಿ 15 ಸುಂಕ ದರಗಳನ್ನು 7ಕ್ಕೆ ಇಳಿಸಲಾಯಿತು. ತಂತ್ರಜ್ಞಾನ, ಆಟೋಮೊಬೈಲ್, ಕೈಗಾರಿಕಾ ಕಚ್ಚಾ ವಸ್ತುಗಳು ಮತ್ತು ತ್ಯಾಜ್ಯ ಆಮದು ಸೇರಿದಂತೆ ಅಮೆರಿಕದ ಕಂಪನಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಹಲವು ಸುಂಕಗಳಲ್ಲಿ ಕಡಿತ ಮಾಡಲಾಯಿತು.

ಮತ್ತೊಂದು ಕ್ರಮವೆಂದರೆ, ಬಹು ಹಂತದ ಸೆಸ್ ಅಥವಾ ಸರ್ಚಾರ್ಜ್ಗಳ ಬದಲಿಗೆ ಏಕರೂಪದ ವ್ಯವಸ್ಥೆ ತರುವುದು ಮತ್ತು 82 ಉತ್ಪನ್ನಗಳ ಮೇಲಿನ ಸಾಮಾಜಿಕ ಸರ್ಚಾರ್ಜ್ ರದ್ದುಪಡಿಸುವ ಪ್ರಸ್ತಾಪ. ರಫ್ತುದಾರರಿಗೆ ಸಾಲ ಸೌಲಭ್ಯ, ಕ್ರಾಸ್-ಬಾರ್ಡರ್ ಫ್ಯಾಕ್ಟರಿಂಗ್ ಬೆಂಬಲ ಮತ್ತು ಎಂಎಸ್ಎಂಇಗಳಿಗೆ ನೆರವು ನೀಡುವ ಮೂಲಕ ರಫ್ತು ಹೆಚ್ಚಿಸಲು ಹೊಸ ರಫ್ತು ಉತ್ತೇಜನಾ ಅಭಿಯಾನ ಪ್ರಾರಂಭಿಸಲಾಯಿತು.

ಈಗಿನ ಸ್ಥಿತಿಗತಿ: ಸುಂಕದ ಸರಳೀಕರಣ ಮತ್ತು ಕಡಿತದ ಪ್ರಯತ್ನಗಳು ಅಮೆರಿಕವನ್ನು ತೃಪ್ತಿಪಡಿಸಲು ಮಾಡಿದ ತಾತ್ಕಾಲಿಕ ಕ್ರಮಗಳಂತೆ ಕಂಡುಬಂದವು. ಆದರೆ ಅದು ವಿಫಲವಾಗಿದ್ದು, ಅಮೆರಿಕವು ಭಾರತದ ಮೇಲೆ ಶೇ 25 ರಷ್ಟು ಪರಸ್ಪರ ಸುಂಕಗಳನ್ನು ವಿಧಿಸಿದೆ. ಈಗ ಅಮೆರಿಕವು ಬಾಸುಮತಿ ಅಕ್ಕಿ ಮತ್ತು ಬೇಳೆಕಾಳುಗಳ ಮೇಲೆಯೂ ಸುಂಕ ಹೆಚ್ಚಿಸುವ ಬೆದರಿಕೆ ಹಾಕುತ್ತಿದೆ.

2025ರ ನವೆಂಬರ್ 12ರಂದು ರಫ್ತು ಉತ್ತೇಜನಾ ಅಭಿಯಾನವನ್ನು ಘೋಷಿಸಲಾಯಿತು ಮತ್ತು ಇದಕ್ಕೆ 25,060 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

ಅಮೆರಿಕದೊಂದಿಗಿನ ಸುಂಕದ ಬಿಕ್ಕಟ್ಟು ಬಗೆಹರಿಯುವಲ್ಲಿ ಆಗುತ್ತಿರುವ ವಿಪರೀತ ವಿಳಂಬದ ಕಾರಣದಿಂದಾಗಿ ಭಾರತೀಯ ರಫ್ತುದಾರರು ಆತಂಕದಲ್ಲಿದ್ದಾರೆ. 2025ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಸರಕುಗಳ ರಫ್ತು ಮೌಲ್ಯದ ದೃಷ್ಟಿಯಿಂದ (ಪ್ರಮಾಣದ ದೃಷ್ಟಿಯಿಂದಲ್ಲ) ಶೇ 2.4 ರಷ್ಟು ಏರಿಕೆಯಾಗಿದೆ, ಆದರೆ ಇದನ್ನು ನೈಜ ಬೆಳವಣಿಗೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಒಟ್ಟು ರಫ್ತು ಪಾಲು 2025ರ ಆರ್ಥಿಕ ವರ್ಷದಲ್ಲಿದ್ದ ಶೇ 21.6 ರಿಂದ 2026ರ ಆರ್ಥಿಕ ವರ್ಷದಲ್ಲಿ ಶೇ 21.4ಕ್ಕೆ ಕುಸಿತ ಕಾಣುತ್ತಿದೆ.

ಈ ಮಧ್ಯೆ, 16ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಅರವಿಂದ್ ಪನಗೇರಿಯಾ ಅವರು 2026ರ ಜನವರಿ 19ರಂದು ವಾಣಿಜ್ಯ ದಿನಪತ್ರಿಕೆಗೆ ನೀಡಿದ ಲೇಖನದಲ್ಲಿ, ಭಾರತವು ಕಸ್ಟಮ್ಸ್ ಸುಂಕಗಳ ದರವನ್ನು ತಕ್ಷಣವೇ ಏಕರೂಪದ ಶೇ.7ಕ್ಕೆ ಇಳಿಸಬೇಕು ಎಂದು ಹೇಳಿದ್ದಾರೆ. ಶೇ 25 ಅಥವಾ ಅದಕ್ಕಿಂತ ಕಡಿಮೆ ಇರುವ ಸುಂಕಗಳನ್ನು ತಕ್ಷಣವೇ ಇಳಿಸಬೇಕು ಮತ್ತು ಶೇ 25 ಕ್ಕಿಂತ ಹೆಚ್ಚಿರುವ ಸುಂಕಗಳನ್ನು (ಕೆಲವು ಶೇ 100 ಮತ್ತು ಶೇ 125ರಷ್ಟು ಹೆಚ್ಚಿವೆ) ಮುಂದಿನ ಮೂರು ವರ್ಷಗಳಲ್ಲಿ ಹಂತ ಹಂತವಾಗಿ ಕಡಿಮೆ ಮಾಡಬೇಕು ಎಂದು ಅವರು ಸೂಚಿಸಿದ್ದಾರೆ. ಗುಣಮಟ್ಟ ನಿಯಂತ್ರಣ ಆದೇಶಗಳನ್ನು ರದ್ದುಪಡಿಸುವುದು ಮತ್ತು ಡಂಪಿಂಗ್ ವಿರೋಧಿ ಸುಂಕಗಳನ್ನು ನಿಯಂತ್ರಿಸುವುದು ವ್ಯಾಪಾರ ಸುಧಾರಣೆಗೆ ಅತ್ಯಗತ್ಯ ಎಂಬುದು ಅವರ ಇತರ ಪ್ರಮುಖ ಸಲಹೆಗಳಾಗಿವೆ.

ಹೆಚ್ಚಿನ ಕೈಗಾರಿಕಾ ಕಚ್ಚಾ ವಸ್ತುಗಳ ಮೇಲೆ 'ಶೂನ್ಯ ಸುಂಕ' ವ್ಯವಸ್ಥೆಗೆ ಬದಲಾವಣೆ ಹೊಂದಬೇಕು ಎಂದು ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಶಿಯೇಟಿವ್ನ ಅಜಯ್ ಶ್ರೀವಾಸ್ತವ ಅವರು ಶಿಫಾರಸು ಮಾಡಿದ್ದಾರೆ. ಅಲ್ಲದೆ, ಮುಂದಿನ ಮೂರು ವರ್ಷಗಳಲ್ಲಿ ಸಿದ್ಧಪಡಿಸಿದ ಕೈಗಾರಿಕಾ ಸರಕುಗಳ ಮೇಲೆ ಸುಮಾರು ಶೇ 5 ರಷ್ಟು ಕಡಿಮೆ ಮತ್ತು ಪ್ರಮಾಣಿತ ಸುಂಕವನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ವಿತ್ತೀಯ ಬಲವರ್ಧನೆ

ಕೇಂದ್ರ ಸರ್ಕಾರದ ಸಾಲವನ್ನು 2025ರ ಆರ್ಥಿಕ ವರ್ಷದ ಶೇ 56.8 ರಿಂದ 2026ರ ಆರ್ಥಿಕ ವರ್ಷದಲ್ಲಿ ಜಿಡಿಪಿಯ ಶೇ 56.1ಕ್ಕೆ ಇಳಿಸುವ ಭರವಸೆ ನೀಡಲಾಗಿದೆ. ಅದೇ ರೀತಿ, ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 4.9 ರಿಂದ ಶೇ 4.4 ಕ್ಕೆ ಇಳಿಸುವ ಗುರಿ ಹೊಂದಲಾಗಿದೆ.

ಈಗಿನ ಸ್ಥಿತಿಗತಿ: ನೈಜ ಸ್ಥಿತಿಗತಿಯು ಬಜೆಟ್ ದಾಖಲೆಗಳ ಸಲ್ಲಿಕೆಯ ನಂತರವಷ್ಟೇ ತಿಳಿಯಲಿದೆ. ಆದರೆ ಇತ್ತೀಚಿನ ಪ್ರವೃತ್ತಿಗಳನ್ನು ಗಮನಿಸಿದರೆ, ಸಾಲ ಮತ್ತು ವಿತ್ತೀಯ ಕೊರತೆ ಎರಡೂ ಕಡಿಮೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

2026ರ ಬಜೆಟ್‌ನಿಂದ ಏನು ನಿರೀಕ್ಷಿಸಬಹುದು?

ಪ್ರಗತಿಯ ಗತಿಯನ್ನು ಗಮನಿಸಿದರೆ, ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ:

ಬಳಕೆಗೆ ಉತ್ತೇಜನ: 2027ರ ಆರ್ಥಿಕ ವರ್ಷದಲ್ಲಿ ಬೆಳವಣಿಗೆಯ ದರವು ಶೇ7.4 ರಿಂದ ಶೇ 6.4 ಕ್ಕೆ ಇಳಿಯಲಿದೆ ಎಂಬ ಐಎಂಎಫ್ ಮುನ್ಸೂಚನೆಯ ಹಿನ್ನೆಲೆಯಲ್ಲಿ, 2026ರ ಬಜೆಟ್ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿರಬೇಕು. ಕೇವಲ ನಗದು ಹಂಚಿಕೆ ಪರಿಹಾರವಲ್ಲ; ಗುಣಮಟ್ಟದ ಉದ್ಯೋಗಗಳು, ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತೆಯ ಮೇಲೆ ಗಮನ ಹರಿಸಬೇಕು.

ಖಾಸಗಿ ಹೂಡಿಕೆ: ಭಾರತೀಯ ಕಂಪನಿಗಳು ಅತಿಯಾದ ಲಾಭ ಗಳಿಸುತ್ತಿದ್ದರೂ ಮತ್ತು ಹಲವಾರು ಸಬ್ಸಿಡಿಗಳನ್ನು ಪಡೆಯುತ್ತಿದ್ದರೂ, ಖಾಸಗಿ ಬಂಡವಾಳ ಹೂಡಿಕೆ ನಿರೀಕ್ಷಿತ ಮಟ್ಟದಲ್ಲಿಲ್ಲ. 'ಉಚಿತವಾಗಿ ಯಾವುದೂ ಸಿಗುವುದಿಲ್ಲ' ಎಂಬ ಸಂಕೇತ ನೀಡಲು, ಪಿಎಲ್ಐ ಮತ್ತು ಕಾರ್ಪೊರೇಟ್ ತೆರಿಗೆ ಕಡಿತದಂತಹ ಎಲ್ಲಾ ಸಬ್ಸಿಡಿಗಳನ್ನು ಹಿಂಪಡೆಯುವ ಆಯ್ಕೆಯನ್ನು ಪರಿಗಣಿಸಬಹುದು.

ತಯಾರಿಕಾ ವಲಯ: ತಯಾರಿಕಾ ವಲಯದ ಜಿವಿಎ ಬೆಳೆಯುತ್ತಿರಬಹುದು, ಆದರೆ ಕೈಗಾರಿಕಾ ತಯಾರಿಕಾ ಸೂಚ್ಯಂಕವು ಕಳೆದ ದಶಕದಲ್ಲಿ ಕೇವಲ ಶೇ 3 ರಷ್ಟು ಸರಾಸರಿ ಬೆಳವಣಿಗೆ ಕಂಡಿದೆ. ಇದು ಜಿವಿಎ ಅಂಕಿಅಂಶಗಳ ಬಗ್ಗೆ ಅನುಮಾನ ಮೂಡಿಸುತ್ತದೆ. ಸಬ್ಸಿಡಿಗಳ ಬದಲಾಗಿ, ಮುಕ್ತ ಮತ್ತು ನ್ಯಾಯಸಮ್ಮತ ಸ್ಪರ್ಧೆಗೆ ಅವಕಾಶ ನೀಡುವ ಮೂಲಕ ತಯಾರಿಕಾ ಕ್ಷೇತ್ರಕ್ಕೆ ಬಲ ತುಂಬಬೇಕು.

ಸಂಶೋಧನೆ ಮತ್ತು ಅಭಿವೃದ್ಧಿ: ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು, ಸಂಶೋಧನೆ ಮತ್ತು ಅಭಿವೃದ್ಧಿ ಮೇಲಿನ ವೆಚ್ಚವನ್ನು ಜಿಡಿಪಿಯ ಶೇ 0.7ಕ್ಕಿಂತ ಕಡಿಮೆ ಇದ್ದು, ಇದನ್ನು ಚೀನಾದ ಶೇ 2.7 ಮಟ್ಟಕ್ಕೆ ಏರಿಸುವ ಅಗತ್ಯವಿದೆ.

ಇಂಧನ ಮತ್ತು ಮೂಲಸೌಕರ್ಯ: ಭಾರತವು ಶೇ 50ಕ್ಕಿಂತ ಹೆಚ್ಚು ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದೆ. ಆದರೆ ಮೂಲಸೌಕರ್ಯದ ಕೊರತೆಯಿಂದಾಗಿ ಕೇವಲ ಶೇ 24ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪರಮಾಣು ಶಕ್ತಿಯು ಅತ್ಯಂತ ದುಬಾರಿಯಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಅದರ ಅಗತ್ಯವಿಲ್ಲ. ಇರುವ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಆದ್ಯತೆ ನೀಡಬೇಕು.

Read More
Next Story