Sanjana Ganesan Slams Trolls for Mocking Son Angad Bumrah
x

ಎಕ್ಸ್​ನಿಂದ ಪಡೆದ ಚಿತ್ರ.

ತಮ್ಮ ಒಂದೂವರೆ ವರ್ಷದ ಮಗನನ್ನು ಟ್ರೋಲ್ ಮಾಡಿದವರಿಗೆ ತಿರುಗೇಟು ನೀಡಿದ ಸಂಜನಾ ಗಣೇಶನ್​​

ತನ್ನ ಅಪ್ಪ ವಿಕೆಟ್ ಪಡೆದಾಗ ಪುಟಾಣಿ ಅಂಗದ್​ ಸಂಭ್ರಮಿಸಿದ್ದ. ಈ ಮುಖಭಾವನೆಯನ್ನು ಕೆಲವರು ಗಾಯ ಎಂದು ಹೇಳಿದ್ದರೆ, ಇನ್ನೂ ಕೆಲವರು 'ಖಿನ್ನತೆ' ಎಂದು ಬರೆದುಕೊಂಡಿದ್ದರು. ಈ ಕಾಮೆಂಟ್​ಗಳು ಸಂಜನಾ ಅವರನ್ನು ಸಿಟ್ಟಿಗೇಳಿಸಿದೆ.


ಸೋಶಿಯಲ್​ ಮೀಡಿಯಾಗಳ ಮೂಲಕ ತಮ್ಮ ಒಂದೂವರೆ ವರ್ಷದ ಪುತ್ರ ಅಂಗದ್​ನನ್ನು ಟ್ರೋಲ್ ಮಾಡಿದವರಿಗೆ ಜಸ್‌ಪ್ರೀತ್ ಬುಮ್ರಾ ಅವರ ಪತ್ನಿ ಮತ್ತು ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ತಿರುಗೇಟು ಕೊಟ್ಟಿದ್ದಾರೆ. ಈ ವೇಳೆ ಅವರು ಅನಗತ್ಯವಾಗಿ ಸುಳ್ಳು ಸುದ್ದಿ ಹರಡುವ ಜನರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯದ ವೇಳೆ ನೆಟ್ಟಿಗರು ಅನಗತ್ಯ ತರ್ಲೆ ಮಾಡಿದ್ದರು. ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಆಂಗದ್​ನ ಮುಖದ ಭಾವನೆಯ ಕಿರು ವಿಡಿಯೋವೊಂದು ವೈರಲ್ ಆಗಿತ್ತು. ತನ್ನ ಅಪ್ಪ ವಿಕೆಟ್ ಪಡೆದಾಗ ಪುಟಾಣಿ ಅಂಗದ್​ ಸಂಭ್ರಮಿಸಿರಲಿಲ್ಲ. ಸಂಜನಾ ಒತ್ತಾಯಪೂರ್ವಕವಾಗಿ ಚಪ್ಪಾಳೆ ತಟ್ಟಿಸಿದ್ದರು. ಆದಾಗ್ಯೂ ಆತನ ಮುಖದಲ್ಲಿ ಕಳೆ ಇರಲಿಲ್ಲ. ಈ ಮುಖಭಾವನೆಯನ್ನು ಕೆಲವರು 'ಖಿನ್ನತೆ' ಎಂದು ಬರೆದುಕೊಂಡಿದ್ದರು. ಈ ಕಾಮೆಂಟ್​ಗಳು ಸಂಜನಾ ಅವರನ್ನು ಸಿಟ್ಟಿಗೇಳಿಸಿದೆ.

"ನಮ್ಮ ಮಗ ನಿಮ್ಮೆಲ್ಲರ ಮನರಂಜನೆಯ ವಸ್ತುವಲ್ಲ. ನಾವು ಆಂಗದ್​​ನನ್ನು ಸಾಮಾಜಿಕ ಜಾಲತಾಣದಿಂದ ದೂರವಿಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದೇವೆ. ಇಂಟರ್ನೆಟ್ ವೇದಿಕೆಗಳು ಅಪಾಯಕಾರಿ ಸ್ಥಳವಾಗಿದೆ. ಆದಾಗ್ಯೂ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಕ್ಯಾಮೆರಾಗಳಲ್ಲಿ ಆತ ಕಾಣಿಸಿಕೊಳ್ಳುವುದು ಅನಿವಾರ್ಯವಾಯಿತು. ನಾನು ಮತ್ತು ಆಂಗದ್​ ಅಲ್ಲಿಗೆ ಬಂದಿದ್ದು, ಜಸ್​ಪ್ರಿತ್​ ಬುಮ್ರಾಗೆ ಬೆಂಬಲ ನೀಡುವುದಕ್ಕೆ. ಅದನ್ನೇ ತಪ್ಪಾಗಿ ವಿವರಿಸಬಾರದು, ಎಂದು ಅವರು ಹೇಳಿದ್ದಾರೆ.

"ಮೂರು ಸೆಕೆಂಡ್‌ಗಳ ವಿಡಿಯೋ ಆಧರಿಸಿ ಆಂಗದ್​​ನ ವ್ಯಕ್ತಿತ್ವ ನಿರ್ಧರಿಸುವ ಕೀಬೋರ್ಡ್ ವಾರಿಯರ್‌ಗಳಿಗೆ ಯಾವುದೇ ನಿಯಂತ್ರಣವಿಲ್ಲ. ಒಂದೂವರೆ ವರ್ಷದ ಮಗುವನ್ನು 'ಖಿನ್ನತೆ ಉಳ್ಳವ' ಮತ್ತು 'ಗಾಯಗೊಂಡವ' ಎಂದು ಕರೆಯುವುದು ಅಪಾಯಕಾರಿ." ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಆಂಗದ್​ನ ವಿಡಿಯೋವನ್ನು ಕೆಲವರು 2023ರ ವಿಶ್ವಕಪ್ ಫೈನಲ್‌ನಲ್ಲಿ ಬುಮ್ರಾ ತೋರ್ಪಡಿಸಿದ್ದ ನಿರಾಸೆಯ ಭಾವಕ್ಕೆ ಹೋಲಿಸಿದ್ದರು. ನಮ್ಮ ಮಗನ ಬಗ್ಗೆ, ನಮ್ಮ ಜೀವನದ ಬಗ್ಗೆ ನಿಮಗೇನೂ ಗೊತ್ತಿಲ್ಲ. ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ಸ್ವಲ್ಪ ಪ್ರಾಮಾಣಿಕತೆ ಮತ್ತು ಕರುಣೆಯಿಂದ ಈ ಜಗತ್ತಿನಲ್ಲಿ ದೊಡ್ಡ ಬದಲಾವಣೆ ತರಬಹುದು," ಎಂದು ಹೇಳಿದ್ದಾರೆ.

ಸಂಜನಾ ಮತ್ತು ಜಸ್‌ಪ್ರೀತ್ 2021ರಲ್ಲಿ ವಿವಾಹವಾಗಿದ್ದರು. 2023ರ ಸೆಪ್ಟೆಂಬರ್‌ನಲ್ಲಿ ಆಂಗದ್​ ಜನಿಸಿದ್ದ. ಸಂಜನಾ ಅವರ ಸಂದೇಶ ನೋಡಿದ ಕೆಲವರು ಅವರ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದಾರೆ. ಅನಗತ್ಯ ಟ್ರೋಲ್ ಮಾಡುವವರ ಬೆಂಡೆತ್ತಿದ್ದಾರೆ.

Read More
Next Story