ಗುಟ್ಕಾ ಜಾಹೀರಾತು: ಶಾರುಖ್, ಅಕ್ಷಯ್, ಅಜಯ್ ದೇವಗನ್ ಗೆ ನೋಟಿಸ್
x

ಗುಟ್ಕಾ ಜಾಹೀರಾತು: ಶಾರುಖ್, ಅಕ್ಷಯ್, ಅಜಯ್ ದೇವಗನ್ ಗೆ ನೋಟಿಸ್

ಗುಟ್ಕಾ ಕಂಪೆನಿಗಳನ್ನು ಉತ್ತೇಜಿಸುತ್ತಿರುವ ನಟರ ವಿರುದ್ಧ ಕ್ರಮಕ್ಕೆ ಆಗ್ರಹ


ಗುಟ್ಕಾ ಜಾಹೀರಾತು ನೀಡುವ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟರಾದ ಅಕ್ಷಯ್ ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಲಹಾಬಾದ್ ನ್ಯಾಯಾಲಯದ ಲಕ್ನೋ ಪೀಠಕ್ಕೆ

ತಿಳಿಸಿದೆ.


ಸುಪ್ರೀಂ ಕೋರ್ಟ್ ಕೂಡ ಇದೇ ವಿಷಯದ ವಿಚಾರಣೆಯನ್ನು ನಡೆಸುತ್ತಿದ್ದು, ತ್ವರಿತ ವಿಷಯದ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರ ಪರ ವಕೀಲ ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದ್ದಾರೆ. ವಾದವನ್ನು ಆಲಿಸಿದ

ಕೋರ್ಟ್‌ ಮುಂದಿನ ವಿಚಾರಣೆಯನ್ನು ಮೇ 9, 2024 ಕ್ಕೆ ನಿಗದಿಪಡಿಸಿದೆ.

ಈ ನಟರು ಉತ್ತಮ ನಟರಾಗಿದ್ದು, ಪ್ರತಿಷ್ಟಿತ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ. ಆದರೂ ಗುಟ್ಕಾ ಕಂಪೆನಿಗಳನ್ನು ಉತ್ತೇಜಿಸುತ್ತಿರುವ ನಟರು ಮತ್ತು ಪ್ರಮುಖರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅರ್ಜಿದಾರರು

ವಾದಿಸಿದರು. ಈ ಕುರಿತು ಅಕ್ಟೋಬರ್ 22 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ವಾದಿಸಿದರು.


ಬಳಿಕ ನ್ಯಾಯಾಂಗ ನಿಂದನೆ ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್‌ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಿದರು. ಕಳೆದ ಶುಕ್ರವಾರ, ಡೆಪ್ಯುಟಿ ಸಾಲಿಸಿಟರ್ ಜನರಲ್ ಎಸ್‌ಬಿ ಪಾಂಡೆ ಅವರು ಅಕ್ಷಯ್

ಕುಮಾರ್, ಶಾರುಖ್ ಖಾನ್ ಮತ್ತು ಅಜಯ್ ದೇವಗನ್ ಅವರಿಗೆ ಸರ್ಕಾರ ನೋಟಿಸ್ ಜಾರಿಮಾಡಿದ್ದು, ಅವರ ಕ್ರಮಗಳನ್ನು ವಿವರಿಸುವಂತೆ ಕೇಳಿದೆ ಎಂದು ಹೈಕೋರ್ಟ್‌ಗೆ ತಿಳಿಸಿದರು.


ನಟ ಅಮಿತಾಬ್ ಬಚ್ಚನ್‌ ಗುಟ್ಕಾ ಕಂಪೆನಿಗಳೊಂದಿಗೆ ತಮ್ಮ ಒಪ್ಪಂದವನ್ನು ರದ್ದುಗೊಳಿಸಿದರೂ, ಕಂಪೆನಿ ತಮ್ಮ ಹಳೆಯ ಜಾಹೀರಾತನ್ನು ಪ್ರಸಾರ ಮಾಡುತ್ತಿದೆ. ಹೀಗಾಗಿ ನಟ ಅವರು ಗುಟ್ಕಾ ಕಂಪನಿಗೆ ಲೀಗಲ್ ನೋಟಿಸ್

ಕಳುಹಿಸಿದ್ದಾರೆ.

Read More
Next Story