![ವಿಶೇಷ ವರ್ಗದ ಸ್ಥಾನಮಾನ ನೀಡುವುದೇ ಆಂಧ್ರಕ್ಕೆ ತೋರುವ ನಿಜವಾದ ಬದ್ಧತೆ: ಕಾಂಗ್ರೆಸ್ ವಿಶೇಷ ವರ್ಗದ ಸ್ಥಾನಮಾನ ನೀಡುವುದೇ ಆಂಧ್ರಕ್ಕೆ ತೋರುವ ನಿಜವಾದ ಬದ್ಧತೆ: ಕಾಂಗ್ರೆಸ್](https://karnataka.thefederal.com/h-upload/2024/02/25/432000-screenshot-2024-02-25-120049.webp)
ವಿಶೇಷ ವರ್ಗದ ಸ್ಥಾನಮಾನ ನೀಡುವುದೇ ಆಂಧ್ರಕ್ಕೆ ತೋರುವ ನಿಜವಾದ ಬದ್ಧತೆ: ಕಾಂಗ್ರೆಸ್
ಆಂಧ್ರದ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ವಿಶೇಷ ವರ್ಗದ ಸ್ಥಾನಮಾನವನ್ನು ನೀಡಿದರೆ ಮಾತ್ರ ಆಂಧ್ರಪ್ರದೇಶಕ್ಕೆ "ನಿಜವಾದ ಬದ್ಧತೆ" ಪ್ರದರ್ಶಿಸಿದಂತೆ ಆಗುತ್ತದೆ ಎಂದು ಕಾಂಗ್ರೆಸ್ ಹೇಳಿದೆ
ಹೊಸದಿಲ್ಲಿ, ಫೆ.25: 2014ರ ಫೆಬ್ರುವರಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ ಬದ್ಧತೆಯಂತೆ ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನವನ್ನು ನೀಡಿದರೆ ಮಾತ್ರ ಆಂಧ್ರಪ್ರದೇಶಕ್ಕೆ ನಿಜವಾದ ಬದ್ಧತೆಯನ್ನು ಪ್ರದರ್ಶಿಸಿದಂತೆ ಆಗುತ್ತದೆ ಎಂದು ಕಾಂಗ್ರೆಸ್ ಭಾನುವಾರ ಹೇಳಿದೆ.
ಕಳೆದ ವಾರ ಪ್ರಧಾನಿ ಮೋದಿ ಅವರು ಮಂಗಳಗಿರಿಯಲ್ಲಿ ಏಮ್ಸ್ ಮತ್ತು ತಿರುಪತಿಯಲ್ಲಿ ಐಐಟಿಯನ್ನು ಉದ್ಘಾಟಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಸ್ತುವಾರಿ, ಸಂವಹನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ "ಈ ಎರಡೂ ಸಂಸ್ಥೆಗಳು ಮನಮೋಹನ್ ಸಿಂಗ್ ಸರ್ಕಾರವು ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆ, 2014 ರಲ್ಲಿ ಮಾಡಿದ ಬದ್ಧತೆಗಳಾಗಿವೆ. ಸಹಜವಾಗಿ, ಮೋದಿ ಅವರು ಈಗ ಅದರ ಕ್ರೆಡಿಟ್ ಹೇಳುತ್ತಿದ್ದಾರೆ," ಅವರು ಹೇಳಿದರು.
ಫೆಬ್ರವರಿ 20, 2014 ರಂದು ರಾಜ್ಯಸಭೆಯ ಮಹಡಿಯಲ್ಲಿ ಮನಮೋಹನ್ ಸಿಂಗ್ ಅವರು ಬದ್ಧರಾಗಿರುವಂತೆ ಪ್ರಧಾನ ಮಂತ್ರಿಗಳು ಅದರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನವನ್ನು ನೀಡಿದರೆ ಆಂಧ್ರಪ್ರದೇಶಕ್ಕೆ "ನಿಜವಾದ ಬದ್ಧತೆ" ಪ್ರದರ್ಶಿಸಿದಂತೆ ಆಗುತ್ತದೆ ಎಂದು ರಮೇಶ್ ಹೇಳಿದರು.
"ಡಾ. ಮನಮೋಹನ್ ಸಿಂಗ್ ಅವರು ಐದು ವರ್ಷಗಳ ಅವಧಿಗೆ ಈ ವಿಶೇಷ ಸ್ಥಾನಮಾನಕ್ಕೆ ಬದ್ಧರಾಗಿದ್ದರು, ಆಗಿನ ಬಿಜೆಪಿಯ ಮುಂಚೂಣಿ ನಾಯಕ ಎಂ. ವೆಂಕಯ್ಯ ನಾಯ್ಡು ಅವರು ಎದ್ದುನಿಂತು, “ಕೇವಲ ಐದು ವರ್ಷ ಯಾಕೆ? ಬಿಜೆಪಿ ಸರ್ಕಾರವು 10 ವರ್ಷಗಳ ಕಾಲ ನೀಡುತ್ತದೆ” ಎಂದು ಘೋಷಿಸಿದ್ದರು ಎಂದು ಅವರು ವಿವರಿಸಿದರು.
ಈ ಬಗ್ಗೆ ನಾಯ್ಡು ಮತ್ತು ಮೋದಿ ಇಬ್ಬರೂ ಉತ್ತರಿಸಬೇಕು ಎಂದು ರಮೇಶ್ ಹೇಳಿದ್ದಾರೆ.