ಮಹಾರಾಷ್ಟ್ರದಲ್ಲಿ ಭೀಕರ ಪ್ರವಾಹ! ನದಿಯಲ್ಲಿ ಕೊಚ್ಚಿ ಹೋದ 3,000 LPG ಗ್ಯಾಸ್ ಸಿಲಿಂಡರ್ಗಳು
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪಾತಾಳಗಂಗಾ ನದಿಗೆ ಸುಮಾರು 3,000 ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಕೊಚ್ಚಿ ಹೋಗಿವೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಪಾತಾಳಗಂಗಾ ನದಿಗೆ ಸುಮಾರು 3,000 ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳು ಕೊಚ್ಚಿ ಹೋಗಿವೆ. ಹೆಚ್ಪಿಸಿಎಲ್ನ ಎಲ್ಪಿಜಿ ಬಾಟ್ಲಿಂಗ್ ಪ್ಲಾಂಟ್ನ ರಕ್ಷಣಾ ಗೋಡೆ ಕುಸಿದ ಪರಿಣಾಮ, ಪ್ರವಾಹದ ನೀರು ಪ್ಲಾಂಟ್ಗೆ ನುಗ್ಗಿ ಸಾವಿರಾರು ಸಿಲಿಂಡರ್ಗಳನ್ನು ನದಿಗೆ ಎಳೆದುಕೊಂಡು ಹೋಗಿದೆ.
ಅದರಲ್ಲೂ ಕೆಲವು ಸಿಲಿಂಡರ್ಗಳಲ್ಲಿ ಗ್ಯಾಸ್ ತುಂಬಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಯಾರಾದರೂ ಈ ಸಿಲಿಂಡರ್ಗಳು ಸಿಕ್ಕರೆ ಮನೆಗೆ ತೆಗೆದುಕೊಂಡು ಹೋಗಬೇಡಿ... ತೆರೆಯಲು ಪ್ರಯತ್ನಿಸಬೇಡಿ. ಎಂದು ಜಿಲ್ಲಾಧಿಕಾರಿ ಕಿಶನ್ ಜಾವ್ಲೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸದ್ಯ ನದಿಯಲ್ಲಿ ಕೊಚ್ಚಿ ಹೋದ ಸಿಲಿಂಡರ್ಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿದಿದೆ.
Next Story

