Plane Ticket Rate | Good news from the center for air passengers; Break to fears of ticket price hike
x

ಸಾಂದರ್ಭಿಕ ಚಿತ್ರ

Air Ticket Price Hike| ವಿಮಾನ ಪ್ರಯಾಣಿಕರಿಗೆ ಕೇಂದ್ರದಿಂದ ಸಿಹಿ ಸುದ್ದಿ; ಟಿಕೆಟ್ ದರ ಏರಿಕೆಯ ಆತಂಕಕ್ಕೆ ಬ್ರೇಕ್‌

ATF Price Hike| ಏಪ್ರಿಲ್ 1 ರಿಂದ ವಿಮಾನ ಇಂಧನ ಬೆಲೆ ಪ್ರತಿ ಕಿಲೋ ಲೀಟರ್‌ಗೆ 2.07 ಲಕ್ಷ ರೂ. ದಾಟಿದೆ. ಆದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಕೇವಲ ಶೇ. 25 ರಷ್ಟು ಮಾತ್ರ ಬೆಲೆ ಏರಿಕೆ ಜಾರಿಗೆ ತಂದಿದೆ.


Click the Play button to hear this message in audio format

ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿಯ ನಡುವೆ, ಭಾರತದ ವಿಮಾನಯಾನ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದ ನೆರವು ನೀಡಿದೆ. ವಿಮಾನಯಾನ ಇಂಧನ (ATF) ಬೆಲೆಗಳು ಬುಧವಾರ (ಏಪ್ರಿಲ್ 1) ಪ್ರತಿ1 ಕಿಲೋ ಲೀಟರ್‌ (1000 ಲೀಟರ್‌)ಗೆ ದಾಖಲೆಯ 2.07 ಲಕ್ಷ ರೂಪಾಯಿ ದಾಟಿದ್ದರೂ, ಕೇಂದ್ರ ಸರ್ಕಾರವು ಪ್ರಯಾಣಿಕರ ಹಿತದೃಷ್ಟಿಯಿಂದ ಕೇವಲ ಶೇ. 25ರಷ್ಟು ಮಾತ್ರ ಬೆಲೆ ಏರಿಕೆ ಜಾರಿಗೆ ತರಲು ನಿರ್ಧರಿಸಿದೆ.

ಸರ್ಕಾರದ ಈ ನಿರ್ಧಾರಕ್ಕೆ ಕಾರಣವೇನು?

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರು ಈ ಕುರಿತು ಮಾಹಿತಿ ನೀಡಿದ್ದು, ಜಾಗತಿಕ ಶಕ್ತಿ ಅಡೆತಡೆಗಳು ಮತ್ತು 'ಹಾರ್ಮುಜ್ ಜಲಸಂಧಿ' ಮುಚ್ಚಲ್ಪಟ್ಟ ಕಾರಣದಿಂದಾಗಿ ಏಪ್ರಿಲ್ 1 ರಿಂದ ಇಂಧನ ಬೆಲೆಯಲ್ಲಿ ಶೇ. 100 ಕ್ಕಿಂತ ಹೆಚ್ಚು ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ, ವಿಮಾನ ಪ್ರಯಾಣದ ದರಗಳು ಏಕಾಏಕಿ ಹೆಚ್ಚಾಗುವುದನ್ನು ತಡೆಯಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಸಚಿವರು ಹೇಳಿದ್ದೇನು?

ಇಂಧನ ಬೆಲೆಯು ಶೇ. 100ರಷ್ಟು ಹೆಚ್ಚಾಗಬೇಕಿತ್ತು, ಆದರೆ ದೇಶೀಯ ವಿಮಾನಯಾನ ಸಂಸ್ಥೆಗಳ ಮೇಲಿನ ಹೊರೆ ತಗ್ಗಿಸಲು ಕೇವಲ ಶೇ. 25 (ಪ್ರತಿ ಲೀಟರ್‌ಗೆ 15 ರೂ.) ಮಾತ್ರ ಏರಿಕೆ ಮಾಡಲಾಗುತ್ತಿದೆ. ವಿದೇಶಿ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳಿಗೆ ಮಾತ್ರ ಸಂಪೂರ್ಣ ಮಾರುಕಟ್ಟೆ ಆಧಾರಿತ ದರ ಅನ್ವಯವಾಗಲಿದೆ. ಈ ನಿರ್ಧಾರದಿಂದ ಪ್ರಯಾಣಿಕರಿಗೆ ವಿಮಾನ ಟಿಕೆಟ್ ದರದಲ್ಲಿ ಆಗಬಹುದಾದ ಭಾರಿ ಏರಿಕೆಯಿಂದ ರಕ್ಷಣೆ ಸಿಗಲಿದೆ ಎಂದು ನಾಯ್ಡು ಹೇಳಿದ್ದಾರೆ.

ದಾಖಲೆ ಬರೆದ ಇಂಧನ ದರ

ದೆಹಲಿಯಲ್ಲಿ ವಿಮಾನ ಇಂಧನದ ಬೆಲೆಯು ಶೇ. 114.5 ರಷ್ಟು ಏರಿಕೆಯಾಗಿ ಪ್ರತಿ ಕಿಲೋ ಲೀಟರ್‌ಗೆ 2,07,341.22 ರೂಪಾಯಿ ತಲುಪಿದೆ. ಭಾರತದ ಇತಿಹಾಸದಲ್ಲೇ ಎಟಿಎಫ್ ಬೆಲೆ 2 ಲಕ್ಷದ ಗಡಿ ದಾಟಿರುವುದು ಇದೇ ಮೊದಲು. ಮಾರ್ಚ್ 1 ರಂದು ಸಹ ಇಂಧನ ಬೆಲೆ ಏರಿಕೆಯಾಗಿತ್ತು, ಈಗ ಏಪ್ರಿಲ್ ಆರಂಭದಲ್ಲೇ ಮತ್ತೊಂದು ಭಾರಿ ಏರಿಕೆ ಕಂಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 195.50 ರೂಪಾಯಿ ಏರಿಕೆಯಾದ ಬೆನ್ನಲ್ಲೇ ಈ ಇಂಧನ ದರ ಏರಿಕೆಯ ಸುದ್ದಿಯೂ ಹೊರಬಿದ್ದಿದೆ.

ವಿಮಾನಯಾನ ಸಂಸ್ಥೆಗಳ ಮೇಲಿನ ಒತ್ತಡ

ಒಂದು ವಿಮಾನಯಾನ ಸಂಸ್ಥೆಯ ಒಟ್ಟು ಕಾರ್ಯಾಚರಣೆಯ ವೆಚ್ಚದಲ್ಲಿ ಇಂಧನದ ಪಾಲು ಸುಮಾರು ಶೇ. 40 ರಷ್ಟಿರುತ್ತದೆ. ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಈಗಾಗಲೇ ಭಾರತೀಯ ವಿಮಾನಗಳು ಹಲವು ಅಂತರಾಷ್ಟ್ರೀಯ ಮಾರ್ಗಗಳಲ್ಲಿ ದೀರ್ಘ ಹಾದಿಯನ್ನು ಬಳಸಬೇಕಾದ ಅನಿವಾರ್ಯತೆ ಎದುರಿಸುತ್ತಿವೆ. ಇದರಿಂದ ಇಂಧನ ಬಳಕೆ ಹೆಚ್ಚಾಗುತ್ತಿದ್ದು, ಸಂಸ್ಥೆಗಳ ಮೇಲೆ ಆರ್ಥಿಕ ಒತ್ತಡ ಹೆಚ್ಚಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಸಮಯೋಚಿತ ಮಧ್ಯಸ್ಥಿಕೆಯಿಂದಾಗಿ ಈ 'ಹಂತ ಹಂತದ ಬೆಲೆ ಏರಿಕೆ' ಜಾರಿಗೆ ಬಂದಿದೆ ಎಂದು ಸಚಿವರು ಧನ್ಯವಾದ ಅರ್ಪಿಸಿದ್ದಾರೆ.

Read More
Next Story