ವಿಧಾನ‌ ಪರಿಷತ್ ಚುನಾವಣೆ | ಶಿಕ್ಷಕರ, ಪದವೀಧರರ ಕ್ಷೇತ್ರಗಳ ಫಲಿತಾಂಶ ಇಂದು: ಕಣದಲ್ಲಿರುವ ಪ್ರಮುಖರು ಯಾರು?
x

ವಿಧಾನ‌ ಪರಿಷತ್ ಚುನಾವಣೆ | ಶಿಕ್ಷಕರ, ಪದವೀಧರರ ಕ್ಷೇತ್ರಗಳ ಫಲಿತಾಂಶ ಇಂದು: ಕಣದಲ್ಲಿರುವ ಪ್ರಮುಖರು ಯಾರು?


ವಿಧಾನಪರಿಷತ್‌ನ ಮೂರು ಶಿಕ್ಷಕರ ಕ್ಷೇತ್ರ ಹಾಗೂ ಮೂರು ಪದವೀಧರರ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಇಂದು (ಜೂ.6) ಸಂಜೆಯ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ಈ‌ ಚುನಾವಣಾ ಕಣದಲ್ಲಿ ಒಟ್ಟು 78 ಅಭ್ಯರ್ಥಿಗಳಿದ್ದಾರೆ. ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈರುತ್ಯ ಪದವೀಧರರ ಕ್ಷೇತ್ರಗಳ ಮತ ಎಣಿಕೆ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜು ಹಾಗೂ ಈಶಾನ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಕಲಬುರಗಿ ನಗರದ ಗುಲ್ಬರ್ಗ ವಿಶ್ವವಿದ್ಯಾಲಯದ ಹೇಮರೆಡ್ಡಿ ಮಲ್ಲಮ್ಮ ಕಟ್ಟಡದಲ್ಲಿ ನಡೆಯುತ್ತಿದೆ.

ಎಲ್ಲ ಕೇಂದ್ರಗಳಲ್ಲೂ ಮತ ಎಣಿಕೆ ಆರಂಭವಾಗಿದೆ. ಪ್ರಾಶಸ್ತ್ರದ ಮತಗಳ ಎಣಿಕೆ ಮಾಡಬೇಕಿರುವುದರಿಂದ ಫಲಿತಾಂಶ ಹೊರಬೀಳುವುದು ತಡವಾಗುವ ಸಾಧ್ಯತೆ ಇದೆ. ಮೊದಲ ಪ್ರಾಶಸ್ತ್ರದ ಮತಗಳಲ್ಲೇ ಯಾರೊಬ್ಬರೂ ಗೆಲುವು ಸಾಧಿಸದಿದ್ದರೆ, ನಂತರದ ಪ್ರಾಶಸ್ತ್ರದ ಮತಗಳ ಎಣಿಕೆ ನಡೆಸಬೇಕಾಗುತ್ತದೆ. ಹೀಗಾಗಿ ಫಲಿತಾಂಶ ಪ್ರಕಟವಾಗುವುದು ತಡವಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.

ಕಣದಲ್ಲಿರುವ ಪ್ರಮುಖರು

ಬೆಂಗಳೂರು ಪದವೀಧರ ಕ್ಷೇತ್ರ- ರಾಮೋಜಿಗೌಡ - ಕಾಂಗ್ರೆಸ್, ಎ. ದೇವೇಗೌಡ - ಎನ್‌ಡಿಎ

ಆಗ್ನೇಯ ಶಿಕ್ಷಕರ ಕ್ಷೇತ್ರ- ಡಿ.ಟಿ ಶ್ರೀನಿವಾಸ್ - ಕಾಂಗ್ರೆಸ್, ವೈ.ಎ ನಾರಾಯಣ ಸ್ವಾಮಿ - ಎನ್‌ಡಿಎ

ದಕ್ಷಿಣ ಶಿಕ್ಷಕರ ಕ್ಷೇತ್ರ- ಮರಿತಿಬ್ಬೇಗೌಡ - ಕಾಂಗ್ರೆಸ್, ಕೆ. ವಿವೇಕಾನಂದ - ಎನ್‌ಡಿಎ

ನೈರುತ್ಯ ಶಿಕ್ಷಕರ ಕ್ಷೇತ್ರ- ಕೆ.ಕೆ ಮಂಜುನಾಥ್ - ಕಾಂಗ್ರೆಸ್‌, ಎಸ್‌ ಎಲ್ ಬೋಜೇಗೌಡ - ಎನ್‌ಡಿಎ

ನೈರುತ್ಯ ಪದವೀಧರ ಕ್ಷೇತ್ರ- ಆಯನೂರು ಮಂಜುನಾಥ್ - ಕಾಂಗ್ರೆಸ್, ಎಸ್‌ ಪಿ ದಿನೇಶ್-ಕಾಂಗ್ರೆಸ್‌ ಬಂಡಾಯ, ಧನಂಜಯ ಸರ್ಜಿ - ಬಿಜೆಪಿ, ರಘುಪತಿ ಭಟ್ - ಬಿಜೆಪಿ ಬಂಡಾಯ

ಈಶಾನ್ಯ ಪದವೀಧರ ಕ್ಷೇತ್ರ- ಡಾ. ಚಂದ್ರಶೇಖರ್‌ ಪಾಟೀಲ್ - ಕಾಂಗ್ರೆಸ್, ಅಮರನಾಥ್ ಪಾಟೀಲ್ - ಎನ್‌ಡಿಎ

Read More
Next Story