ಮಂತ್ರಾಲಯದಲ್ಲಿ ನೀರಿನ ಕೊರತೆ ಆಗಿಲ್ಲ: ಮಠದ ಸ್ಪಷ್ಟನೆ
x
ಮಂತ್ರಾಲಯದಲ್ಲಿ ನೀರಿನ ಕೊರತೆ ಇಲ್ಲ.

ಮಂತ್ರಾಲಯದಲ್ಲಿ ನೀರಿನ ಕೊರತೆ ಆಗಿಲ್ಲ: ಮಠದ ಸ್ಪಷ್ಟನೆ

ಮಂತ್ರಾಲಯದಲ್ಲಿ ನೀರಿನ ಕೊರತೆ ಆಗಿಲ್ಲ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ಹೇಳಿದ್ದಾರೆ.


ರಾಯಚೂರು: ಮಂತ್ರಾಲಯದಲ್ಲಿ ನೀರಿನ ಕೊರತೆ ಆಗಿಲ್ಲ ಎಂದು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕರು ಹೇಳಿದ್ದಾರೆ.

ಮಠದ ಆವರಣದಲ್ಲಿ ನೀರಿಲ್ಲ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಮಠಾಧೀಶರು ಎಲ್ಲಾ ಉದ್ದೇಶಗಳಿಗೆ ಸಾಕಷ್ಟು ನೀರನ ಸೌಕರ್ಯ ಒದಗಿಸಿದ್ದಾರೆ. ಹೀಗಾಗಿ ಯಾವುದೇ ಹಿಂಜರಿಕೆಯಿಲ್ಲದೆ ಮಂತ್ರಾಲಯಕ್ಕೆ ಬರಬಹುದಾಗಿದೆ ಎಂದು ಹೇಳಿದ್ದಾರೆ.

ಕೆಲವು ಕೊಠಡಿಗಳಿಗೆ ಮಾತ್ರ ಆನ್ಲೈನ್ ಬುಕಿಂಗ್ ಸೌಲಭ್ಯ ಒದಗಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಭಕ್ತರ ಸೌಲಭ್ಯ ಮತ್ತು ಅನುಕೂಲಕ್ಕಾಗಿ ೧೦೦೦ ಕೊಠಡಿಗಳನ್ನು ಆಫ್ಲೈನ್‌ನಲ್ಲಿ ಬುಕಿಂಗ್ ಸೌಲಭ್ಯಕ್ಕೆ ಲಭ್ಯವಿದೆ. ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಕೊಠಡಿ ಹಂಚಲಾಗುತ್ತದೆ ಎಂದು ಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Read More
Next Story