ನಮ್ಮ ಮೆಟ್ರೋ | ಬಟ್ಟೆ ಸರಿ ಇಲ್ಲ ಎಂದು ಒಳ ಬಿಡದೆ ಕಾರ್ಮಿಕನಿಗೆ ಅವಮಾನ
x

ನಮ್ಮ ಮೆಟ್ರೋ | ಬಟ್ಟೆ ಸರಿ ಇಲ್ಲ ಎಂದು ಒಳ ಬಿಡದೆ ಕಾರ್ಮಿಕನಿಗೆ ಅವಮಾನ


ಬೆಂಗಳೂರು: ಬಟ್ಟೆ ಸರಿಯಿಲ್ಲ ಎನ್ನುವ ಕಾರಣಕ್ಕೆ ಕಾರ್ಮಿಕನನ್ನು ಮೆಟ್ರೊದೊಳಗೆ ಹತ್ತಲು ಬಿಡದೆ ಮೆಟ್ರೋ ಸಿಬ್ಬಂದಿ ಅವಮಾನಿಸಿದ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ʻʻಶರ್ಟ್‌ನ ಗುಂಡಿಯನ್ನು ಹಾಕಿಕೊಂಡು ನೀಟಾಗಿ ಬಾ, ಇಲ್ಲದಿದ್ದರೆ ಒಳಗೆ ಪ್ರವೇಶವಿಲ್ಲʼʼ ಎಂದು ಮೆಟ್ರೋ ಸಿಬ್ಬಂದಿ ಕಾರ್ಮಿಕನಿಗೆ ಹೇಳಿದ್ದಾರೆ. ಇದನ್ನು ಕಂಡ ಜನರು ಮೆಟ್ರೋ ಸಿಬ್ಬಂದಿ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ಸಿಬ್ಬಂದಿ ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚಿಗೆ ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಸಿಬ್ಬಂದಿ ರೈತನನ್ನು ಅವಮಾನಿಸಿದ್ದರು. ಬಟ್ಟೆ ಸ್ವಚ್ಛವಾಗಿಲ್ಲ ಎಂಬ ಕಾರಣಕ್ಕೆ ರೈತನನ್ನು ಮೆಟ್ರೋ ಒಳಗೆ ಬಿಡದೆ ಸಿಬ್ಬಂದಿ ಅವಮಾನ ಮಾಡಿದ್ದರು. ಇದು ಸಹ ಪ್ರಯಾಣಿಕನ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ರೈತನನ್ನು ಒಳಗೆ ಬಿಡದ ಸಿಬ್ಬಂದಿ ವಿರುದ್ಧ ಸಹ ಪ್ರಯಾಣಿಕರು ಕಿಡಿಕಾರಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ಧಿ ವೈರಲ್‌ ಆಗಿತ್ತು.

Read More
Next Story