ದೈಹಿಕ ಹಲ್ಲೆ | ಸ್ವಚ್ಛ ಭಾರತ್‌ ಸಮಾಲೋಚಕನ ಮೇಲೆ ಹಲ್ಲೆ ಆರೋಪ: ಜಿಪಂ ಸಿಇಒ ವಿರುದ್ಧ ದೂರು
x
ಹಲ್ಲೆಗೊಳಗಾಗಿರುವ ಸ್ವಚ್ಛ ಭಾರತ್ ಮಿಷನ್ (ಗ್ರಾ) ಐ.ಇ.ಸಿ. ತುಮಕೂರು ಜಿಲ್ಲಾ ಸಮಾಲೋಚಕ

ದೈಹಿಕ ಹಲ್ಲೆ | ಸ್ವಚ್ಛ ಭಾರತ್‌ ಸಮಾಲೋಚಕನ ಮೇಲೆ ಹಲ್ಲೆ ಆರೋಪ: ಜಿಪಂ ಸಿಇಒ ವಿರುದ್ಧ ದೂರು

ತುಮಕೂರು ಜಿಲ್ಲಾ ಸ್ವಚ್ಛ ಭಾರತ್ ಮಿಷನ್‌ ಗ್ರಾಮೀಣ ಸಮಾಲೋಚಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತುಮಕೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.


ತುಮಕೂರು ಜಿಲ್ಲಾ ಸ್ವಚ್ಛ ಭಾರತ್ ಮಿಷನ್‌ ಗ್ರಾಮೀಣ ಸಮಾಲೋಚಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ತುಮಕೂರು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ.

ತುಮಕೂರು ಜಿಲ್ಲಾ ಸ್ವಚ್ಛ ಭಾರತ್ ಮಿಷನ್‌ ಐಇಸಿ ಗ್ರಾಮೀಣ ಸಮಾಲೋಚಕ ರವಿಕುಮಾರ್ ಎಂಬುವರು ತುಮಕೂರು ನಗರ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಸಿಇಒ ವಿರುದ್ಧ ದೂರು ನೀಡಿದ್ದಾರೆ.

"ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ತುಮಕೂರು ಪಂಚಾಯಿತಿ ಸಿಇಒ ಪ್ರಭು ಅವರು ವೈಯುಕ್ತಿಕ ದ್ವೇಷದಿಂದ ಪ್ರತಿ ಸಭೆಯಲ್ಲೂ ತಮ್ಮ ತೇಜೋವಧೆ ಮಾಡುತ್ತಿದ್ದರು. ಗುರುವಾರ ಗ್ರಾಮೀಣಾಭಿವೃದ್ಧಿ ಮತ್ತು ಜಿಲ್ಲಾ ಪಂಚಾಯತ್‌ ರಾಜ್‌ ಇಲಾಖೆಯ ರಾಜ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದ ವಿಡಿಯೋ ಸಂವಾದದ ಸಮಯದಲ್ಲಿ ಕ್ಷುಲ್ಲಕ ಕಾರಣಕ್ಕೆ ದೈಹಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ಪ್ರಜ್ಞಾಹೀನನಾಗಿ ಬಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ" ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

Read More
Next Story